Shivamogga: ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ, ಮಧ್ಯಾಹ್ನವಾದರೂ ಸೂರ್ಯರಶ್ಮಿ ಬೀಳಲ್ಲ!

Shivamogga: ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ, ಮಧ್ಯಾಹ್ನವಾದರೂ ಸೂರ್ಯರಶ್ಮಿ ಬೀಳಲ್ಲ!

Suvarna News   | Asianet News
Published : Dec 25, 2021, 03:45 PM ISTUpdated : Dec 25, 2021, 04:05 PM IST

ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು,  ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ  ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! 

ಶಿವಮೊಗ್ಗ (ಡಿ. 25):  ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು,  ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ  ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! ಹೌದು ಕಳೆದೊಂದು ವಾರದಿಂದ ಕೊರೆಯುವ ಚಳಿಗೆ  ಮಲೆನಾಡಿನ ನಡುಮನೆ ಶಿವಮೊಗ್ಗ (Shivamogga) ಥಂಡಾ... ಥಂಡಾ... ಕೂಲ್..... ಕೂಲ್... ಆಗಿದೆ. ಕನಿಷ್ಠ 13 ಡಿಗ್ರಿಯಿಂದ 16 ಡಿಗ್ರಿಯವರೆಗೆ ಇರುವ ತಾಪಮಾನ ಜನತೆಯನ್ನು ಬೆಚ್ಚಿ ಬೀಳಿಸಿದೆ. 

ಮಲೆನಾಡಿನಲ್ಲಿ ಚಮು ಚುಮು ಚಳಿ (Winter) ಆರಂಭಗೊಂಡಿದೆ . ಡಿಸೆಂಬರ್ ಮೊದಲನೇ ವಾರದ ವರೆಗೆ ಹಿಂಗಾರು ಮಳೆ ಸುರಿದಿದ್ದು ಈಗ ಶಿವಮೊಗ್ಗದಲ್ಲಿ (Shivamogga) ಸಂಪೂರ್ಣ ಚಳಿ ಆವರಿಸಿಕೊಂಡಿದೆ . ಮಧ್ಯಾಹ್ನ 11 ಗಂಟೆಯಾದರೂ ಚಳಿಯ ಅನುಭವ ಹೋಗುತ್ತಿಲ್ಲ. ಎಳೆ ಬಿಸಿಲಿಗೆ ಮೈವೊಡ್ಡಬೇಕೆಂಬ ಅನುಭವ ಹುಟ್ಟುವುದು ಸಹಜ . ಬೆಳಿಗ್ಗಿನ ಜಾವದ ಹೊತ್ತಿಗೆ 13 ರಿಂದ 16 ಡಿಗ್ರಿ ತಲುಪಿದೆ . ಬೆಳಗ್ಗಿನ ಜಾವ ಬಿದ್ದ ಹಿಮದ ಹತ್ತಿರದಲ್ಲಿರುವ ಮನುಷ್ಯ ಕಾಣದಂತೆ ಅನುಭವ ಮೂಡಿಸಿದೆ .

ಈ ರೀತಿಯ ಚಳಿ ಮುಂದಿನ 15 ದಿನಗಳ ವರೆಗೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ಚಳಿಗೆ ಬೆಚ್ಚಗಿನ ಸ್ವೆಟರ್, ಮಫ್ಲರ್, ಉಲ್ಲನ್, ಟೋಪಿ ಏನೆಲ್ಲಾ ಹಾಕಿದರೂ ಹೊರಗಡೆ ಇರುವವರಿಗೆ ಚಳಿಗೆ ಮುದುರಿಕೊಳ್ಳುವಂತಾಗಿದೆ . ಈ ಚಳಿಗೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರು , ವಾಕಿಂಗ್ ಮಾಡುವವರ  ಪರದಾಟ ಹೇಳ ತೀರದು. ಬಿಸಿ ಬಿಸಿ ಟೀ, ಕಾಫಿ ಕುಡಿದರೂ ಮೈ ಬಿಸಿಯಾಗದೇ ನಡುಗುವಂತಾಗಿದೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಬಿಟ್ಟು ಬಿಟ್ಟು ಮಳೆ ಸುರಿದು ಇದೀಗ ಡಿಸೆಂಬರ್ ನಲ್ಲಿ  ಚಳಿಯ ತೀವ್ರತೆ ಹೆಚ್ಚಾಗಿದೆ. ಜನತೆ ಮಾತ್ರ ಪ್ರಕೃತಿಯ ಈ ವೈಚಿತ್ರ್ಯಕ್ಕೆ ಹೈರಾಣಾಗಿದ್ದಾರೆ

25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
Read more