ಜೇನಿನೊಂದಿಗೆ ಬದುಕು ಕಟ್ಟಿಕೊಂಡ ಸಾಧಕ ರೈತರ ಕಥೆ

Sep 18, 2021, 9:53 PM IST

 ಮಂಗಳೂರು, (ಸೆ.18): ಹಿಂದೆ ಗಡ್ಡ ಎಳೆದವನಿಗೆ ಮಿಠಾಯಿ ಎಂಬ ಕಥೆ ಕೇಳಿದ್ದೇವೆ. ಆದರೆ ಇಲ್ಲಿ ಗಡ್ಡ ಎಳೆದರೆ ಮಿಠಾಯಿಯಲ್ಲ, ಬದಲಾಗಿ ಸವಿಜೇನು ಸಿಗುತ್ತೆ! ಹೌದು ಆಶ್ಚರ್ಯವಾಯಿತೆ, ಆಶ್ಚರ್ಯವಾದರೂ ಸತ್ಯ. ಇದು ಜೇನುಗಡ್ಡ.  ಜೇನನ್ನು ಕಂಡರೆ ದೂರ ಓಡುವವರ ನೋಡಿದ್ದೇವೆ. ಆದರೆ ಇದು ಜೇನಿನೊಂದಿಗೆ ಬದುಕು ಕಟ್ಟಿಕೊಂಡ ಸಾಧಕ ರೈತರ ಕಥೆ.

6 ಲಕ್ಷ ಜೇನುನೊಣಗಳನ್ನು ಮೈಮೇಲೆ ಬೀಳಿಸಿಕೊಂಡು ರೆಕಾರ್ಡ್ ಬರೆದ ಮಗಧೀರ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು- ಸುಳ್ಯ ತಾಲೂಕಿನ ಗಡಿ ಪೆರ್ನಾಜೆ ನಿವಾಸಿ ಕುಮಾರ ಪೆರ್ನಾಜೆ ಅವರು   ಜೇನಿನೊಂದಿಗೆ ಬದುಕುತ್ತಿದ್ದಾರೆ. ಜೇನುಗಡ್ಡ ಧರಿಸುವ ಮೂಲಕ  ಜೇನಿಲ್ಲದೇ ನಾವಿಲ್ಲ, ಜೇನಿಗೆ ನಾವೇನೂ ಉಪದ್ರ ಮಾಡದಿದ್ದರೆ ಜೇನು ನಮಗೇನೂ ಮಾಡುವುದಿಲ್ಲ ಎಂದು ಜೇನಿನ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
(ವರದಿ: ರಾಘವೇಂದ್ರ ಅಗ್ನಿಹೋತ್ರಿ, ಮಂಗಳೂರು)