Mysuru: ಕೆರೆ‌ ಏರಿ ಒಡೆದು ಹಾಕಿದ ಮೂಡಾ, ಅನುಮಾನ ಮೂಡಿಸಿದೆ ನಡೆ, ಭೂಮಾಫಿಯಾಗೆ ಸಹಾಯ.?

Mysuru: ಕೆರೆ‌ ಏರಿ ಒಡೆದು ಹಾಕಿದ ಮೂಡಾ, ಅನುಮಾನ ಮೂಡಿಸಿದೆ ನಡೆ, ಭೂಮಾಫಿಯಾಗೆ ಸಹಾಯ.?

Published : Dec 01, 2021, 03:10 PM ISTUpdated : Dec 01, 2021, 04:21 PM IST

- ಭಾರೀ ಮಳೆಯಿಂದ  ಕೋಡಿ ಬಿದ್ದಿರುವ ನಗರದ ಕೆರೆ‌ಕಟ್ಟೆಗಳು 

- ಮಳೆಯಿಂದ ತುಂಬಿರುವ 200 ಎಕರೆ ವಿಸ್ತೀರ್ಣದ ಲಿಂಗಾಬುದಿ ಕೆರೆ 

- ತುಂಬಿಹರಿಯುವ ಮುನ್ನವೇ ಲಿಂಗಾಬುದಿ ಕೆರೆ ಏರಿ ಒಡೆದ ಮೂಡಾ

- ಅನುಮಾನ ಮೂಡಿಸಿರುವ ಕೆರೆ‌ ಏರಿ ಒಡೆದು ಹಾಕಿದ  ಮೂಡಾ ನಡೆ
 

ಮೈಸೂರು (ಡಿ. 01):  ಇತ್ತೀಚಿಗೆ ಸುರಿದ ಬಾರಿ ಮಳೆಗೆ (Untimely Rain) ಕೆರೆ ಕಟ್ಟೆಗಳೆಲ್ಲ  (lake)ತುಂಬಿ‌ ಕೋಡಿ ಬಿದ್ದಿವೆ. ಈ ನಡುವೆ ಲಿಂಗಾಬುದಿ ಕೆರೆಯು ಮಳೆಗೆ ತುಂಬಿದೆ. ಆದ್ರೆ ಕೆರೆ ಕೋಡಿ ಬೀಳುವ ಮುನ್ನವೆ ಕೋಡಿ ಒಡೆದಿದ್ದಾರೆ. ಕೆರೆ ಕೋಡಿ ಒಡೆದಕ್ಕೆ ಸಾಕಷ್ಟು ಅನುಮಾನ ಮೂಡಿದೆ. ಅಕ್ರಮ ಲೇಔಟ್ ನವರಿಗೆ ಸಹಾಯ ಮಾಡಲು ಕೆರೆ ತುಂಬುವ ಮುನ್ನವೆ ಕೆರೆ ಕೋಡಿ ಕಿತ್ತಾಕಿದ್ದಾರೆ‌ ಅನ್ನೋ ಆರೋಪ ಕೇಳಿ ಬರುತ್ತಿದೆ.

ಮೈಸೂರಿನ‌ ಶ್ರೀರಾಂಪುರದಲ್ಲಿರುವ 200 ಎಕರೆ ವಿಸ್ತೀರ್ಣದ ಲಿಂಗಾಬುದಿ ಕೆರೆ ಕೂಡ ಭಾರಿ ಮಳೆಗೆ ತುಂಬಿಕೊಂಡಿದೆ. ಇನ್ನು ಎರಡು ಅಡಿ ತುಂಬಿದ್ದರೆ ಕೆರೆ ಸಹಜವಾಗಿಯೆ ಕೋಡಿ ಬೀಳಬೇಕಿತ್ತು.‌ ಆದ್ರೆ ಕೆರೆ ತುಂಬುವ ಮುನ್ನವೆ ಕೆರೆಯ ಏರಿಯನ್ನ ನಾಲ್ಕು ಅಡಿಗಳಷ್ಟು ಕಿತ್ತಾಕಿ ಕೆರೆ ಸಂಪೂರ್ಣ ತುಂಬಲು ಬಿಟ್ಟಿಲ್ಲ. ಇದ್ರಿಂದ ಕೆರೆ ಸಂಪೂರ್ಣವಾಗಿ ತುಂಬಿದ್ದರೆ ಕೆರೆಯ ಹಿನ್ನೀರಿನ ಪ್ರದೇಶದಲ್ಲಿರುವ ಲೇಔಟ್‌ಗಳಿಗೆ ನೀರು ತುಂಬುತಿತ್ತು. ಈ‌ ಕಾರಣದಿಂದಲೇ ಮೂಡದ ಅಧಿಕಾರಿಗಳು ಭೂ ಮಾಫಿಯಾದವರಿಗೆ ಸಹಾಯ ಮಾಡಲು ಕೆರೆ‌ ಏರಿಯನ್ನು ಒಡೆದು ಹಾಕಿ ಇರುವ ನೀರನ್ನು ಸಹ ಖಾಲಿ ಮಾಡಿದ್ದಾರೆ ಅಂತ ಆರೋಪಗಳು ಕೇಳಿ ಬಂದಿದೆ.

ಈ ವಿಚಾರವಾಗಿ ಮುಖ್ಯಮಂತ್ರಿ ರಾಜ್ಯಪಾಲರಿಗು ಪತ್ರ ಬರೆಯಲಾಗಿದೆ. ಸದ್ಯ ಅಧಿಕಾರಿಗಳ ನಡೆಯಂತು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರೋದು ಸತ್ಯ. ‌ಮುಂದೆ ಇದು ತನಿಖೆಯಾದ್ರೆ ಸತ್ಯಾಸತ್ಯತೆ ಹೊರ ಬರಲಿದೆ.

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more