Shivamogga: ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ, ಮಧ್ಯಾಹ್ನವಾದರೂ ಸೂರ್ಯರಶ್ಮಿ ಬೀಳಲ್ಲ!

Shivamogga: ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ, ಮಧ್ಯಾಹ್ನವಾದರೂ ಸೂರ್ಯರಶ್ಮಿ ಬೀಳಲ್ಲ!

Suvarna News   | Asianet News
Published : Dec 25, 2021, 03:45 PM ISTUpdated : Dec 25, 2021, 04:05 PM IST

ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು,  ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ  ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! 

ಶಿವಮೊಗ್ಗ (ಡಿ. 25):  ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು,  ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ  ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! ಹೌದು ಕಳೆದೊಂದು ವಾರದಿಂದ ಕೊರೆಯುವ ಚಳಿಗೆ  ಮಲೆನಾಡಿನ ನಡುಮನೆ ಶಿವಮೊಗ್ಗ (Shivamogga) ಥಂಡಾ... ಥಂಡಾ... ಕೂಲ್..... ಕೂಲ್... ಆಗಿದೆ. ಕನಿಷ್ಠ 13 ಡಿಗ್ರಿಯಿಂದ 16 ಡಿಗ್ರಿಯವರೆಗೆ ಇರುವ ತಾಪಮಾನ ಜನತೆಯನ್ನು ಬೆಚ್ಚಿ ಬೀಳಿಸಿದೆ. 

ಮಲೆನಾಡಿನಲ್ಲಿ ಚಮು ಚುಮು ಚಳಿ (Winter) ಆರಂಭಗೊಂಡಿದೆ . ಡಿಸೆಂಬರ್ ಮೊದಲನೇ ವಾರದ ವರೆಗೆ ಹಿಂಗಾರು ಮಳೆ ಸುರಿದಿದ್ದು ಈಗ ಶಿವಮೊಗ್ಗದಲ್ಲಿ (Shivamogga) ಸಂಪೂರ್ಣ ಚಳಿ ಆವರಿಸಿಕೊಂಡಿದೆ . ಮಧ್ಯಾಹ್ನ 11 ಗಂಟೆಯಾದರೂ ಚಳಿಯ ಅನುಭವ ಹೋಗುತ್ತಿಲ್ಲ. ಎಳೆ ಬಿಸಿಲಿಗೆ ಮೈವೊಡ್ಡಬೇಕೆಂಬ ಅನುಭವ ಹುಟ್ಟುವುದು ಸಹಜ . ಬೆಳಿಗ್ಗಿನ ಜಾವದ ಹೊತ್ತಿಗೆ 13 ರಿಂದ 16 ಡಿಗ್ರಿ ತಲುಪಿದೆ . ಬೆಳಗ್ಗಿನ ಜಾವ ಬಿದ್ದ ಹಿಮದ ಹತ್ತಿರದಲ್ಲಿರುವ ಮನುಷ್ಯ ಕಾಣದಂತೆ ಅನುಭವ ಮೂಡಿಸಿದೆ .

ಈ ರೀತಿಯ ಚಳಿ ಮುಂದಿನ 15 ದಿನಗಳ ವರೆಗೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ಚಳಿಗೆ ಬೆಚ್ಚಗಿನ ಸ್ವೆಟರ್, ಮಫ್ಲರ್, ಉಲ್ಲನ್, ಟೋಪಿ ಏನೆಲ್ಲಾ ಹಾಕಿದರೂ ಹೊರಗಡೆ ಇರುವವರಿಗೆ ಚಳಿಗೆ ಮುದುರಿಕೊಳ್ಳುವಂತಾಗಿದೆ . ಈ ಚಳಿಗೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರು , ವಾಕಿಂಗ್ ಮಾಡುವವರ  ಪರದಾಟ ಹೇಳ ತೀರದು. ಬಿಸಿ ಬಿಸಿ ಟೀ, ಕಾಫಿ ಕುಡಿದರೂ ಮೈ ಬಿಸಿಯಾಗದೇ ನಡುಗುವಂತಾಗಿದೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಬಿಟ್ಟು ಬಿಟ್ಟು ಮಳೆ ಸುರಿದು ಇದೀಗ ಡಿಸೆಂಬರ್ ನಲ್ಲಿ  ಚಳಿಯ ತೀವ್ರತೆ ಹೆಚ್ಚಾಗಿದೆ. ಜನತೆ ಮಾತ್ರ ಪ್ರಕೃತಿಯ ಈ ವೈಚಿತ್ರ್ಯಕ್ಕೆ ಹೈರಾಣಾಗಿದ್ದಾರೆ

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
Read more