Mysuru: ಕೆರೆ‌ ಏರಿ ಒಡೆದು ಹಾಕಿದ ಮೂಡಾ, ಅನುಮಾನ ಮೂಡಿಸಿದೆ ನಡೆ, ಭೂಮಾಫಿಯಾಗೆ ಸಹಾಯ.?

Mysuru: ಕೆರೆ‌ ಏರಿ ಒಡೆದು ಹಾಕಿದ ಮೂಡಾ, ಅನುಮಾನ ಮೂಡಿಸಿದೆ ನಡೆ, ಭೂಮಾಫಿಯಾಗೆ ಸಹಾಯ.?

Published : Dec 01, 2021, 03:10 PM ISTUpdated : Dec 01, 2021, 04:21 PM IST

- ಭಾರೀ ಮಳೆಯಿಂದ  ಕೋಡಿ ಬಿದ್ದಿರುವ ನಗರದ ಕೆರೆ‌ಕಟ್ಟೆಗಳು 

- ಮಳೆಯಿಂದ ತುಂಬಿರುವ 200 ಎಕರೆ ವಿಸ್ತೀರ್ಣದ ಲಿಂಗಾಬುದಿ ಕೆರೆ 

- ತುಂಬಿಹರಿಯುವ ಮುನ್ನವೇ ಲಿಂಗಾಬುದಿ ಕೆರೆ ಏರಿ ಒಡೆದ ಮೂಡಾ

- ಅನುಮಾನ ಮೂಡಿಸಿರುವ ಕೆರೆ‌ ಏರಿ ಒಡೆದು ಹಾಕಿದ  ಮೂಡಾ ನಡೆ
 

ಮೈಸೂರು (ಡಿ. 01):  ಇತ್ತೀಚಿಗೆ ಸುರಿದ ಬಾರಿ ಮಳೆಗೆ (Untimely Rain) ಕೆರೆ ಕಟ್ಟೆಗಳೆಲ್ಲ  (lake)ತುಂಬಿ‌ ಕೋಡಿ ಬಿದ್ದಿವೆ. ಈ ನಡುವೆ ಲಿಂಗಾಬುದಿ ಕೆರೆಯು ಮಳೆಗೆ ತುಂಬಿದೆ. ಆದ್ರೆ ಕೆರೆ ಕೋಡಿ ಬೀಳುವ ಮುನ್ನವೆ ಕೋಡಿ ಒಡೆದಿದ್ದಾರೆ. ಕೆರೆ ಕೋಡಿ ಒಡೆದಕ್ಕೆ ಸಾಕಷ್ಟು ಅನುಮಾನ ಮೂಡಿದೆ. ಅಕ್ರಮ ಲೇಔಟ್ ನವರಿಗೆ ಸಹಾಯ ಮಾಡಲು ಕೆರೆ ತುಂಬುವ ಮುನ್ನವೆ ಕೆರೆ ಕೋಡಿ ಕಿತ್ತಾಕಿದ್ದಾರೆ‌ ಅನ್ನೋ ಆರೋಪ ಕೇಳಿ ಬರುತ್ತಿದೆ.

ಮೈಸೂರಿನ‌ ಶ್ರೀರಾಂಪುರದಲ್ಲಿರುವ 200 ಎಕರೆ ವಿಸ್ತೀರ್ಣದ ಲಿಂಗಾಬುದಿ ಕೆರೆ ಕೂಡ ಭಾರಿ ಮಳೆಗೆ ತುಂಬಿಕೊಂಡಿದೆ. ಇನ್ನು ಎರಡು ಅಡಿ ತುಂಬಿದ್ದರೆ ಕೆರೆ ಸಹಜವಾಗಿಯೆ ಕೋಡಿ ಬೀಳಬೇಕಿತ್ತು.‌ ಆದ್ರೆ ಕೆರೆ ತುಂಬುವ ಮುನ್ನವೆ ಕೆರೆಯ ಏರಿಯನ್ನ ನಾಲ್ಕು ಅಡಿಗಳಷ್ಟು ಕಿತ್ತಾಕಿ ಕೆರೆ ಸಂಪೂರ್ಣ ತುಂಬಲು ಬಿಟ್ಟಿಲ್ಲ. ಇದ್ರಿಂದ ಕೆರೆ ಸಂಪೂರ್ಣವಾಗಿ ತುಂಬಿದ್ದರೆ ಕೆರೆಯ ಹಿನ್ನೀರಿನ ಪ್ರದೇಶದಲ್ಲಿರುವ ಲೇಔಟ್‌ಗಳಿಗೆ ನೀರು ತುಂಬುತಿತ್ತು. ಈ‌ ಕಾರಣದಿಂದಲೇ ಮೂಡದ ಅಧಿಕಾರಿಗಳು ಭೂ ಮಾಫಿಯಾದವರಿಗೆ ಸಹಾಯ ಮಾಡಲು ಕೆರೆ‌ ಏರಿಯನ್ನು ಒಡೆದು ಹಾಕಿ ಇರುವ ನೀರನ್ನು ಸಹ ಖಾಲಿ ಮಾಡಿದ್ದಾರೆ ಅಂತ ಆರೋಪಗಳು ಕೇಳಿ ಬಂದಿದೆ.

ಈ ವಿಚಾರವಾಗಿ ಮುಖ್ಯಮಂತ್ರಿ ರಾಜ್ಯಪಾಲರಿಗು ಪತ್ರ ಬರೆಯಲಾಗಿದೆ. ಸದ್ಯ ಅಧಿಕಾರಿಗಳ ನಡೆಯಂತು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರೋದು ಸತ್ಯ. ‌ಮುಂದೆ ಇದು ತನಿಖೆಯಾದ್ರೆ ಸತ್ಯಾಸತ್ಯತೆ ಹೊರ ಬರಲಿದೆ.

20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more