ದದ್ದಲ್‌ಗೆ ಮುಳುವಾಗುತ್ತಾ ಆಸ್ತಿ ವ್ಯವಹಾರ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ಶಾಸಕರು ಮಾರಾಟ ಮಾಡಿದ್ದು ಏಕೆ?

ದದ್ದಲ್‌ಗೆ ಮುಳುವಾಗುತ್ತಾ ಆಸ್ತಿ ವ್ಯವಹಾರ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ಶಾಸಕರು ಮಾರಾಟ ಮಾಡಿದ್ದು ಏಕೆ?

Published : Jul 16, 2024, 11:49 AM ISTUpdated : Jul 16, 2024, 11:50 AM IST

ರಾಯಚೂರು ತಾ. ಚಂದ್ರಬಂಡಾ ಹೋಬಳಿ ಯಾಪಲದಿನ್ನಿ ಗ್ರಾಮದ ಜಮೀನು
ದದ್ದಲ್ ಮಗಳು ಅನ್ನಪೂರ್ಣ ಹೆಸರಿನ ಜಮೀನು ಕೃಷ್ಣ ನಾಯಕ್ ಹೆಸರಿಗೆ ಬದಲು
ಭೂ ದಾಖಲೆಗಳಲ್ಲಿ ಹೆಸರು ಬದಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರಾ ದದ್ದಲ್?

ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ಇಡಿ  ದಾಳಿ(ED raid) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು(Property documents) ಪತ್ತೆಯಾಗಿವೆ. ದದ್ದಲ್ ಪತ್ನಿ, ಮಗ ಮತ್ತು ಮಗಳ ಹೆಸರಿನ ಜಮೀನಿನ ದಾಖಲೆಗಳು ಪತ್ತೆಯಾಗಿವೆ. ವಾಲ್ಮೀಕಿ ಹಗರಣ ಹೊರಬರುತ್ತಿದ್ದಂತೆ ಜಮೀನಿನ ದಾಖಲೆಗಳು ಬದಲಾಗಿವೆ. ಮಗಳ ಹೆಸರಿನಲ್ಲಿ ಖರೀದಿ ಮಾಡಿದ ಭೂಮಿಯನ್ನು ಬೇರೆಯವರ ಹೆಸರಿಗೆ ಬದಲು ಮಾಡಲಾಗಿದೆ. 9.84 ಎಕರೆ ಭೂಮಿ  5 ತಿಂಗಳಲ್ಲಿ ಬೇರೆಯವರ ಹೆಸರಿಗೆ ಬದಲಾವಣೆ ಮಾಡಲಾಗಿದೆ. ಜನವರಿ 30ರಂದು ದದ್ದಲ್(MLA Basanagouda Daddal) ಕೊನೆಯ ಮಗಳು ಅನ್ನಪೂರ್ಣಗೆ ಭೂಮಿ(Land) ಮ್ಯುಟೇಶನ್ ಮಾಡಲಾಗಿದೆ. ಮೇ.26 ರಂದು ವಾಲ್ಮೀಕಿ ‌ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿ ಆತ್ಮಹತ್ಯೆ ಆಗುತ್ತಿದ್ದಂತೆ ಶಾಸಕ ಬಸನಗೌಡ ದದ್ದಲ್ ಅಲರ್ಟ್ ಆಗಿದ್ದು, ತನ್ನ ಮಗಳ ಹೆಸರಿನಲ್ಲಿ ‌ ಇದ್ದ ಭೂಮಿ ಬೇರೆಯವರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಜೂನ್ 25ರಂದು ಮಗಳ  ಹೆಸರಿನಲ್ಲಿದ್ದ ಭೂಮಿ ಕೃಷ್ಣನಾಯಕ್‌ಗೆ  ಮ್ಯುಟೇಶನ್ ಮಾಡಲಾಗಿದೆ. 5 ಎಕರೆ ಮತ್ತು 3.34 ಗುಂಟೆ ಜಮೀನು ಜೂನ್ 14ರಂದು ಮುಟೇಶನ್ ಮಾಡಲಾಗಿದೆ. ದದ್ದಲ್ ಮಗಳ ಹೆಸರಿನ ಭೂ ದಾಖಲೆ ಬದಲಾವಣೆ ಕುರಿತು ಇ.ಡಿ ಸಮಗ್ರ ತನಿಖೆ ನಡೆಸುತ್ತಿದ್ದು, ದದ್ದಲ್ ಮಗಳ ಹೆಸರಿನ ಭೂಮಿ ಬೇರೆಯವರಿಗೆ ವರ್ಗಾವಣೆ ಮಾಡಿದ್ದು ಏಕೆ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ದದ್ದಲ್ ಮಾರಾಟ ಮಾಡಿದ್ದು ಏಕೆ? ಎಂಬ ಪ್ರಶ್ನೆಗಳು ಇದೀಗ ಕಾಡತೊಡಗಿವೆ.

ಇದನ್ನೂ ವೀಕ್ಷಿಸಿ:  ದರ್ಶನ್ ಗ್ಯಾಂಗ್‌ಗೆ ಪೊಲೀಸರಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್: ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗೆ ಕೊಡಲು ಸಿದ್ಧತೆ !

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more