Chikkamagalur : ಪತ್ನಿಯನ್ನ ಹುಡುಕಿಕೊಡಿ, ನೊಂದ ಪತಿಯ ಅಳಲು ಕೇಳೋರ್ಯಾರು.!?

Chikkamagalur : ಪತ್ನಿಯನ್ನ ಹುಡುಕಿಕೊಡಿ, ನೊಂದ ಪತಿಯ ಅಳಲು ಕೇಳೋರ್ಯಾರು.!?

Published : Dec 10, 2021, 01:59 PM IST

- ಅಣ್ಣನ ಒತ್ತಾಯಕ್ಕೆ ಮಣಿದು ಆಕೆಯನ್ನ ವರಿಸಿದ! 

- ಮದ್ವೆ ಆದ್ಮೇಲೆ ಗೊತ್ತಾಗಿದ್ದು ತಾನು ಆಕೆಗೆ ನಾಲ್ಕನೇ ಗಂಡ ಅಂತ! 

- ಚಿನ್ನ ಸೇರಿದಂತೆ ಹಣವನ್ನ ದೋಚಿಕೊಂಡು ಪತ್ನಿ ನಾಪತ್ತೆ  

- ಪತ್ನಿಯನ್ನ ಹುಡುಕಿಕೊಡಿ ಅಂತಾ ನೊಂದ ಪತಿಯ ಅಳಲು
 

ಚಿಕ್ಕಮಗಳೂರು (ಡಿ. 10): ಆತ ಜೀವನದಲ್ಲಿ ಮದುವೆಯೇ (Marriage) ಆಗಬಾರದು ಅಂದುಕೊಂಡಿದ್ದ.  ಈ ಮಧ್ಯೆ ತನ್ನ ಅಣ್ಣನ ಒತ್ತಾಯಕ್ಕೆ ಮಣಿದು ಆಕೆಯನ್ನ ವರಿಸಿಬಿಟ್ಟಿದ್ದ. ಹಾಗೇ ಮದ್ವೆ ಆದ್ಮೇಲೆ ಗೊತ್ತಾಗಿದ್ದು ತಾನು ಆಕೆಗೆ ನಾಲ್ಕನೇ ಗಂಡ ಅಂತ..! ಇದನ್ನ ಪ್ರಶ್ನೆ ಮಾಡುತ್ತಲೇ ಆಕೆ ಗಂಡನ ಮನೆಯಿಂದ ಕಾಲ್ಕಿತ್ತಿದ್ದಾಳೆ. ಹಾಗಂತ ಸುಮ್ನೆ ಎಸ್ಕೇಪ್ ಆಗಿಲ್ಲ, ಚಿನ್ನ ಸೇರಿದಂತೆ ಹಣವನ್ನ ದೋಚಿಕೊಂಡು ಹೋಗಿದ್ದಾಳೆ, ಪತ್ನಿಯನ್ನ ಹುಡುಕಿಕೊಡಿ ಅಂತಾ ಅಳಲು ತೋಡಿಕೊಂಡಿದ್ದಾನೆ

ಕಳೆದ ಎರಡು ವರ್ಷಗಳ ಹಿಂದೆ ಈ ವ್ಯಕ್ತಿ ಹಾಸನ (Hassan) ಜಿಲ್ಲೆ ಬೇಲೂರು ತಾಲೂಕಿನ ರಾಮಚಂದ್ರಪುರ ಗ್ರಾಮದ ಉಷಾ ಎಂಬಾಕೆಯನ್ನ ಮದ್ವೆಯಾಗಿದ್ರು.  ಮದುವೆಯಾದ ಮೇಲೆ ಆಕೆಯ ಒಂದೊಂದೇ ಕಥೆಗಳು ಷಡಕ್ಷರಿಗೆ ಗೊತ್ತಾಗಿದೆ.  ಆಕೆಯನ್ನ ಪ್ರಶ್ನೆ ಮಾಡಿದ್ದಕ್ಕೆ ಒಂದು ವಾರದ ಹಿಂದೆ ಷಡಕ್ಷರಿ ಮನೆಯಿಂದ ಉಷಾ ನಾಪತ್ತೆ ಆಗಿದ್ದಾಳೆ. ಅಲ್ಲದೇ ಹೀಗೆ ಮನೆಯಿಂದ ಹೋಗ್ಬೇಕಾದ್ರೆ ಚಿನ್ನ, ಹಣವನ್ನ ಎಗರಿಸಿಕೊಂಡು ಹೋಗಿದ್ದಾಳೆ!

ಪ್ರತಿದಿನ ಹುಡುಕಾಡ ನಡೆಸುತ್ತಿದ್ರೂ ಆಕೆಯ ಸುಳಿವೇ ಪತ್ತೆಯಾಗಿಲ್ಲ. ನನಗೆ ಮೋಸ ಹೋದ್ರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಅದೇ ಒಬ್ಬ ಮಹಿಳೆಗೆ ಮೋಸ ಆಗಿದ್ರೆ ಎಲ್ಲರೂ ಆಕೆಯ ಬೆನ್ನಿಗೆ ನಿಲ್ಲುತ್ತಿದ್ರು. ಇದೀಗ ನನಗೆ ಸಾಥ್ ಕೊಡುವವರು ಯಾರು ಇಲ್ಲ ಅಂತಾ ಷಡಕ್ಷರಿ ನೋವು ತೋಡಿಕೊಂಡಿದ್ದಾನೆ. 

26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more