ಬೆಂಗಳೂರಲ್ಲಿ ಮುಂಜಾನೆಯಿಂದ ಸುರಿದ ಮಳೆಗೆ ಭೂ ಕುಸಿತ, ಎಲ್ಲಿ?

Apr 29, 2020, 1:13 PM IST

ಬೆಂಗಳೂರು(ಏ.29): ಇಂದು(ಬುಧವಾರ) ಬೆಳಿಗ್ಗೆ ನಾಲ್ಕು ಗಂಟೆಯಿಂದ ಸುರಿದ ಮಳೆಯಿಂದ ನಗರದಲ್ಲಿ ಬಹುತೇಕ ರಸ್ತೆಗಳು ಸಂಪೂರ್ಣವಾಗಿನ ಜಲಾವೃತವಾಗಿವೆ. ಮಲ್ಲೇಶ್ವರಂ, ಮೆಜೆಸ್ಟಿಕ್, ನವರಂಗ, ಯಶವಂತಪುರದಲ್ಲಿ ಭಾರಿ ಮಳೆಯಾಗಿದೆ. 

ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರು; ಗುಡುಗು ಸಹಿತ ಧಾರಾಕಾರ ಮಳೆ

ನಿರಂತರವಾಗಿ ಸುರಿದ ಮಳೆಯಿಂದ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದ್ಕಡೆ ಕೊರೋನಾ ಕಾಟವಾದ್ರೆ ಇನ್ನೊಂದೆಡೆ ಮಳೆರಾಯನ ಕಾಟದಿಂದ ನಗರದ ಜನತೆ ಮಾತ್ರೆ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.