ಬಾರದ ಲೋಕಕ್ಕೆ ತೆರಳಿದ ಅಪ್ಪು: ಕಣ್ಣೀರಲ್ಲೇ ಕೈತೊಳೆಯುತ್ತಿರವ ಅಂಧ ಸಹೋದರಿಯರು

Nov 11, 2021, 12:11 PM IST

ಕೊಪ್ಪಳ(ನ.11): ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದಿಂದ ಲೋಕ ನೋಡುವ ಕನಸು ಕಂಡಿದ್ದ ಅಂಧ ಸಹೋದರಿಯರು ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರದ ಕಣ್ಣಿಲ್ಲದ ಒಂದೇ ಕುಟುಂಬದ 3 ಜನಕ್ಕೆ ಬೆಳಕಾಗುವ ಭರವಸೆಯನ್ನ ನೀಡಿದ್ದರು ಪುನೀತ್‌ ರಾಜ್‌ಕುಮಾರ್‌. ಕೊಟ್ಟ ಭರವಸೆ ಈಡೇರುವ ಮುನ್ನವೇ ಬಾರದ ಲೋಕಕ್ಕೆ ಅಪ್ಪು ತೆರಳಿದ್ದಾರೆ. ಮಲ್ಲಾಪುರದ ಹನುಮಂತಪ್ಪ ಹೊಸಹಳ್ಳಿ ಕುಟುಂಬದ ಐವರಲ್ಲಿ ಮೂವರಿಗೆ ಅಂಧತ್ವ ಇದೆ. 2020ರ ಅಕ್ಟೋಬರ್‌ನಲ್ಲಿ ಜೇಮ್ಸ್‌ ಚಿತ್ರೀಕರಣಕ್ಕೆ ಬಂದ ಸಂದರ್ಭದಲ್ಲಿ ಅಪ್ಪು ಅವರನ್ನ ಅಂಧ ಸಹೋದರಿಯರು ಭೇಟಿಯಾಗಿದ್ದರು. ಅಂದು ಪ್ರಮಿಳಾ, ಶಾರದಮ್ಮ ಹಾಗೂ ರೇಣುಕಾ ಅವರಿಗೆ ಕಣ್ಣು ಕೊಡಿಸುವ ಭರವಸೆಯನ್ನ ಅಪ್ಪು ನೀಡಿದ್ದರು. 

ವಿದೇಶಗಳಲ್ಲಿ ರೂಪಾಂತರಿ ವೈರಸ್‌ ಉಲ್ಬಣ: ಸೋಂಕು ಪತ್ತೆಗೆ BBMP ಹೊಸ ಪ್ಲಾನ್‌..!