Kolar: ಕೊರೋನಾ ವಾರಿಯರ್ಸ್‌ ಗೋಳು ಕೇಳೋರಿಲ್ಲ, ಸಂಬಳ ಕೊಡೋರಿಲ್ಲ!

Kolar: ಕೊರೋನಾ ವಾರಿಯರ್ಸ್‌ ಗೋಳು ಕೇಳೋರಿಲ್ಲ, ಸಂಬಳ ಕೊಡೋರಿಲ್ಲ!

Published : Feb 24, 2022, 03:25 PM ISTUpdated : Feb 24, 2022, 04:02 PM IST

*ಸಂಕಟ ಬಂದಾಗ ಇವರು ಬೇಕು,  ಸಂಬಳ ಕೊಡಲು ಸತಾಯಿಸ್ತಾರೆ!
*ಗುತ್ತಿಗೆ ಆಧಾರ ನೌಕರರ ಗೋಳು ಕೇಳೋರಿಲ್ಲ, ಸಂಬಳ ಕೊಡೋರಿಲ್ಲ!
*ಕೋವಿಡ್‌ ವೇಳೆ ಪುಗಸಟ್ಟೆ ಕೆಲಸ ಮಾಡಿಸಿದ ಅಧಿಕಾರಿಗಳು!
*6 ತಿಂಗಳಿನಿಂದ ಸಂಬಳ ಸಿಗದೇ ಸಂಕಷ್ಟದಲ್ಲಿರುವ ನೌಕರರು
*ಸಂಬಳಕ್ಕಾಗಿ ಗೋಗರೆಯುತ್ತಿರುವ ಗುತ್ತಿಗೆ ಆಧಾರ ನೌಕರರು 

ಕೋಲಾರ (ಫೆ. 24): ಒಂದು ಕಡೆ ಪಿಪಿಇ ಕಿಟ್ ಧರಿಸಿ ಕೆಲಸ ಮಾಡ್ತಿರುವ ನೌಕರರು. ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡಿದಕ್ಕೆ ಕೈಗೆ ಚಿಪ್ಪು ಕೊಟ್ಟಿರುವ ಅಧಿಕಾರಿಗಳು. ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ನೌಕರರು. ಅಂದಹಾಗೆ ಇವೆಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿಯ ಮುಂದೆ. ಈಗ ಸಂಬಳಕ್ಕಾಗಿ ಗೋಗರೆಯುತ್ತಿರುವ ಇವರೆಲ್ಲಾ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿರುವ ನೌಕರರು. 

ರಾಜ್ಯದಲ್ಲಿ ಕೋವಿಡ್ ನ ತುರ್ತು ಪರಿಸ್ಥಿತಿ ಎದುರಾದಾಗ, ಖುದ್ದು ಸೋಂಕಿತರ ಕುಟುಂಬಸ್ಥರೇ ದೂರ ಉಳಿದ ವೇಳೆ ಇವರೆಲ್ಲಾ ಪ್ರಾಣದ ಹಂಗು ತೊರೆದು, ಅದೆಷ್ಟೋ ಬಾರಿ ಇವರಿಗೆ ಪಾಸಿಟಿವ್ ಬಂದರೂ ಸಹ ಕೆಲಸ ಮಾಡಿದ್ದಾರೆ. ಕೆಲವರು ದಿನದ 24  ಗಂಟೆಗೂ ಪಿಪಿಇ ಕಿಟ್ ಧರಿಸಿ ಕೆಲಸ ಮಾಡಿದ್ರೆ ,ಇನ್ನು ಕೆಲವರು ಸ್ವಚ್ಚತೆ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. 

ಇದನ್ನೂ ಓದಿKolar: 5 ಎಕರೆ ಜಮೀನಲ್ಲಿ ಬೆಳೆದಿದ್ದ ಕಲ್ಲಂಗಡಿ ಹಣ್ಣು ನಾಶ ಮಾಡಿದ ದುಷ್ಕರ್ಮಿಗಳು: ಕಂಗಾಲಾದ ರೈತ

ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳು ಕೊರತೆ ಉಂಟಾದಾಗ ಗುತ್ತಿಗೆ ಆಧಾರದಲ್ಲಿ ನೇಮವಾಗಿರುವ ಇವರಿಗೆ ತಿಂಗಳಿಗೆ 20 ಸಾವಿರ ಸಂಬಳ ನಿಗದಿ ಸಹ ಮಾಡಿದ್ರು, ಆರಂಭದ 6 ತಿಂಗಳು ಸರಿಯಾಗಿ ಸಂಬಳ ಏನೋ ಬಂದಿದೆ.  ಆದ್ರೆ ಬಳಿಕ ಮನಸ್ಸಿಗೆ ಬಂದಾಗ ಸಂಬಳ ನೀಡಿದ್ದಾರೆ. ಹೇಗೋ ತಡವಾದ್ರೂ ಸಂಬಳ ಕೊಡ್ತಾರಲ್ಲ ಬಿಡು ಅಂತ ಇದ್ರೆ ಇದೀಗ ಕಳೆದ 6 ತಿಂಗಳಿನಿಂದ ಸಂಬಳ ಕೊಡೋದನ್ನೇ ನಿಲ್ಲಿಸಿದ್ದಾರೆ. ಈಗಾಗಿ ಇವರೆಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ. ಇಲ್ಲಿದೆ ಈ ಕುರಿತ ಒಂದು ವರದಿ.

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more