ಕೃಷ್ಣಾನದಿ ತೀರದ ಗ್ರಾಮಸ್ಥರ ಪರದಾಟ‌‌ : ಪ್ರವಾಹಕ್ಕೆ ಬದುಕು ಬೀದಿಪಾಲು

Jul 27, 2021, 1:43 PM IST

ಬೆಳಗಾವಿ/ಅಥಣಿ (ಜು.27):  ಜೀವ ಉಳಿಸಿಕೊಳ್ಳಲು ಕೃಷ್ಣಾನದಿ ತೀರದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಈ ದೃಶ್ಯಗಳನ್ನ‌ ನೋಡಿದರೆ ಮನ ಕಲುಕುತ್ತದೆ. ಪ್ರವಾಹ ಪೀಡಿತ ಅಥಣಿ ತಾಲೂಕಿನ ಗ್ರಾಮಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಡಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಸುತ್ತುವರೆದ ಪ್ರವಾಹ : ಇಡೀ ಊರು ತೊರೆದ ಗ್ರಾಮಸ್ಥರು

ಟ್ರಾಕ್ಟರ್, ವಾಹನಗಳ ಮೂಲಕ ತಂಡೋಪ ತಂಡವಾಗಿ ಸುರಕ್ಷಿರ ಸ್ಥಳಗಳಿಗೆ ಜನರ ವಲಸೆ!! ನಡುಗಡ್ಡೆಯಾದ ಅಥಣಿ ತಾಲೂಕಿನ ಹುಲಗಬಾಳಿ, ತೀರ್ಥ, ಸಪ್ತಸಾಗರ ದರೂರು ಗ್ರಾಮಗಳು ಎಲ್ಲ, ಟ್ರಾಕ್ಟರ್‌ಗಳಲ್ಲಿ ಮಕ್ಕಳು, ಜಾನುವಾರು, ಮನೆ ಸಾಮಾನುಗಳನ್ನ ತುಂಬಿಕೊಂಡು ಮನೆಗಳನ್ನ ಬಿಡ್ತಿರೋ ಜನರನ್ನು ಇಲ್ಲಿ ಕಾಣಬಹುದು.