ಕೈಕೊಟ್ಟ ಮಳೆ..ಗೋಶಾಲೆಗಳಿಗೂ ಬರ ಸಂಕಷ್ಟ : ಗೋವುಗಳಿಗೆ ಮೇವಿಲ್ಲದೇ ಗೋಪಾಲಕರ ಪರದಾಟ

ಕೈಕೊಟ್ಟ ಮಳೆ..ಗೋಶಾಲೆಗಳಿಗೂ ಬರ ಸಂಕಷ್ಟ : ಗೋವುಗಳಿಗೆ ಮೇವಿಲ್ಲದೇ ಗೋಪಾಲಕರ ಪರದಾಟ

Published : Nov 03, 2023, 10:37 AM IST

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಕರುನಾಡಲ್ಲಿ ಬರದ ಛಾಯೆ ಆವರಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಬೆಳೆದ ಬೆಳೆ ಕೈಸೇರದೆ ಅನ್ನದಾತರು ಕಂಗಾಲಾಗಿದ್ದಾರೆ. ಇನ್ನೊಂದ್ಕಡೆ ಜಾನುವಾರುಗಳಿಗೂ ಮೇವಿಲ್ಲದೇ ಗೋಪಾಲಕರು  ದಿಕ್ಕು ತೋಚದಂತಾಗಿದ್ದಾರೆ. ಗೋವುಗಳ ಮೇಲಿನ ಕಾಳಜಿಯಿಂದಾಗಿ ಖಾಸಗಿ ಗೋಶಾಲೆ ತೆರೆದಿರುವ ಗೋ ಸೇವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
 

ಮಳೆ ಇಲ್ಲದೇ ಬಿಳಿ ಜೋಳ-ಗೋವಿನ ಜೋಳ ಫಸಲು ಬಂದಿಲ್ಲ. ಜಾನುವಾರುಗಳಿಗೆ ಉಪಯುಕ್ತವಾಗ್ತಿದ್ದ ಮೇವಿನ(Fodder) ಕೊರತೆ ಉಂಟಾಗಿದೆ. ಮಾರ್ಕೆಟ್ನಲ್ಲೂ ಮೇವಿನ ದರ ಡಬಲ್‌  ಆಗಿದೆ. ಇದರಿಂದ ಗೋವುಗಳಿಗೆ ಸಮರ್ಪಕ ಮೇವು ಒದಗಿಸಲಾಗ್ತಿಲ್ಲ. ಏನ್ ಮಾಡೋದು ಎಂದು ಗೋಪಾಲಕರು ಗೋಳಾಡುತ್ತಿದ್ದಾರೆ.ವಿಜಯಪುರ(Vijayapura) ಜಿಲ್ಲೆಯಲ್ಲಿ 1 ಸರ್ಕಾರಿ ಗೋಶಾಲೆ(Goshala) ಹಾಗೂ ಮೂರು ಅನುದಾನಿತ ಗೋಶಾಲೆ ಹಾಗೂ ಖಾಸಗಿ ಗೋಶಾಲೆಗಳು ಸೇರಿ 10ಕ್ಕೂ ಅಧಿಕ ಗೋಶಾಲೆಗಳಿವೆ. ಪ್ರತಿ ಖಾಸಗಿ ಗೋಶಾಲೆಗಳಲ್ಲಿ 20ಕ್ಕೂ ಅಧಿಕ ಗೋವುಗಳಿವೆ. ಸರ್ಕಾರಿ ಗೋಶಾಲೆಗಳ ಜೊತೆಗೆ ಖಾಸಗಿ ಗೋಶಾಲೆಗಳಿಗು ಸರ್ಕಾರ(Government) ಮೇವು ಪೂರೈಸಬೇಕು. ಹೊರ ರಾಜ್ಯಗಳಿಂದಲಾದ್ರು ಮೇವು ತರಿಸಿ ಗೋವುಗಳ ಹಿತಕಾಯಬೇಕು ಎಂದು ಒತ್ತಾಸುತ್ತಿದ್ದಾರೆ. ಗೋವುಗಳ ಸೇವೆ ಮಾಡಬೇಕು ಎಂದು ಗೋಶಾಲೆ ತೆರೆದವರಿಗೆ ಬರ ಶಾಕ್‌ ಕೊಟ್ಟಿದೆ. ಹೀಗಾಗಿ ಸರ್ಕಾರ, ಜಿಲ್ಲಾಡಳಿತ ಖಾಸಗಿ ಗೋಶಾಲೆಗಳ ನೆರವಿಗೆ ಮುಂದಾಗಬೇಕಿದೆ.

ಇದನ್ನೂ ವೀಕ್ಷಿಸಿ:  ಬೆಂಗಳೂರಿನ ಹೈಟೆಕ್ ಹೆರಿಗೆ ಆಸ್ಪತ್ರೆಗೆ ಬೀಗ: ಯಶವಂತಪುರದ ದೊಡ್ಡ ದವಖಾನೆಯೇ ಮೂಲೆಗುಂಪು

23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
Read more