ಸರ್ಕಾರಿ ಶಾಲೆ ಮೇಲೆ ಬಿತ್ತು ಭೂ ಬಕಾಸುರರ ಕಣ್ಣು..? ಶಾಲೆ ಭೂಮಿ ಕಬಳಿಸಿ ಬಡಾವಣೆ ನಿರ್ಮಾಣಕ್ಕೆ ಪ್ಲಾನ್!

ಸರ್ಕಾರಿ ಶಾಲೆ ಮೇಲೆ ಬಿತ್ತು ಭೂ ಬಕಾಸುರರ ಕಣ್ಣು..? ಶಾಲೆ ಭೂಮಿ ಕಬಳಿಸಿ ಬಡಾವಣೆ ನಿರ್ಮಾಣಕ್ಕೆ ಪ್ಲಾನ್!

Published : Nov 28, 2023, 10:14 AM IST

ರಾಜ್ಯದ ಹಲವೆಡೆ ಸರಕಾರಿ ಶಾಲೆಗಳನ್ನ ಅಭಿವೃದ್ಧಿಪಡಿಸಬೇಕು. ಕನ್ನಡ ಶಾಲೆಗಳು ಉಳಿಬೇಕು ಬೆಳೀಬೇಕು ಅನ್ನೋ ಹೋರಾಟಗಳು ನಡೀತಿದೆ. ಆದರೆ ಮಂಗಳೂರಿನ ಸರಕಾರಿ ಶಾಲೆಯೊಂದರ ಭೂಮಿಯನ್ನೇ ಕಬಳಿಸೋ ಸಂಚು ನಡೆದಿದೆ.ಶಾಲೆಯೇ ಅಕ್ರಮ ಅಂತ ಖಾಸಗಿ ವ್ಯಕ್ತಿಗಳ ಆರೋಪವಾಗಿದೆ..
 

ಇದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಸಾವಿರಾರು ಮಕ್ಕಳನ್ನ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ರೂಪಿಸಿದ ಹಳೆಯ ವಿದ್ಯಾ ದೇಗುಲ. 26 ವರ್ಷಗಳ ಇತಿಹಾಸ ಇರುವ ಸರ್ಕಾರಿ ಶಾಲೆಗೀಗ ಕುತ್ತು ಬಂದಿದೆ. ಮಂಗಳೂರಿನ(Mangalore) ಸುರತ್ಕಲ್ ಸಮೀಪದ ಕಾನಕಟ್ಲ ಕಾಲೋನಿಯಲ್ಲಿ 1.60 ಎಕರೆಯಲ್ಲಿ ಶಾಲೆ  ನಿರ್ಮಾಣಗಿದೆ. ಇದೇ ಪ್ರಾಥಮಿಕ ಶಾಲೆ ಜಾಗದ ಮೇಲೆ ಭೂ ಮಾಫಿಯಾ(Land Mafia) ಕಣ್ಣು ಬಿದ್ದಿದೆ. ಸರ್ಕಾರಿ ಶಾಲೆಯ ಭೂಮಿಯನ್ನೇ ಕಬಳಿಸಿ ಬಡಾವಣೆ ನಿರ್ಮಾಣಕ್ಕೆ ಪ್ಲಾನ್ ನಡೆದಿದೆ.. ಶಾಲೆಯ ಆಟದ ಮೈದಾನವನ್ನೇ(Play ground) ಲೇಔಟ್ ಆಗಿ ಪರಿವರ್ತಿಸಲು ಹುನ್ನಾರದ ಬಗ್ಗೆ ದೂರು ಕೇಳಿ ಬಂದಿದೆ. ಸರ್ಕಾರಿ ಶಾಲೆ ಉಳಿಸಿಕೊಳ್ಳಲುಲು ಗ್ರಾಮಸ್ಥರ ಹೋರಾಟ(Protest) ಆರಂಭವಾಗಿದೆ. ಸರ್ವೇ ನಂಬರ್ 16ರಲ್ಲಿರುವ 1.60 ಎಕ್ರೆ ಜಾಗವನ್ನು 1996ರಲ್ಲಿ ಮಂಜೂರು ಮಾಡಲಾಗಿತ್ತು.‌ ಆದ್ರೀಗ ಶಾಲೆಯ ಮೈದಾನವನ್ನೇ ಅತಿಕ್ರಮಿಸಿ ಮನೆ ನಿರ್ಮಾಣದ ಜೊತೆ ಬಡಾವಣೆ ಪ್ಲಾನ್ ಮಾಡಲಾಗ್ತಿದೆ ಅನ್ನೋದು ಗ್ರಾಮಸ್ಥರ ಆರೋಪ. ಶಾಲೆಯ‌ ಜಾಗ ಅತಿಕ್ರಮಣ ಸಂಬಂಧ ‌ಜಿಲ್ಲಾಡಳಿತ, ಶಿಕ್ಷಣ ಇಲಾಖೆ ವಿರುದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸ್ತಿದ್ದಾರೆ. ಸಮಗ್ರ ಜಾಗದ ಸರ್ವೇ ನಡೆಸಿ ಭೂ ಮಾಫಿಯಾ ಮಟ್ಟ ಹಾಕಲು ಆಗ್ರಹಿಸಿದ್ದಾರೆ.

