ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

Published : Nov 13, 2023, 10:49 AM IST

ದೇಶಾದ್ಯಂತ ದೀಪಾವಳಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತೆ. ಹಿಂದೂ ಸಂಪ್ರಾಯದಲ್ಲಿ ಬೆಳಕಿನ ಹಬ್ಬ ತನ್ನದೇ ಆದ ವೈಶಿಷ್ಟತೆಯಿಂದ ಕೂಡಿರುತ್ತದೆ. ಉತ್ತರ ಕರ್ನಾಟಕದಲ್ಲಿರುವ  ಲಂಬಾಣಿ ಸಮುದಾಯ ಮಾತ್ರ ಭಿನ್ನ ವಿಭಿನ್ನವಾಗಿರುತ್ತದೆ..
 


ಬಂಜಾರ ಸಮುದಾಯದಲ್ಲಿ ದೀಪಾವಳಿ ಯುವತಿಯರ ಹಬ್ಬವಾಗಿದೆ. ಮದುವೆಯಾಗದ ಕನ್ಯೆಯರು ತಾಂಡಾದ ಎಲ್ಲರ ಮನೆಗಳಿಗೆ ತೆರಳಿ ಅಲ್ಲಿ ದೀಪಗಳನ್ನು(Deepavali) ಬೆಳಗಿಸುವುದು ಪದ್ಧತಿಯಾಗಿದೆ. ಮಣ್ಣಿನ ದೀಪದ ಆರತಿ ಹಿಡಿದುಕೊಂಡು ಮನೆ ಮನೆಗೆ ಹೋಗಿ ಹಾಡು ಹಾಡುತ್ತಾರೆ. ಆ ಮನೆಯವರು ಕನ್ಯೆಯರನ್ನ ಸ್ವಾಗತಿಸಿ ದೀಪದ ತಟ್ಟೆಗೆ  ಹಣ ಹಾಕುತ್ತಾರೆ. ತಾಂಡಾದ ಮುಖ್ಯ ಸ್ಥಳ ಸೇವಾಲಾಲ್ ದೇವಾಲಯದ(Sevalal temple) ಎದುರು ಕನ್ನೆಯರು, ಮಹಿಳೆಯರು ತಮ್ಮ ಸಂಪ್ರದಾಯ ಬದ್ಧ ಹಾಡು ಹೇಳುತ್ತಾ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಅಷ್ಟೆ ಅಲ್ಲದೇ ಮದುವೆ ಫಿಕ್ಸ್ ಆಗಿರುವ  ಯುವತಿಯರನ್ನ ತಬ್ಬಿಕೊಂಡು ಅಳುವುದು  ರೂಡಿಯಲ್ಲಿದೆ. ದೀಪಾವಳಿಯ ಪಾಡ್ಯದ ದಿನ  ತಾಂಡ  ಮಹಿಳೆಯರು(Women) ಹಸುವಿನ ಸಗಣಿಯಿಂದ ಪಂಚ ಪಾಂಡವರ ಮೂರ್ತಿಗಳನ್ನ ತಯಾರಿಸುತ್ತಾರೆ. ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ‌, ಫಸಲಿನ ಹೂವುಗಳನ್ನ ತಂದು ಅಲಂಕರಿಸಿ ಪೂಜಿಸಲಾಗುತ್ತದೆ. ಹೀಗೆ ಸಗಣಿಯಿಂದ‌ ಮಾಡಿದ ಪಾಂಡವರಿಗೆ  ಮೊಸರು ಹಾಕಿ ನೈವೇದ್ಯ ಅರ್ಪಿಸುತ್ತಾರೆ. ದೀಪದ ಆರತಿ‌ ಮೂಲಕ ಇಡೀ ಲಂಬಾಣಿ(Lambni) ಜನಾಂಗವು ಸ್ವಾಗತಿಸುವುದು ಹಬ್ಬದ ಆಚರಣೆಗಳಲ್ಲಿ ಮತ್ತೊಂದು ವೈಶಿಷ್ಟ್ಯ. 15 ದಿನಗಳ‌ ಹಿಂದಿನಿಂದಲೆ ದೀಪಾವಳಿ ಹಬ್ಬಕ್ಕೆ ತಯಾರಿ ಶುರುವಾಗುತ್ತೆ. ಪ್ರತಿನಿತ್ಯ ಸಂಜೆ ಲಂಬಾಣಿ‌ ಸಮುದಾಯದ ಹೆಂಗಳೆಯರೆಲ್ಲ ಸೇವಲಾಲ್ ದೇವಸ್ಥಾನದಲ್ಲಿ ಜಮಾಯಿಸ್ತಾರೆ. ತಾಂಡಗಳಲ್ಲಿನ ಮನೆತನದ ನವ ಯುವತಿಯರಿಗೆ ತಮ್ಮ ಪಾರಂಪರಿಕ ನೃತ್ಯ, ಹಾಡು, ಬಟ್ಟೆಯ ಮೇಲೆ ಕಸೂತಿ ಕಲಿಸುತ್ತಾರೆ. 15 ದಿನಗಳ ಬಳಿಕ ಹಬ್ಬದ ದಿನ ದೇವಸ್ಥಾನದಲ್ಲಿ ಕಸೂತಿ ಮಾಡಿದ್ದ ಬಟ್ಟೆಯನ್ನೇ ಧರಿಸುತ್ತಾರೆ.

ಇದನ್ನೂ ವೀಕ್ಷಿಸಿ:   ಈ ದೀಪಾವಳಿಗೆ ಗ್ರಹಗಳಿಂದಲೇ ಸಿಗಲಿದೆ ಭರ್ಜರಿ ಗಿಫ್ಟ್‌! ಯಾವ ರಾಶಿಗೆ ದೊರೆಯಲಿದೆ ಚಕ್ರವರ್ತಿ ಯೋಗ ?

25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!