ಬರದ ನಡುವೆ ಅನ್ನದಾತನಿಗೆ ಬರ ಸಿಡಿಲು: 3 ವರ್ಷದಿಂದ ಬಂಡವಾಳ ಬಾರದೇ ರೋಸಿ ಹೋದ ರೈತ

ಬರದ ನಡುವೆ ಅನ್ನದಾತನಿಗೆ ಬರ ಸಿಡಿಲು: 3 ವರ್ಷದಿಂದ ಬಂಡವಾಳ ಬಾರದೇ ರೋಸಿ ಹೋದ ರೈತ

Published : Oct 12, 2023, 11:35 AM IST

ಆ ಭಾಗದ ರೈತರೂ ವಿಪರೀತ ಬರದಿಂದ ತತ್ತರಿಸಿ ಹೋಗಿದ್ದಾರೆ.ಸಾಲಸೋಲ ಮಾಡಿ ಹಾಕಿರೋ ಬೆಳೆಗಳಿಗೆ ರೋಗ ಆವರಿಸಿ ಗಾಯದ ಮೇಲೆ ಬರೆ ಎಳೆದಂತಾಗ್ತಿದೆ.ಇದರ ನಡುವೆ ತರಕಾರಿಗಳ ಸಹವಾಸವೇ ಬೇಡ ಎಂದು ಹೂ ಬೆಳೆದ ಹಾಕಿದ ತಪ್ಪಿದೆ,ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
 

ಹೆಚ್ಚಾಗಿ ತರಕಾರಿಯನ್ನೇ ಬೆಳೆಯುವ ಕೋಲಾರ(Kolar) ರೈತರು (Farmers)ಕಳೆದ ಎರಡು ಮೂರು ವರ್ಷಗಳಿಂದ ಬಂಡವಾಳ ಬಾರದೇ ರೋಸಿ ಹೋಗಿದ್ದಾರೆ. ಹಾಕಿದ ಬಂಡವಾಳ ಆದ್ರೂ ಬರಲಿ ಎಂದು ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭಕ್ಕಾಗಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿಗೆ, ಚೆಂಡು ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದಾರೆ. ಆದ್ರೆ, ಬೆಲೆ ಕೇಳಿ ರೈತರು ತಮ್ಮ ತೋಟದಲ್ಲೇ ಬೆಳೆ ಬುಡ ಸಮೇತ ಕಿತ್ತು ಹಾಕಿದ್ದಾರೆ. ಹಬ್ಬದ ಸಂದರ್ಭದಲ್ಲಿ ಕೊಂಚ ಬೆಲೆ ಬಂದ್ರೆ ಈಗ ಪಿತೃ ಪಕ್ಷ ಆಗಿರೋದ್ರಿಂದ ಯಾವುದೇ ಸಭೆ, ಸಮಾರಂಭಗಳಿಲ್ಲದೆ ಹೂ ವ್ಯಾಪಾರ ಆಗುತ್ತಿಲ್ಲ. ಹೂಗಳಿಗೂ(Flowers) ಡಿಮ್ಯಾಂಡ್‌ ಕಡಿಮೆ ಆಗಿದೆ. ವ್ಯಾಪಾರವಿಲ್ಲದೇ ಹೂಗಳು ಒಣಗಿ ಹೋಗ್ತಿರೋದ್ರಿಂದ ರೈತರ ಬಳಿ ಖರೀದಿ ಮಾಡೋದಕ್ಕೆ ವ್ಯಾಪಾರಸ್ಥರು ಧೈರ್ಯ ಮಾಡ್ತಿಲ್ಲ.ಕೆಲ ದಿನಗಳ ಹಿಂದೆ ಇದ್ದ ಬೆಲೆಯಲ್ಲಿ ಶೇ.90 ರಷ್ಟೂ ಬೆಲೆ ಕುಸಿತವಾಗಿದೆ. ಗುಲಾಬಿ ಹೂ ಕೆಜಿ 10 ರುಪಾಯಿ, ಸೇವಂತಿಗೆ ಕೆಜಿ 10 ರುಪಾಯಿ, ಚಂಡು ಹೂ ಕೆಜಿ 4 ರುಪಾಯಿಗೆ ಮಾರಾಟವಾಗ್ತಿದ್ದು, ಹಾಕಿರುವ ಬಂಡವಾಳವೂ ಬಾರದೇ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ವೀಕ್ಷಿಸಿ:  ಹಳೇ ವೈಷಮ್ಯಕ್ಕೆ ಬಲಿಯಾದ ಚಿನ್ನದಂತ ಫಸಲು: ಬೆಳೆದ ಬೆಳೆ ಕೈಸೇರಲಿಲ್ಲ ಎಂದು ಅನ್ನದಾತ ಅಳಲು..!

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more