Mahadayi: ಅಧಿಕಾರಿಗಳ ನಿರ್ಲಕ್ಷ್ಯ, ಮಹದಾಯಿ ನೀರು ತರುವಲ್ಲಿ ವಿಳಂಬ, ಮತ್ತೆ ಹೋರಾಟ

Mahadayi: ಅಧಿಕಾರಿಗಳ ನಿರ್ಲಕ್ಷ್ಯ, ಮಹದಾಯಿ ನೀರು ತರುವಲ್ಲಿ ವಿಳಂಬ, ಮತ್ತೆ ಹೋರಾಟ

Suvarna News   | Asianet News
Published : Jan 01, 2022, 12:31 PM ISTUpdated : Jan 01, 2022, 12:54 PM IST

ಕಳೆದ 6 ವರ್ಷದಿಂದ  ಕಳಸಾ ಬಂಡೂರಿ‌ಗಾಗಿ (Kalasa Banduri) ನಡೆದ ಹೋರಾಟ, ಈ ಹೋರಾಟದಲ್ಲಿ ಅದೆಷ್ಟೋ ಹೋರಾಟಗಾರರು ಪೋಲಿಸರ ಬೂಟಿನ ಏಟು , ಲಾಠಿ ಏಟು ತಿಂದು ಹೋರಾಟ ಮಾಡಿದ್ದಾರೆ. ಇನ್ನುಕೂಡಾ ಹೋರಾಟವನ್ನ ಮುಂದುವರೆಸಿದ್ದಾರೆ. 

ಧಾರವಾಡ (ಜ. 01): ಕಳೆದ 6 ವರ್ಷದಿಂದ  ಕಳಸಾ ಬಂಡೂರಿ‌ಗಾಗಿ (Kalasa Banduri) ನಡೆದ ಹೋರಾಟ, ಈ ಹೋರಾಟದಲ್ಲಿ ಅದೆಷ್ಟೋ ಹೋರಾಟಗಾರರು ಪೋಲಿಸರ ಬೂಟಿನ ಏಟು , ಲಾಠಿ ಏಟು ತಿಂದು ಹೋರಾಟ ಮಾಡಿದ್ದಾರೆ ,ಇನ್ನುಕೂಡಾ ಹೋರಾಟವನ್ನ ಮುಂದುವರೆಸಿದ್ದಾರೆ. ಆದರೆ ಅಧಿಕಾರಿಗಳಿಂದಾಗಿ ನೀರು ಹಂಚಿಕೆಯ ಕಾರ್ಯ ವಿಳಂಬವಾಗುತ್ತಿದೆ. ತಮಗೆ ಬರಬೇಕಾದ ತಮ್ಮ ಪಾಲಿನ ನೀರನ್ನ ಪಡೆಯಲು ಮತ್ತೆ ಹೋರಾಟ ಮಾಡಲು ಸಜ್ಜಾಗಿದ್ದಾರೆ..

ಕಳಸಾ- ಬಂಡೂರಿ ಹೋರಾಟ ಆರಂಭವಾಗಿ ಸದ್ಯ 6 ವರ್ಷ ಕಳೆದು ಹೋಗಿದೆ.  ಸರಕಾರಿ ಅಧಿಕಾರಿಗಳು ಸರಿಯಾದ ಮಾಹಿತಿಯನ್ನ ನೀಡದೆ ಇರೋದಕ್ಕೆ ನೀರು ಹಂಚಿಕೆಯ ಕಾರ್ಯ ವಿಳಂಬವಾಗುತ್ತಿದೆ. ಈ ಹಿಂದೆ ಸುಪ್ರೀಂ ಕೋರ್ಟ್‌ (Supreme Court) ಆದೇಶ ಮಾಡಿತ್ತು. ಗೆಜೆಟ್ ನೋಟಿಫಿಕೇಶನ್ (Notification) ಕೂಡಾ ಆಗಿದೆ. ಕೇಂದ್ರದ ಸಿಡಬ್ಲ್ಯೂಸಿ (CWc) ಅವರು ಡ‌್ಯಾಂ  ಕಟ್ಟಲೂ ಪರವಾನಿಗೆಯನ್ನ 2020 ರ ನವೆಂಬರನಲ್ಲಿ ಕೊಟ್ಟಿದ್ದಾರೆ. ಆದರೆ 2021 ನವಂಬರನಲ್ಲಿ ಡ್ಯಾಂ ಕಟ್ಟುವ ಪರವಾನಿಗೆಯನ್ನ ರಿಜೆಕ್ಟ್‌ (Reject) ಮಾಡಿದೆ. 

