ಮಂತ್ರಾಲಯದಲ್ಲಿ ಬಹುಕೋಟಿ ವೆಚ್ಚದ ಮ್ಯೂಸಿಯಂ ಉದ್ಘಾಟನೆ

Aug 31, 2021, 9:01 AM IST

  ರಾಯಚೂರು (ಆ.31): ರಾಯರ 350ನೇ ಆರಾಧನಾ ಮಹೋತ್ಸವ ಹಿನ್ನೆಲೆ ಬಹುಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ.  ರಾಯರ ಭಕ್ತರ ಬೇಡಿಕೆ ಮೇರೆಗೆ ಮಂತ್ರಾಲಯದಲ್ಲಿ ದಾಸ ಸಾಹಿತ್ಯ ಸಾರುವ ಹೊಸ ಮ್ಯೂಸಿಯಂ ಅತ್ಯಾಕರ್ಷಕವಾಗಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಮ್ಯೂಸಿಯಂ‌ ಸಿದ್ಧವಾಗಿದ್ದು ರಾಯರ ದರ್ಶನ ಬಳಿಕ ಮ್ಯೂಸಿಯಂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 

ಆರಾಧನಾ ಮಹೋತ್ಸವ: ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ

ಎರಡು ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ಸನಾತನ ಧರ್ಮದ ಹತ್ತಾರು ವಿಷಯಗಳು, ವಿಷ್ಣು ಪಾದ, ಗೋ ಮಾತೆ, ದಾಸ ಸಾಹಿತ್ಯ ಸಾರುವಂತಹ ವಸ್ತುಗಳ ವೀಕ್ಷಣೆ ಮಾಡಬಹುದಾಗಿದೆ.  ಈ ಮೂಲಕ ಭಕ್ತಿ ವಿಚಾರದ ಜೊತೆಗೆ ಜ್ಞಾನ ಭಂಡಾರವನ್ನು ಸಾರಲಾಗುತ್ತಿದೆ.