Big3 ಸ್ಮಶಾನದಲ್ಲೇ‌ ವಾಸ ಮಾಡುವ ಗಟ್ಟಿಗಿತ್ತಿ: ಹೆಣ ಹೂಳುವ ಕೆಲಸ ಮಾಡುವ ನೀಲಮ್ಮ

Big3 ಸ್ಮಶಾನದಲ್ಲೇ‌ ವಾಸ ಮಾಡುವ ಗಟ್ಟಿಗಿತ್ತಿ: ಹೆಣ ಹೂಳುವ ಕೆಲಸ ಮಾಡುವ ನೀಲಮ್ಮ

Published : Feb 11, 2023, 02:28 PM IST

ಸ್ಮಶಾನದ ಗೋರಿಗಳ ನಡುವೆ ಒಬ್ಬರೇ ನಿಂತು ಶವದ ಗುಂಡಿ ಅಗೆಯುವ ನೀಲಮ್ಮ, ಯಾವ ಪುರುಷನಿಗಿಂತ ಕಮ್ಮಿ ಇಲ್ಲ. ಇವರೇ ನಮ್ಮ ಇವತ್ತಿನ ಬಿಗ್ 3 ಹೀರೋ. 
 

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಲಿಂಗಾಯಿತರ ರುದ್ರಭೂಮಿಯಲ್ಲಿ ನೀಲಮ್ಮ ಹೆಣ ಹೂಳುವ ಕೆಲಸ ಮಾಡುತ್ತಿದ್ದು, ಕಳೆದ 24 ವರ್ಷಗಳಿಂದ‌ ಸ್ಮಶಾನದಲ್ಲೇ‌ ವಾಸ ಮಾಡುತ್ತಿದ್ದಾರೆ. ಇಲ್ಲಿವರೆಗೆ ಸರಿ ಸುಮಾರು 5 ಸಾವಿರಕ್ಕೂ ಹೆಚ್ಚು ಶವಗಳಿಗೆ ಗುಂಡಿ ತೋಡಿ ಸೈ ಎನಿಸಿಕೊಂಡಿದ್ದಾರೆ. ಮೊದಲಿನಿಂದಲೂ ನೀಲಮ್ಮ ಪತಿ ಹೆಣ ಹೂಳುವ ಕೆಲಸ ಮಾಡುತ್ತಿದ್ದರು. 1999ರಲ್ಲಿ ಪತಿಯೊಟ್ಟಿಗೆ ನೀಲಮ್ಮ ಕೂಡ ಇದೇ ರುದ್ರಭೂಮಿಗೆ ಬಂದು ವಾಸ ಮಾಡಲು ಶುರು ಮಾಡಿದ್ದಾರೆ. 2005ರಲ್ಲಿ ಪತಿ ತೀರಿಕೊಂಡ ನಂತರ ಎದೆ ಗುಂದದ ನೀಲಮ್ಮ ಹೆಣಗಳಿಗೆ ಗುಂಡಿ ತೆಗೆಯುವ ಕಾರ್ಯವನ್ನ ತಾವೆ ಮಾಡ್ತಿದ್ದಾರೆ. ನೀಲಮ್ಮ ಬರೀ ಶವಗಳಿಗೆ ಗುಂಡಿ ಅಗೆಯುವ ಕೆಲಸ ಮಾತ್ರ ಮಾಡೋದಲ್ಲದೇ ಜೊತೆಗೆ ದೇಹದಾನದ ಮೂಲಕವು ಮಾದರಿ ಆಗಿದ್ದಾರೆ. ನಾನು ಹರಿಶ್ಚಂದ್ರನ ಬಳಿ ಸಾಲ ಪಡೆದಿರಬಹುದು. ಹೀಗಾಗಿ ಬದುಕಿರುವವರೆಗೂ ಈ ಕೆಲಸ ಮುಂದುವರೆಸಿಕೊಂಡು ಹೋಗುತ್ತೇನೆ. ಆದರೆ ಸತ್ತ ನಂತರ ನನ್ನ ದೇಹವನ್ನು ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ದೇಹದಾನ ಮಾಡಿದ್ದೇನೆ ಎನ್ನುತ್ತಾರೆ. ಇಳಿ ವಯಸ್ಸಿನಲ್ಲೂ ಬತ್ತದ ಇವರ ಉತ್ಸಾಹ ನಿಜಕ್ಕೂ ಎಲ್ಲರಿಗೂ ಮಾದರಿ. ಈಗಾಗಿಯೇ ಇವರು ಇಂದಿನ ನಮ್ಮ ಬಿಗ್-3 ಹೀರೋ ಆಗಿ ನಿಮ್ಮ ಮುಂದಿದ್ದಾರೆ.

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?