ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

Published : Nov 13, 2023, 10:49 AM IST

ದೇಶಾದ್ಯಂತ ದೀಪಾವಳಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತೆ. ಹಿಂದೂ ಸಂಪ್ರಾಯದಲ್ಲಿ ಬೆಳಕಿನ ಹಬ್ಬ ತನ್ನದೇ ಆದ ವೈಶಿಷ್ಟತೆಯಿಂದ ಕೂಡಿರುತ್ತದೆ. ಉತ್ತರ ಕರ್ನಾಟಕದಲ್ಲಿರುವ  ಲಂಬಾಣಿ ಸಮುದಾಯ ಮಾತ್ರ ಭಿನ್ನ ವಿಭಿನ್ನವಾಗಿರುತ್ತದೆ..
 


ಬಂಜಾರ ಸಮುದಾಯದಲ್ಲಿ ದೀಪಾವಳಿ ಯುವತಿಯರ ಹಬ್ಬವಾಗಿದೆ. ಮದುವೆಯಾಗದ ಕನ್ಯೆಯರು ತಾಂಡಾದ ಎಲ್ಲರ ಮನೆಗಳಿಗೆ ತೆರಳಿ ಅಲ್ಲಿ ದೀಪಗಳನ್ನು(Deepavali) ಬೆಳಗಿಸುವುದು ಪದ್ಧತಿಯಾಗಿದೆ. ಮಣ್ಣಿನ ದೀಪದ ಆರತಿ ಹಿಡಿದುಕೊಂಡು ಮನೆ ಮನೆಗೆ ಹೋಗಿ ಹಾಡು ಹಾಡುತ್ತಾರೆ. ಆ ಮನೆಯವರು ಕನ್ಯೆಯರನ್ನ ಸ್ವಾಗತಿಸಿ ದೀಪದ ತಟ್ಟೆಗೆ  ಹಣ ಹಾಕುತ್ತಾರೆ. ತಾಂಡಾದ ಮುಖ್ಯ ಸ್ಥಳ ಸೇವಾಲಾಲ್ ದೇವಾಲಯದ(Sevalal temple) ಎದುರು ಕನ್ನೆಯರು, ಮಹಿಳೆಯರು ತಮ್ಮ ಸಂಪ್ರದಾಯ ಬದ್ಧ ಹಾಡು ಹೇಳುತ್ತಾ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಅಷ್ಟೆ ಅಲ್ಲದೇ ಮದುವೆ ಫಿಕ್ಸ್ ಆಗಿರುವ  ಯುವತಿಯರನ್ನ ತಬ್ಬಿಕೊಂಡು ಅಳುವುದು  ರೂಡಿಯಲ್ಲಿದೆ. ದೀಪಾವಳಿಯ ಪಾಡ್ಯದ ದಿನ  ತಾಂಡ  ಮಹಿಳೆಯರು(Women) ಹಸುವಿನ ಸಗಣಿಯಿಂದ ಪಂಚ ಪಾಂಡವರ ಮೂರ್ತಿಗಳನ್ನ ತಯಾರಿಸುತ್ತಾರೆ. ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ‌, ಫಸಲಿನ ಹೂವುಗಳನ್ನ ತಂದು ಅಲಂಕರಿಸಿ ಪೂಜಿಸಲಾಗುತ್ತದೆ. ಹೀಗೆ ಸಗಣಿಯಿಂದ‌ ಮಾಡಿದ ಪಾಂಡವರಿಗೆ  ಮೊಸರು ಹಾಕಿ ನೈವೇದ್ಯ ಅರ್ಪಿಸುತ್ತಾರೆ. ದೀಪದ ಆರತಿ‌ ಮೂಲಕ ಇಡೀ ಲಂಬಾಣಿ(Lambni) ಜನಾಂಗವು ಸ್ವಾಗತಿಸುವುದು ಹಬ್ಬದ ಆಚರಣೆಗಳಲ್ಲಿ ಮತ್ತೊಂದು ವೈಶಿಷ್ಟ್ಯ. 15 ದಿನಗಳ‌ ಹಿಂದಿನಿಂದಲೆ ದೀಪಾವಳಿ ಹಬ್ಬಕ್ಕೆ ತಯಾರಿ ಶುರುವಾಗುತ್ತೆ. ಪ್ರತಿನಿತ್ಯ ಸಂಜೆ ಲಂಬಾಣಿ‌ ಸಮುದಾಯದ ಹೆಂಗಳೆಯರೆಲ್ಲ ಸೇವಲಾಲ್ ದೇವಸ್ಥಾನದಲ್ಲಿ ಜಮಾಯಿಸ್ತಾರೆ. ತಾಂಡಗಳಲ್ಲಿನ ಮನೆತನದ ನವ ಯುವತಿಯರಿಗೆ ತಮ್ಮ ಪಾರಂಪರಿಕ ನೃತ್ಯ, ಹಾಡು, ಬಟ್ಟೆಯ ಮೇಲೆ ಕಸೂತಿ ಕಲಿಸುತ್ತಾರೆ. 15 ದಿನಗಳ ಬಳಿಕ ಹಬ್ಬದ ದಿನ ದೇವಸ್ಥಾನದಲ್ಲಿ ಕಸೂತಿ ಮಾಡಿದ್ದ ಬಟ್ಟೆಯನ್ನೇ ಧರಿಸುತ್ತಾರೆ.

ಇದನ್ನೂ ವೀಕ್ಷಿಸಿ:   ಈ ದೀಪಾವಳಿಗೆ ಗ್ರಹಗಳಿಂದಲೇ ಸಿಗಲಿದೆ ಭರ್ಜರಿ ಗಿಫ್ಟ್‌! ಯಾವ ರಾಶಿಗೆ ದೊರೆಯಲಿದೆ ಚಕ್ರವರ್ತಿ ಯೋಗ ?

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?