ಇನ್ನು ರಿಜೆಕ್ಟ್‌ (Reject)ಮಾಡಲೂ ಅಧಿಕಾರಿಗಳು ಕಾರಣ ಎಂದು ಮಹದಾಯಿ ಹೋರಾಟಗಾರ ವಿರೇಶ ಸೊಬರದಮಠ ನಿರಾವರಿ ಕಚೇರಿ ಮುಂದೆ ಹೋರಾಟವನ್ನ‌ ಆರಂಭ ಮಾಡಿದ್ದಾರೆ. ಆದರೆ ನಮ್ಮ ಪಾಲಿಗೆ ಬಂದಂತಹ ಮೂರು‌ವರೆ ಟಿಎಂಸಿ ನೀರು ಬಳಕೆ ಮಾಡಿಕ್ಕೊಳ್ಳಲೂ ಸುಪ್ರಿಂ ಕೋರ್ಟ್‌ ಅನುಮತಿ ಕೊಟ್ಟಿತ್ತು, ಡ್ಯಾಂ ಆದೇಶ ತರಲೂ ಹೋದಾಗ ಅಧಿಕಾರಿಗಳು ಟೆಕ್ನಿಕಲ್ ಪ್ರಾಬ್ಲಂ ಹೇಳಿ ಗೊಂದಲ ಸೃಷ್ಠಿ ಮಾಡಿದ್ದಾರೆ. ಅನುಮಾನ ಬರುವಂತೆ ಸಿಡಬ್ಲ್ಯೂಸಿಗೆ ಮಾಹಿತಿಯನ್ನ ನೀಡಿದ್ದಾರೆ. ಅದಕ್ಕೆ ಕೊಟ್ಟ ಮಾಹಿತಿ ಬಗ್ಗೆ ಅನುಮಾನ ಬಂದು ಡ್ಯಾಂ ಕಟ್ಟಲೂ ಕೊಟ್ಟ ಆದೇಶವನ್ನ ಮತ್ತೆ ರದ್ದು ಮಾಡಿದ್ದಾರೆ. ಆದ್ದರಿಂದ ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗಳನ್ನ ವಜಾ ಮಾಡಬೇಕು ಎಂದು ಹೋರಾಟವನ್ನ ಆರಂಭಿಸಿದ್ದಾರೆ..

ಇನ್ನು ಈ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳನ್ನ ಸಂಪರ್ಕ ಮಾಡಿದರೆ ಪೋನ್ ಮಾತ್ರ ತೆಗೆಯುತ್ತಿಲ್ಲ. ಈ ಕುರಿತು ಅಧಿವೇಶನ ಸಮಯದಲ್ಲಿ ವೀರೇಶ ಸೊಬರದಮಠ ಅವರನ್ನ ಕರೆದು ಚೀಫ್ ಇಂಜಿನಿಯರ್ ಶ್ರೀನಿವಾಸ ಅವರು ಮಾತನಾಡಿದ್ದಾರಂತೆ. ಆದರೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕರೆ ಮಾಡಿ ಪ್ರಶ್ನೆ ಮಾಡಲೂ ಹೋದ್ರೆ ಸಾಹೇಬ್ರು ಪ್ರತಿದಿನಾ ಮೀಟಿಂಗ್ ಮೀಟಿಂಗ್ ಎಂದು ಸಿಗ್ತಾ ಇಲ್ಲ. ಸೋ ಅದೇನಿ ಇರಲಿ ಆದಷ್ಟು ಬೇಗ ಅಧಿಕಾರಿಗಳು ಮಾಡಿದ ತಪ್ಪನ್ನ ತಿದ್ದಿಕ್ಕೊಳ್ಳಬೇಕು, ಇಲ್ಲದಿದ್ರೆ ಅವರು ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವೀರೇಶ ಸೊಬರದಮಠ ಅವರ ಒತ್ತಾಯವಾಗಿದೆ.

ಒಟ್ಟಿನಲ್ಲಿ ದೇವರು ವರ ಕೊಟ್ರೆ ಪೂಜಾರಿ ವರ ಕೊಡ್ತಿಲ್ಲ ಅನ್ನೋ ಹಾಗೆ ಆಗಿದೆ. ಇನ್ನು ಕಳೆದ 6 ವರ್ಷಗಳಿಂದ ನಡೆಯುತ್ತಿರುವ ಕಳಸಾ ಬಂಡೂರಿ ಹೋರಾಟವನ್ನ ರೈತರು ಮಾಡ್ತಿದ್ರೆ ಇತ್ತ ಅಧಿಕಾರಿಗಳು ತಪ್ಪು ಮಾಹಿತಿಯನ್ನ ಕೊಟ್ಟು ಮಹದಾಯಿ ನೀರನ್ನ ತರುವಲ್ಲಿ ವಿಳಂಬ ಮಾಡ್ತಿರೋದು ವಿಪರ್ಯಾಸವೇ ಸರಿ

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more