Shivamogga: ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ, ಮಧ್ಯಾಹ್ನವಾದರೂ ಸೂರ್ಯರಶ್ಮಿ ಬೀಳಲ್ಲ!

Shivamogga: ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ, ಮಧ್ಯಾಹ್ನವಾದರೂ ಸೂರ್ಯರಶ್ಮಿ ಬೀಳಲ್ಲ!

Suvarna News   | Asianet News
Published : Dec 25, 2021, 03:45 PM ISTUpdated : Dec 25, 2021, 04:05 PM IST

ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು,  ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ  ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! 

ಶಿವಮೊಗ್ಗ (ಡಿ. 25):  ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು,  ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ  ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! ಹೌದು ಕಳೆದೊಂದು ವಾರದಿಂದ ಕೊರೆಯುವ ಚಳಿಗೆ  ಮಲೆನಾಡಿನ ನಡುಮನೆ ಶಿವಮೊಗ್ಗ (Shivamogga) ಥಂಡಾ... ಥಂಡಾ... ಕೂಲ್..... ಕೂಲ್... ಆಗಿದೆ. ಕನಿಷ್ಠ 13 ಡಿಗ್ರಿಯಿಂದ 16 ಡಿಗ್ರಿಯವರೆಗೆ ಇರುವ ತಾಪಮಾನ ಜನತೆಯನ್ನು ಬೆಚ್ಚಿ ಬೀಳಿಸಿದೆ. 

ಮಲೆನಾಡಿನಲ್ಲಿ ಚಮು ಚುಮು ಚಳಿ (Winter) ಆರಂಭಗೊಂಡಿದೆ . ಡಿಸೆಂಬರ್ ಮೊದಲನೇ ವಾರದ ವರೆಗೆ ಹಿಂಗಾರು ಮಳೆ ಸುರಿದಿದ್ದು ಈಗ ಶಿವಮೊಗ್ಗದಲ್ಲಿ (Shivamogga) ಸಂಪೂರ್ಣ ಚಳಿ ಆವರಿಸಿಕೊಂಡಿದೆ . ಮಧ್ಯಾಹ್ನ 11 ಗಂಟೆಯಾದರೂ ಚಳಿಯ ಅನುಭವ ಹೋಗುತ್ತಿಲ್ಲ. ಎಳೆ ಬಿಸಿಲಿಗೆ ಮೈವೊಡ್ಡಬೇಕೆಂಬ ಅನುಭವ ಹುಟ್ಟುವುದು ಸಹಜ . ಬೆಳಿಗ್ಗಿನ ಜಾವದ ಹೊತ್ತಿಗೆ 13 ರಿಂದ 16 ಡಿಗ್ರಿ ತಲುಪಿದೆ . ಬೆಳಗ್ಗಿನ ಜಾವ ಬಿದ್ದ ಹಿಮದ ಹತ್ತಿರದಲ್ಲಿರುವ ಮನುಷ್ಯ ಕಾಣದಂತೆ ಅನುಭವ ಮೂಡಿಸಿದೆ .

ಈ ರೀತಿಯ ಚಳಿ ಮುಂದಿನ 15 ದಿನಗಳ ವರೆಗೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ಚಳಿಗೆ ಬೆಚ್ಚಗಿನ ಸ್ವೆಟರ್, ಮಫ್ಲರ್, ಉಲ್ಲನ್, ಟೋಪಿ ಏನೆಲ್ಲಾ ಹಾಕಿದರೂ ಹೊರಗಡೆ ಇರುವವರಿಗೆ ಚಳಿಗೆ ಮುದುರಿಕೊಳ್ಳುವಂತಾಗಿದೆ . ಈ ಚಳಿಗೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರು , ವಾಕಿಂಗ್ ಮಾಡುವವರ  ಪರದಾಟ ಹೇಳ ತೀರದು. ಬಿಸಿ ಬಿಸಿ ಟೀ, ಕಾಫಿ ಕುಡಿದರೂ ಮೈ ಬಿಸಿಯಾಗದೇ ನಡುಗುವಂತಾಗಿದೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಬಿಟ್ಟು ಬಿಟ್ಟು ಮಳೆ ಸುರಿದು ಇದೀಗ ಡಿಸೆಂಬರ್ ನಲ್ಲಿ  ಚಳಿಯ ತೀವ್ರತೆ ಹೆಚ್ಚಾಗಿದೆ. ಜನತೆ ಮಾತ್ರ ಪ್ರಕೃತಿಯ ಈ ವೈಚಿತ್ರ್ಯಕ್ಕೆ ಹೈರಾಣಾಗಿದ್ದಾರೆ

24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
Read more