ಕುಸಿಯುವ ಹಂತದಲ್ಲಿ ಶಾಲಾ ಮೇಲ್ಛಾವಣಿ.. ಸಂಜೆ ಆಗ್ತಿದ್ದಂತೆ ಪುಂಡರ ಅಡ್ಡೆಯಾಗುತ್ತೆ ಶಾಲಾ ಮೈದಾನ!

ಕುಸಿಯುವ ಹಂತದಲ್ಲಿ ಶಾಲಾ ಮೇಲ್ಛಾವಣಿ.. ಸಂಜೆ ಆಗ್ತಿದ್ದಂತೆ ಪುಂಡರ ಅಡ್ಡೆಯಾಗುತ್ತೆ ಶಾಲಾ ಮೈದಾನ!

Published : Nov 22, 2023, 09:56 AM IST

ಆ ಶಾಲೆಯ ಕಟ್ಟಡ ಕಟ್ಟಿ 4 ದಶಕಗಳಾಗುತ್ತ ಬಂದಿದೆ. ಆದರೆ ಶಾಲೆ ಸಮಸ್ಯೆಗಳ ಆಗರವಾಗಿದ್ದು, ಸಾಯಂಕಾಲವಾದರೆ ಪುಂಡ ಪೋಕರಿಗಳ ಅಡ್ಡೆಯಾಗುತ್ತೆ. ಏನದು ಅನ್ನೋದರ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..
 

ಇದು ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಮತ್ತಿಕೆರೆ ಬಿಬಿಎಂಪಿ ಸರ್ಕಾರಿ ಬಾಲಕಿರ ಪ್ರೌಢ ಶಾಲೆ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪರಿಸ್ಥಿತಿ. ಶಾಲಾ(School) ಕಟ್ಟಡ ಕಟ್ಟಿ 40 ವರ್ಷಗಳೇ ಕಳೆದಿದ್ದು.. 500ಕ್ಕೂ ಅಧಿಕ ವಿದ್ಯಾರ್ಥಿನಿಯರು(Students) ವ್ಯಾಸಂಗ ಮಾಡುತ್ತಿದ್ದಾರೆ. ಆದ್ರೆ ಶಾಲೆಯ ಗೇಟ್ ಬಿದ್ದು ಹೋಗಿ ವರ್ಷಗಳೇ ಕಳೆದಿವೆ. ಶಾಲಾ ಕೊಠಡಿಯ ಮೇಲ್ಛಾವಣಿಯ ಸೀಲಿಂಗ್ ಕಿತ್ತು ಹೋಗಿದ್ದು, ಕೆಳಗೆ ಕುಳಿತು ಮಕ್ಕಳು ಪಾಠ ಕೇಳುವಂತಾಗದೆ. ಶಾಲೆಯ ಗೇಟ್ ಇಲ್ಲದ ಪರಿಣಾಮ ಸಾಯಂಕಾಲ ಆದರೆ ಸಾಕು ಪುಂಡ - ಪೋಕರಿಗಳು ಇಲ್ಲಿಗೆ ಬಂದು ಮಧ್ಯಪಾನ(Drink), ಧೂಮಪಾನ ಮಾಡುತ್ತಾರೆ. ಅಷ್ಟೇ ಅಲ್ಲದೇ ಶಾಲಾ ಸಮಯದಲ್ಲೂ ಅದೆಷ್ಟೋ ಬಾರಿ ಗಲಾಟೆ ಕೂಡ ಮಾಡಿದ್ದಾರಂತೆ. ಇನ್ನೊಂದೆಡೆ ಹೈಸ್ಕೂಲ್ ಜೊತೆಗೆ ಕಾಲೇಜು ಕೂಡ ಇರುವ ಕಾರಣ ಇದೇ ಶಾಲಾ ಕಟ್ಟಡ ಮೇಲೆ ಕಾಲೇಜು ಕಟ್ಟಡ ಕಟ್ಟಲು ಬಿವಿಎಂಪಿ ಮುಂದಾಗಿದೆಯಂತೆ. ಈಗಿರುವ ಕಟ್ಟಡ ಮಳೆಗಾಲದಲ್ಲಿ ಸೋರಿಕೆ ಆಗುತ್ತದೆ. ಸಿಲಿಂಗ್ ಕೂಡ ಕಿತ್ತುಕೊಂಡು ಬರುತ್ತಿದೆ. ಹೀಗಾಗಿ ಕಟ್ಟಡ ಬಗ್ಗೆ ಸರಿಯಾದ ಪರಿಶೀಲನೆ ಮಾಡಿ ಕಟ್ಟಡ ಕಟ್ಟಬೇಕು. ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಕೂಡ ಮಾಡಲಾಗಿದೆ . ಆದ್ರು ಕೂಡ ಯಾರೊಬ್ಬರು ಇತ್ತ ಗಮನ ಹರಿಸುತ್ತಿಲ್ಲ. ಈ ಶಾಲಾ ಮಕ್ಕಳಿಗೆ ಸುರಕ್ಷತೆ ಇಲ್ಲ.. ಮೇಲ್ಛಾವಣಿ ಭಾಗ ಕುಸಿದು ಬೀಳುತ್ತಿರುವುದರಿಂದ ಜೀವ ಭಯದಲ್ಲೆ ಪಾಠ ಕಲಿಯುವಂತಾಗಿದೆ. ಇನ್ನಾದ್ರೂ  ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಮಾನಸಿಕ ವ್ಯಥೆ ಕಾಡಲಿದ್ದು, ದಾಂಪತ್ಯದಲ್ಲಿ ಮನಸ್ತಾಪ ಬರಲಿದೆ

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more