ದದ್ದಲ್‌ಗೆ ಮುಳುವಾಗುತ್ತಾ ಆಸ್ತಿ ವ್ಯವಹಾರ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ಶಾಸಕರು ಮಾರಾಟ ಮಾಡಿದ್ದು ಏಕೆ?

ದದ್ದಲ್‌ಗೆ ಮುಳುವಾಗುತ್ತಾ ಆಸ್ತಿ ವ್ಯವಹಾರ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ಶಾಸಕರು ಮಾರಾಟ ಮಾಡಿದ್ದು ಏಕೆ?

Published : Jul 16, 2024, 11:49 AM ISTUpdated : Jul 16, 2024, 11:50 AM IST

ರಾಯಚೂರು ತಾ. ಚಂದ್ರಬಂಡಾ ಹೋಬಳಿ ಯಾಪಲದಿನ್ನಿ ಗ್ರಾಮದ ಜಮೀನು
ದದ್ದಲ್ ಮಗಳು ಅನ್ನಪೂರ್ಣ ಹೆಸರಿನ ಜಮೀನು ಕೃಷ್ಣ ನಾಯಕ್ ಹೆಸರಿಗೆ ಬದಲು
ಭೂ ದಾಖಲೆಗಳಲ್ಲಿ ಹೆಸರು ಬದಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರಾ ದದ್ದಲ್?

ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ಇಡಿ  ದಾಳಿ(ED raid) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು(Property documents) ಪತ್ತೆಯಾಗಿವೆ. ದದ್ದಲ್ ಪತ್ನಿ, ಮಗ ಮತ್ತು ಮಗಳ ಹೆಸರಿನ ಜಮೀನಿನ ದಾಖಲೆಗಳು ಪತ್ತೆಯಾಗಿವೆ. ವಾಲ್ಮೀಕಿ ಹಗರಣ ಹೊರಬರುತ್ತಿದ್ದಂತೆ ಜಮೀನಿನ ದಾಖಲೆಗಳು ಬದಲಾಗಿವೆ. ಮಗಳ ಹೆಸರಿನಲ್ಲಿ ಖರೀದಿ ಮಾಡಿದ ಭೂಮಿಯನ್ನು ಬೇರೆಯವರ ಹೆಸರಿಗೆ ಬದಲು ಮಾಡಲಾಗಿದೆ. 9.84 ಎಕರೆ ಭೂಮಿ  5 ತಿಂಗಳಲ್ಲಿ ಬೇರೆಯವರ ಹೆಸರಿಗೆ ಬದಲಾವಣೆ ಮಾಡಲಾಗಿದೆ. ಜನವರಿ 30ರಂದು ದದ್ದಲ್(MLA Basanagouda Daddal) ಕೊನೆಯ ಮಗಳು ಅನ್ನಪೂರ್ಣಗೆ ಭೂಮಿ(Land) ಮ್ಯುಟೇಶನ್ ಮಾಡಲಾಗಿದೆ. ಮೇ.26 ರಂದು ವಾಲ್ಮೀಕಿ ‌ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿ ಆತ್ಮಹತ್ಯೆ ಆಗುತ್ತಿದ್ದಂತೆ ಶಾಸಕ ಬಸನಗೌಡ ದದ್ದಲ್ ಅಲರ್ಟ್ ಆಗಿದ್ದು, ತನ್ನ ಮಗಳ ಹೆಸರಿನಲ್ಲಿ ‌ ಇದ್ದ ಭೂಮಿ ಬೇರೆಯವರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಜೂನ್ 25ರಂದು ಮಗಳ  ಹೆಸರಿನಲ್ಲಿದ್ದ ಭೂಮಿ ಕೃಷ್ಣನಾಯಕ್‌ಗೆ  ಮ್ಯುಟೇಶನ್ ಮಾಡಲಾಗಿದೆ. 5 ಎಕರೆ ಮತ್ತು 3.34 ಗುಂಟೆ ಜಮೀನು ಜೂನ್ 14ರಂದು ಮುಟೇಶನ್ ಮಾಡಲಾಗಿದೆ. ದದ್ದಲ್ ಮಗಳ ಹೆಸರಿನ ಭೂ ದಾಖಲೆ ಬದಲಾವಣೆ ಕುರಿತು ಇ.ಡಿ ಸಮಗ್ರ ತನಿಖೆ ನಡೆಸುತ್ತಿದ್ದು, ದದ್ದಲ್ ಮಗಳ ಹೆಸರಿನ ಭೂಮಿ ಬೇರೆಯವರಿಗೆ ವರ್ಗಾವಣೆ ಮಾಡಿದ್ದು ಏಕೆ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ದದ್ದಲ್ ಮಾರಾಟ ಮಾಡಿದ್ದು ಏಕೆ? ಎಂಬ ಪ್ರಶ್ನೆಗಳು ಇದೀಗ ಕಾಡತೊಡಗಿವೆ.

ಇದನ್ನೂ ವೀಕ್ಷಿಸಿ:  ದರ್ಶನ್ ಗ್ಯಾಂಗ್‌ಗೆ ಪೊಲೀಸರಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್: ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗೆ ಕೊಡಲು ಸಿದ್ಧತೆ !

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more