ದದ್ದಲ್‌ಗೆ ಮುಳುವಾಗುತ್ತಾ ಆಸ್ತಿ ವ್ಯವಹಾರ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ಶಾಸಕರು ಮಾರಾಟ ಮಾಡಿದ್ದು ಏಕೆ?

ದದ್ದಲ್‌ಗೆ ಮುಳುವಾಗುತ್ತಾ ಆಸ್ತಿ ವ್ಯವಹಾರ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ಶಾಸಕರು ಮಾರಾಟ ಮಾಡಿದ್ದು ಏಕೆ?

Published : Jul 16, 2024, 11:49 AM ISTUpdated : Jul 16, 2024, 11:50 AM IST

ರಾಯಚೂರು ತಾ. ಚಂದ್ರಬಂಡಾ ಹೋಬಳಿ ಯಾಪಲದಿನ್ನಿ ಗ್ರಾಮದ ಜಮೀನು
ದದ್ದಲ್ ಮಗಳು ಅನ್ನಪೂರ್ಣ ಹೆಸರಿನ ಜಮೀನು ಕೃಷ್ಣ ನಾಯಕ್ ಹೆಸರಿಗೆ ಬದಲು
ಭೂ ದಾಖಲೆಗಳಲ್ಲಿ ಹೆಸರು ಬದಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರಾ ದದ್ದಲ್?

ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ಇಡಿ  ದಾಳಿ(ED raid) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು(Property documents) ಪತ್ತೆಯಾಗಿವೆ. ದದ್ದಲ್ ಪತ್ನಿ, ಮಗ ಮತ್ತು ಮಗಳ ಹೆಸರಿನ ಜಮೀನಿನ ದಾಖಲೆಗಳು ಪತ್ತೆಯಾಗಿವೆ. ವಾಲ್ಮೀಕಿ ಹಗರಣ ಹೊರಬರುತ್ತಿದ್ದಂತೆ ಜಮೀನಿನ ದಾಖಲೆಗಳು ಬದಲಾಗಿವೆ. ಮಗಳ ಹೆಸರಿನಲ್ಲಿ ಖರೀದಿ ಮಾಡಿದ ಭೂಮಿಯನ್ನು ಬೇರೆಯವರ ಹೆಸರಿಗೆ ಬದಲು ಮಾಡಲಾಗಿದೆ. 9.84 ಎಕರೆ ಭೂಮಿ  5 ತಿಂಗಳಲ್ಲಿ ಬೇರೆಯವರ ಹೆಸರಿಗೆ ಬದಲಾವಣೆ ಮಾಡಲಾಗಿದೆ. ಜನವರಿ 30ರಂದು ದದ್ದಲ್(MLA Basanagouda Daddal) ಕೊನೆಯ ಮಗಳು ಅನ್ನಪೂರ್ಣಗೆ ಭೂಮಿ(Land) ಮ್ಯುಟೇಶನ್ ಮಾಡಲಾಗಿದೆ. ಮೇ.26 ರಂದು ವಾಲ್ಮೀಕಿ ‌ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿ ಆತ್ಮಹತ್ಯೆ ಆಗುತ್ತಿದ್ದಂತೆ ಶಾಸಕ ಬಸನಗೌಡ ದದ್ದಲ್ ಅಲರ್ಟ್ ಆಗಿದ್ದು, ತನ್ನ ಮಗಳ ಹೆಸರಿನಲ್ಲಿ ‌ ಇದ್ದ ಭೂಮಿ ಬೇರೆಯವರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಜೂನ್ 25ರಂದು ಮಗಳ  ಹೆಸರಿನಲ್ಲಿದ್ದ ಭೂಮಿ ಕೃಷ್ಣನಾಯಕ್‌ಗೆ  ಮ್ಯುಟೇಶನ್ ಮಾಡಲಾಗಿದೆ. 5 ಎಕರೆ ಮತ್ತು 3.34 ಗುಂಟೆ ಜಮೀನು ಜೂನ್ 14ರಂದು ಮುಟೇಶನ್ ಮಾಡಲಾಗಿದೆ. ದದ್ದಲ್ ಮಗಳ ಹೆಸರಿನ ಭೂ ದಾಖಲೆ ಬದಲಾವಣೆ ಕುರಿತು ಇ.ಡಿ ಸಮಗ್ರ ತನಿಖೆ ನಡೆಸುತ್ತಿದ್ದು, ದದ್ದಲ್ ಮಗಳ ಹೆಸರಿನ ಭೂಮಿ ಬೇರೆಯವರಿಗೆ ವರ್ಗಾವಣೆ ಮಾಡಿದ್ದು ಏಕೆ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ದದ್ದಲ್ ಮಾರಾಟ ಮಾಡಿದ್ದು ಏಕೆ? ಎಂಬ ಪ್ರಶ್ನೆಗಳು ಇದೀಗ ಕಾಡತೊಡಗಿವೆ.

ಇದನ್ನೂ ವೀಕ್ಷಿಸಿ:  ದರ್ಶನ್ ಗ್ಯಾಂಗ್‌ಗೆ ಪೊಲೀಸರಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್: ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗೆ ಕೊಡಲು ಸಿದ್ಧತೆ !

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more