ರೋಗ ನಿರೋಧಕ ಬೇವಿನ ಮರಕ್ಕೇ ಅಂಟಿದ ರೋಗ..! ಅರಣ್ಯ ಸಚಿವರ ತವರಲ್ಲೇ ಅರಣ್ಯರೋಧನ..!

ರೋಗ ನಿರೋಧಕ ಬೇವಿನ ಮರಕ್ಕೇ ಅಂಟಿದ ರೋಗ..! ಅರಣ್ಯ ಸಚಿವರ ತವರಲ್ಲೇ ಅರಣ್ಯರೋಧನ..!

Published : Nov 22, 2023, 10:31 AM IST

ಅರಣ್ಯ ಸಚಿವರ ತವರು ಜಿಲ್ಲೆಯಲ್ಲೇ ಅರಣ್ಯ ಸಂಪತ್ತಿಗೆ ಕುತ್ತುಂಟಾಗಿದೆ. ಬೇವಿನ ಮರಕ್ಕೆ ಹೊಸ ರೋಗ ಅಂಟಿಕೊಂಡಿದೆ. ಜಿಲ್ಲೆಯಾದ್ಯಂತ ಬೇವಿನ ಮರಗಳು ಒಣಗಿ ಹೋಗ್ತಿವೆ.
 

ಒಣಗಿ ನಿಂತಿರೋ ಸಾಲು ಸಾಲು ಬೇವಿನ ಮರಗಳು. ಎಲ್ಲಿ ನೋಡಿದ್ರು ಹಸಿರು ಕಣ್ಮರೆ. ಈ ದೃಶ್ಯ ಕಂಡು ಬಂದಿದ್ದು ಅರಣ್ಯ ಸಚಿವರ ತವರೂರು ಬೀದರ್(Bidar) ಜಿಲ್ಲೆಯಲ್ಲಿ. ಒಂದಲ್ಲ, ಎರಡಲ್ಲ ಬೀದರ್ ಜಿಲ್ಲೆಯಲ್ಲಿ ಕೋಟ್ಯಾಂತರ ಬೇವಿನ ಮರಗಳು(Neem Trees) ಒಣಗಿ ಹೋಗ್ತಿವೆ. ಹಲವು ರೋಗಗಳಿಗೆ ಮದ್ದೆರಯುವ ಬೇವಿನ ಮರಕ್ಕೇ ರೋಗ(disease) ಅಂಟಿರೋದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಬೀದರ್‌ನ ಯುವಕರ ತಂಡವೊಂದು ಸರ್ಕಾರ ಮತ್ತು ಕೃಷಿ ಇಲಾಖೆ ವಿಜ್ಞಾನಿಗಳ ಕಣ್ತೆರೆಸಲು ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇವಿನ ಮರಕ್ಕೆ ಅಂಟಿರುವ ರೋಗದ ಕುರಿತು ಅಭಿಯಾನ ಆರಂಭಿಸಿದ್ದಾರೆ. ಬೇವಿನ ಮರಗಳ ಎಲೆ ಮಾತ್ರವಲ್ಲ, ಬುಡದಿಂದ ಕೊಂಬೆವರೆಗೂ ಸಂಪೂರ್ಣ ಒಣಗಿ ಹೋಗ್ತಿವೆ. ಈ ಕೂಡಲೇ ಕೃಷಿ ಇಲಾಖೆ ಎಚ್ಚೆತ್ತು, ಮರಗಳನ್ನು ಉಳಿಸಬೇಕು, ಬೇವಿನ ಮರಕ್ಕೆ ರೋಗ ಅಂಟಲು ಕಾರಣ ಹುಡುಕಿ, ಜನರ ಆತಂಕ ದೂರ ಮಾಡಬೇಕೆಂದು ಟೀಂ ಯುವ ತಂಡ ಒತ್ತಾಯಿಸಿದೆ. ಬೇವಿನಮರಗಳು ಕೀಟ ಭಾದೆಯಿಂದ ಒಣಗುತ್ತಿವೆ ಎಂದು ಕೃಷಿ ವಿಜ್ಞಾನಿ ಡಾ.ಸುನೀಲ್ ಕುಮಾರ್ ಹೇಳ್ತಿದ್ದಾರೆ.ಔಷಧಿಗಳ ಮೂಲವಾಗಿರುವ ಬೇವಿನ ಮರವೇ ರೋಗಗ್ರಸ್ತವಾಗಿದ್ದು ದುರಂತ. ಜಿಲ್ಲೆಯಲ್ಲಿ ಬೇವಿನ ಮರದ ಸಂತತಿ ಸಂಪೂರ್ಣ ಅಳಿಸಿ ಹೋಗುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಅನ್ನೋದು ಪರಿಸರ ಪ್ರೇಮಿಗಳ ಒತ್ತಾಯ.

ಇದನ್ನೂ ವೀಕ್ಷಿಸಿ:  ಹಿಂದೂ ದೇಗುಲ ಕಟ್ಟಿಸಿದ ಮುಸ್ಲಿಂ ಯುವಕ: ಗಾಳೆಮ್ಮ ದೇವಸ್ಥಾನ ನಿರ್ಮಾಣ ಮಾಡಿದ ಇಮಾಮ್‌ ಸಾಬ್‌ !

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more