ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

Published : Nov 13, 2023, 10:49 AM IST

ದೇಶಾದ್ಯಂತ ದೀಪಾವಳಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತೆ. ಹಿಂದೂ ಸಂಪ್ರಾಯದಲ್ಲಿ ಬೆಳಕಿನ ಹಬ್ಬ ತನ್ನದೇ ಆದ ವೈಶಿಷ್ಟತೆಯಿಂದ ಕೂಡಿರುತ್ತದೆ. ಉತ್ತರ ಕರ್ನಾಟಕದಲ್ಲಿರುವ  ಲಂಬಾಣಿ ಸಮುದಾಯ ಮಾತ್ರ ಭಿನ್ನ ವಿಭಿನ್ನವಾಗಿರುತ್ತದೆ..
 


ಬಂಜಾರ ಸಮುದಾಯದಲ್ಲಿ ದೀಪಾವಳಿ ಯುವತಿಯರ ಹಬ್ಬವಾಗಿದೆ. ಮದುವೆಯಾಗದ ಕನ್ಯೆಯರು ತಾಂಡಾದ ಎಲ್ಲರ ಮನೆಗಳಿಗೆ ತೆರಳಿ ಅಲ್ಲಿ ದೀಪಗಳನ್ನು(Deepavali) ಬೆಳಗಿಸುವುದು ಪದ್ಧತಿಯಾಗಿದೆ. ಮಣ್ಣಿನ ದೀಪದ ಆರತಿ ಹಿಡಿದುಕೊಂಡು ಮನೆ ಮನೆಗೆ ಹೋಗಿ ಹಾಡು ಹಾಡುತ್ತಾರೆ. ಆ ಮನೆಯವರು ಕನ್ಯೆಯರನ್ನ ಸ್ವಾಗತಿಸಿ ದೀಪದ ತಟ್ಟೆಗೆ  ಹಣ ಹಾಕುತ್ತಾರೆ. ತಾಂಡಾದ ಮುಖ್ಯ ಸ್ಥಳ ಸೇವಾಲಾಲ್ ದೇವಾಲಯದ(Sevalal temple) ಎದುರು ಕನ್ನೆಯರು, ಮಹಿಳೆಯರು ತಮ್ಮ ಸಂಪ್ರದಾಯ ಬದ್ಧ ಹಾಡು ಹೇಳುತ್ತಾ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಅಷ್ಟೆ ಅಲ್ಲದೇ ಮದುವೆ ಫಿಕ್ಸ್ ಆಗಿರುವ  ಯುವತಿಯರನ್ನ ತಬ್ಬಿಕೊಂಡು ಅಳುವುದು  ರೂಡಿಯಲ್ಲಿದೆ. ದೀಪಾವಳಿಯ ಪಾಡ್ಯದ ದಿನ  ತಾಂಡ  ಮಹಿಳೆಯರು(Women) ಹಸುವಿನ ಸಗಣಿಯಿಂದ ಪಂಚ ಪಾಂಡವರ ಮೂರ್ತಿಗಳನ್ನ ತಯಾರಿಸುತ್ತಾರೆ. ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ‌, ಫಸಲಿನ ಹೂವುಗಳನ್ನ ತಂದು ಅಲಂಕರಿಸಿ ಪೂಜಿಸಲಾಗುತ್ತದೆ. ಹೀಗೆ ಸಗಣಿಯಿಂದ‌ ಮಾಡಿದ ಪಾಂಡವರಿಗೆ  ಮೊಸರು ಹಾಕಿ ನೈವೇದ್ಯ ಅರ್ಪಿಸುತ್ತಾರೆ. ದೀಪದ ಆರತಿ‌ ಮೂಲಕ ಇಡೀ ಲಂಬಾಣಿ(Lambni) ಜನಾಂಗವು ಸ್ವಾಗತಿಸುವುದು ಹಬ್ಬದ ಆಚರಣೆಗಳಲ್ಲಿ ಮತ್ತೊಂದು ವೈಶಿಷ್ಟ್ಯ. 15 ದಿನಗಳ‌ ಹಿಂದಿನಿಂದಲೆ ದೀಪಾವಳಿ ಹಬ್ಬಕ್ಕೆ ತಯಾರಿ ಶುರುವಾಗುತ್ತೆ. ಪ್ರತಿನಿತ್ಯ ಸಂಜೆ ಲಂಬಾಣಿ‌ ಸಮುದಾಯದ ಹೆಂಗಳೆಯರೆಲ್ಲ ಸೇವಲಾಲ್ ದೇವಸ್ಥಾನದಲ್ಲಿ ಜಮಾಯಿಸ್ತಾರೆ. ತಾಂಡಗಳಲ್ಲಿನ ಮನೆತನದ ನವ ಯುವತಿಯರಿಗೆ ತಮ್ಮ ಪಾರಂಪರಿಕ ನೃತ್ಯ, ಹಾಡು, ಬಟ್ಟೆಯ ಮೇಲೆ ಕಸೂತಿ ಕಲಿಸುತ್ತಾರೆ. 15 ದಿನಗಳ ಬಳಿಕ ಹಬ್ಬದ ದಿನ ದೇವಸ್ಥಾನದಲ್ಲಿ ಕಸೂತಿ ಮಾಡಿದ್ದ ಬಟ್ಟೆಯನ್ನೇ ಧರಿಸುತ್ತಾರೆ.

ಇದನ್ನೂ ವೀಕ್ಷಿಸಿ:   ಈ ದೀಪಾವಳಿಗೆ ಗ್ರಹಗಳಿಂದಲೇ ಸಿಗಲಿದೆ ಭರ್ಜರಿ ಗಿಫ್ಟ್‌! ಯಾವ ರಾಶಿಗೆ ದೊರೆಯಲಿದೆ ಚಕ್ರವರ್ತಿ ಯೋಗ ?

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!