ಗ್ರಾಮಸ್ಥರು ಸರ್ವೇ ನಂಬರ್ 16ರಲ್ಲಿರುವ 1.60 ಎಕ್ರೆ ಜಾಗದಲ್ಲಿ ಶಾಲೆ ಕಟ್ಟಲಾಗಿದೆ ಎನ್ನುತ್ತಿದ್ದಾರೆ. ಆದ್ರೆ, ಮೈದಾನದಲ್ಲಿ ಬಡಾವಣೆಗೆ ಸಿದ್ದತೆ ನಡೆಸಿರುವ ಸಂದೀಪ್ ಮಾತ್ರ, ಶಾಲೆ ಕಟ್ಟಿರುವ ಜಾಗ ಸರ್ವೇ ನಂಬರ್ 161 ಆಗಿದ್ದು, ಅದು ನಮ್ಮ ವಂಶಸ್ಥರಿಗೆ ಸೇರಿದೆ ಎನ್ನುತ್ತಿದ್ದಾರೆ. ಹಲವು ವರ್ಷಗಳಿಂದಲೂ ಜಾಗ ನಮ್ಮ ವಂಶಸ್ಥರ ಹೆಸರಿನಲ್ಲಿದೆ ಎಂದು ಸಂದೀಪ್ ವಾದ ಮಾಡ್ತಿದ್ದಾರೆ. ಶಾಲೆಯ ಮೈದಾನ ಇರೋ ಜಾಗ ತಮಗೆ ಸೇರಿದ್ದು ಎನ್ನುವ ವಾದ ಮಾಡುತ್ತಿರುವ ಸಂದೀಪ್ ಕಾನೂನು ಹೋರಾಟಕ್ಕೂ ರೆಡಿ ಎನ್ನುತ್ತಿದ್ದಾರೆ. ಸ್ಥಳೀಯರ ನಿರಂತರ ಹೋರಾಟದ ಬಳಿಕ ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಜಿಲ್ಲಾಡಳಿತ ಸಮಗ್ರ ಸರ್ವೇ ನಡೆಸೋ ಅಗತ್ಯವಿದೆ. ಸದ್ಯ ಎರಡೂ ಕಡೆಯವರು ದಾಖಲೆ ತೋರಿಸ್ತಿದ್ದಾರೆ.. ಆದ್ರಿಂದ ಜಿಲ್ಲಾಡಳಿತ ಸರ್ವೇ ಮಾಡಿ ಅಧಿಕೃತವಾಗಿ ಜಾಗದ ಗುರುತು ಮಾಡಬೇಕಿದೆ.

ಇದನ್ನೂ ವೀಕ್ಷಿಸಿ:  ರಾಜ್ಯ ರಾಜಧಾನಿಯಲ್ಲಿ ಅನ್ನದಾತರ ಕಹಳೆ.. ರೈತ ವಿರೋಧಿ ಕಾಯ್ದೆಗಳ ರದ್ದಿಗೆ ಆಗ್ರಹ

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more