ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

Published : Nov 13, 2023, 10:49 AM IST

ದೇಶಾದ್ಯಂತ ದೀಪಾವಳಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತೆ. ಹಿಂದೂ ಸಂಪ್ರಾಯದಲ್ಲಿ ಬೆಳಕಿನ ಹಬ್ಬ ತನ್ನದೇ ಆದ ವೈಶಿಷ್ಟತೆಯಿಂದ ಕೂಡಿರುತ್ತದೆ. ಉತ್ತರ ಕರ್ನಾಟಕದಲ್ಲಿರುವ  ಲಂಬಾಣಿ ಸಮುದಾಯ ಮಾತ್ರ ಭಿನ್ನ ವಿಭಿನ್ನವಾಗಿರುತ್ತದೆ..
 


ಬಂಜಾರ ಸಮುದಾಯದಲ್ಲಿ ದೀಪಾವಳಿ ಯುವತಿಯರ ಹಬ್ಬವಾಗಿದೆ. ಮದುವೆಯಾಗದ ಕನ್ಯೆಯರು ತಾಂಡಾದ ಎಲ್ಲರ ಮನೆಗಳಿಗೆ ತೆರಳಿ ಅಲ್ಲಿ ದೀಪಗಳನ್ನು(Deepavali) ಬೆಳಗಿಸುವುದು ಪದ್ಧತಿಯಾಗಿದೆ. ಮಣ್ಣಿನ ದೀಪದ ಆರತಿ ಹಿಡಿದುಕೊಂಡು ಮನೆ ಮನೆಗೆ ಹೋಗಿ ಹಾಡು ಹಾಡುತ್ತಾರೆ. ಆ ಮನೆಯವರು ಕನ್ಯೆಯರನ್ನ ಸ್ವಾಗತಿಸಿ ದೀಪದ ತಟ್ಟೆಗೆ  ಹಣ ಹಾಕುತ್ತಾರೆ. ತಾಂಡಾದ ಮುಖ್ಯ ಸ್ಥಳ ಸೇವಾಲಾಲ್ ದೇವಾಲಯದ(Sevalal temple) ಎದುರು ಕನ್ನೆಯರು, ಮಹಿಳೆಯರು ತಮ್ಮ ಸಂಪ್ರದಾಯ ಬದ್ಧ ಹಾಡು ಹೇಳುತ್ತಾ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಅಷ್ಟೆ ಅಲ್ಲದೇ ಮದುವೆ ಫಿಕ್ಸ್ ಆಗಿರುವ  ಯುವತಿಯರನ್ನ ತಬ್ಬಿಕೊಂಡು ಅಳುವುದು  ರೂಡಿಯಲ್ಲಿದೆ. ದೀಪಾವಳಿಯ ಪಾಡ್ಯದ ದಿನ  ತಾಂಡ  ಮಹಿಳೆಯರು(Women) ಹಸುವಿನ ಸಗಣಿಯಿಂದ ಪಂಚ ಪಾಂಡವರ ಮೂರ್ತಿಗಳನ್ನ ತಯಾರಿಸುತ್ತಾರೆ. ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ‌, ಫಸಲಿನ ಹೂವುಗಳನ್ನ ತಂದು ಅಲಂಕರಿಸಿ ಪೂಜಿಸಲಾಗುತ್ತದೆ. ಹೀಗೆ ಸಗಣಿಯಿಂದ‌ ಮಾಡಿದ ಪಾಂಡವರಿಗೆ  ಮೊಸರು ಹಾಕಿ ನೈವೇದ್ಯ ಅರ್ಪಿಸುತ್ತಾರೆ. ದೀಪದ ಆರತಿ‌ ಮೂಲಕ ಇಡೀ ಲಂಬಾಣಿ(Lambni) ಜನಾಂಗವು ಸ್ವಾಗತಿಸುವುದು ಹಬ್ಬದ ಆಚರಣೆಗಳಲ್ಲಿ ಮತ್ತೊಂದು ವೈಶಿಷ್ಟ್ಯ. 15 ದಿನಗಳ‌ ಹಿಂದಿನಿಂದಲೆ ದೀಪಾವಳಿ ಹಬ್ಬಕ್ಕೆ ತಯಾರಿ ಶುರುವಾಗುತ್ತೆ. ಪ್ರತಿನಿತ್ಯ ಸಂಜೆ ಲಂಬಾಣಿ‌ ಸಮುದಾಯದ ಹೆಂಗಳೆಯರೆಲ್ಲ ಸೇವಲಾಲ್ ದೇವಸ್ಥಾನದಲ್ಲಿ ಜಮಾಯಿಸ್ತಾರೆ. ತಾಂಡಗಳಲ್ಲಿನ ಮನೆತನದ ನವ ಯುವತಿಯರಿಗೆ ತಮ್ಮ ಪಾರಂಪರಿಕ ನೃತ್ಯ, ಹಾಡು, ಬಟ್ಟೆಯ ಮೇಲೆ ಕಸೂತಿ ಕಲಿಸುತ್ತಾರೆ. 15 ದಿನಗಳ ಬಳಿಕ ಹಬ್ಬದ ದಿನ ದೇವಸ್ಥಾನದಲ್ಲಿ ಕಸೂತಿ ಮಾಡಿದ್ದ ಬಟ್ಟೆಯನ್ನೇ ಧರಿಸುತ್ತಾರೆ.

ಇದನ್ನೂ ವೀಕ್ಷಿಸಿ:   ಈ ದೀಪಾವಳಿಗೆ ಗ್ರಹಗಳಿಂದಲೇ ಸಿಗಲಿದೆ ಭರ್ಜರಿ ಗಿಫ್ಟ್‌! ಯಾವ ರಾಶಿಗೆ ದೊರೆಯಲಿದೆ ಚಕ್ರವರ್ತಿ ಯೋಗ ?

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!