ಮೌಲ್ವಿಗಳ ಸರ್ವೆ ಯಾಕೆ? ಶಾಸಕ ಅರವಿಂದ್ ಬೆಲ್ಲದ್ ಕೊಟ್ಟ ಕಾರಣ ಇದು

ಮೌಲ್ವಿಗಳ ಸರ್ವೆ ಯಾಕೆ? ಶಾಸಕ ಅರವಿಂದ್ ಬೆಲ್ಲದ್ ಕೊಟ್ಟ ಕಾರಣ ಇದು

Published : Apr 20, 2022, 02:53 PM IST

*ಮುಸ್ಲಿಮರು ಪ್ರತ್ಯೇಕತೆಯ ಮನೋಭಾವ ಬೆಳೆಸಿಕೊಳ್ತಿದ್ದಾರೆ
*ಉತ್ತರಪ್ರದೇಶ, ಬಿಹಾರ್‌ ಕಡೆಯಿಂದ ಮೌಲ್ವಿಗಳು ಬರ್ತಾರೆ
*ಇಂಥ ಮೌಲ್ವಿಗಳನ್ನು ಅವರ ರಾಜ್ಯಕ್ಕೆ ವಾಪಸ್‌ ಕಳಹಿಸಬೇಕು

ಬೆಂಗಳೂರು (ಏ. 20):  ಹುಬ್ಬಳ್ಳಿ ಹಿಂಸಾಚಾರ ಪ್ರಕರಣ ಬೆನ್ನಲ್ಲೇ ರಾಜ್ಯದಲ್ಲಿರುವ ಎಲ್ಲ ಮೌಲ್ವಿಗಳ ಸರ್ವೇಯಾಗಬೇಕು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆಗ್ರಹಿಸಿದ್ದಾರೆ. ಈ ಬಗ್ಗೆ ಗೃಹ ಸಚಿವರ ಜತೆ ಮಾತನಾಡಿದ್ದೇನೆ ಎಂದು ಬೆಲ್ಲದ್ ಹೇಳಿದ್ದಾರೆ. "ರಾಜ್ಯದ ಮುಸ್ಲಿಮರು ಹಿಂದುಗಳ ಜತೆ ಸಾಮರಸ್ಯದಿಂದ ಇದ್ದರು. ಆದರೆ ಕಳೆದ 10 ವರ್ಷದಿಂದ ಹಿಂದೂ ಮುಸ್ಲಿಂ ಸಾಮರಸ್ಯ ಹಾಳಾಗುತ್ತಿದೆ. ಮುಸ್ಲಿಮರು ಪ್ರತ್ಯೇಕತೆಯ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಉತ್ತರಪ್ರದೇಶ, ಬಿಹಾರ್‌ ಕಡೆಯಿಂದ ಮೌಲ್ವಿಗಳು ಬರ್ತಾರೆ. ಇಂಥ ಮೌಲ್ವಿಗಳನ್ನು ಅವರ ರಾಜ್ಯಕ್ಕೆ ವಾಪಸ್‌ ಕಳಹಿಸಬೇಕು" ಎಂದು ಬೆಲ್ಲದ್‌ ಹೇಳಿದ್ದಾರೆ. 

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಭಾಷಣ ಮಾಡಿದ ವ್ಯಕ್ತಿ ಮೌಲ್ವಿಯಲ್ಲ, ವೇಷಧಾರಿ: ಮುಸ್ಲಿಂ ಮುಖಂಡ

ಇನ್ನು ರಾಜ್ಯದಲ್ಲಿ ಮಸೀದಿ ಹಾಗೂ ಮೌಲ್ವಿಗಳ ಸರ್ವೇಯಾಗಬೇಕು ಎಂದು ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮಸೀದಿಗಳಿಂದಲೇ ಈ ರೀತಿ ಪ್ರಚೋದನೆಯಾಗುತ್ತಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಘಟನೆಯ ದೃಶ್ಯಾವಳಿಗಳನ್ನು ಗಮನಿಸಿದಾಗ ಹಿಂಸಾಚಾರಕ್ಕ ಮೌಲ್ವಿಯೇ ಪ್ರಚೋದನೆ ನೀಡಿರುವುದು ಕಂಡು ಬರುತ್ತಿದೆ. ಹೀಗಾಗಿ ಮೌಲ್ವಿಯ ಹಿನ್ನೆಲೆಯನ್ನು ತನಿಖೆ ಮಾಡಬೇಕಾಗಿ ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more