ಬರದ ನಡುವೆ ಅನ್ನದಾತನಿಗೆ ಬರ ಸಿಡಿಲು: 3 ವರ್ಷದಿಂದ ಬಂಡವಾಳ ಬಾರದೇ ರೋಸಿ ಹೋದ ರೈತ

ಬರದ ನಡುವೆ ಅನ್ನದಾತನಿಗೆ ಬರ ಸಿಡಿಲು: 3 ವರ್ಷದಿಂದ ಬಂಡವಾಳ ಬಾರದೇ ರೋಸಿ ಹೋದ ರೈತ

Published : Oct 12, 2023, 11:35 AM IST

ಆ ಭಾಗದ ರೈತರೂ ವಿಪರೀತ ಬರದಿಂದ ತತ್ತರಿಸಿ ಹೋಗಿದ್ದಾರೆ.ಸಾಲಸೋಲ ಮಾಡಿ ಹಾಕಿರೋ ಬೆಳೆಗಳಿಗೆ ರೋಗ ಆವರಿಸಿ ಗಾಯದ ಮೇಲೆ ಬರೆ ಎಳೆದಂತಾಗ್ತಿದೆ.ಇದರ ನಡುವೆ ತರಕಾರಿಗಳ ಸಹವಾಸವೇ ಬೇಡ ಎಂದು ಹೂ ಬೆಳೆದ ಹಾಕಿದ ತಪ್ಪಿದೆ,ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
 

ಹೆಚ್ಚಾಗಿ ತರಕಾರಿಯನ್ನೇ ಬೆಳೆಯುವ ಕೋಲಾರ(Kolar) ರೈತರು (Farmers)ಕಳೆದ ಎರಡು ಮೂರು ವರ್ಷಗಳಿಂದ ಬಂಡವಾಳ ಬಾರದೇ ರೋಸಿ ಹೋಗಿದ್ದಾರೆ. ಹಾಕಿದ ಬಂಡವಾಳ ಆದ್ರೂ ಬರಲಿ ಎಂದು ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭಕ್ಕಾಗಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿಗೆ, ಚೆಂಡು ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದಾರೆ. ಆದ್ರೆ, ಬೆಲೆ ಕೇಳಿ ರೈತರು ತಮ್ಮ ತೋಟದಲ್ಲೇ ಬೆಳೆ ಬುಡ ಸಮೇತ ಕಿತ್ತು ಹಾಕಿದ್ದಾರೆ. ಹಬ್ಬದ ಸಂದರ್ಭದಲ್ಲಿ ಕೊಂಚ ಬೆಲೆ ಬಂದ್ರೆ ಈಗ ಪಿತೃ ಪಕ್ಷ ಆಗಿರೋದ್ರಿಂದ ಯಾವುದೇ ಸಭೆ, ಸಮಾರಂಭಗಳಿಲ್ಲದೆ ಹೂ ವ್ಯಾಪಾರ ಆಗುತ್ತಿಲ್ಲ. ಹೂಗಳಿಗೂ(Flowers) ಡಿಮ್ಯಾಂಡ್‌ ಕಡಿಮೆ ಆಗಿದೆ. ವ್ಯಾಪಾರವಿಲ್ಲದೇ ಹೂಗಳು ಒಣಗಿ ಹೋಗ್ತಿರೋದ್ರಿಂದ ರೈತರ ಬಳಿ ಖರೀದಿ ಮಾಡೋದಕ್ಕೆ ವ್ಯಾಪಾರಸ್ಥರು ಧೈರ್ಯ ಮಾಡ್ತಿಲ್ಲ.ಕೆಲ ದಿನಗಳ ಹಿಂದೆ ಇದ್ದ ಬೆಲೆಯಲ್ಲಿ ಶೇ.90 ರಷ್ಟೂ ಬೆಲೆ ಕುಸಿತವಾಗಿದೆ. ಗುಲಾಬಿ ಹೂ ಕೆಜಿ 10 ರುಪಾಯಿ, ಸೇವಂತಿಗೆ ಕೆಜಿ 10 ರುಪಾಯಿ, ಚಂಡು ಹೂ ಕೆಜಿ 4 ರುಪಾಯಿಗೆ ಮಾರಾಟವಾಗ್ತಿದ್ದು, ಹಾಕಿರುವ ಬಂಡವಾಳವೂ ಬಾರದೇ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ವೀಕ್ಷಿಸಿ:  ಹಳೇ ವೈಷಮ್ಯಕ್ಕೆ ಬಲಿಯಾದ ಚಿನ್ನದಂತ ಫಸಲು: ಬೆಳೆದ ಬೆಳೆ ಕೈಸೇರಲಿಲ್ಲ ಎಂದು ಅನ್ನದಾತ ಅಳಲು..!

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more