ಡಂಪಿಗ್ ಯಾರ್ಡ್ ಆಗಿ ಬದಲಾಗ್ತಿದ್ಯಾ ಅಂಡರ್ ಪಾಸ್? ಕಾಮಗಾರಿ ಪೂರ್ಣಗೊಳಿಸುವಂತೆ ಜನರ ಆಗ್ರಹ

ಡಂಪಿಗ್ ಯಾರ್ಡ್ ಆಗಿ ಬದಲಾಗ್ತಿದ್ಯಾ ಅಂಡರ್ ಪಾಸ್? ಕಾಮಗಾರಿ ಪೂರ್ಣಗೊಳಿಸುವಂತೆ ಜನರ ಆಗ್ರಹ

Published : Oct 28, 2023, 11:12 AM ISTUpdated : Oct 28, 2023, 11:14 AM IST

ಆ ಅಂಡರ್ ಪಾಸ್ ಸ್ಟಾಪ್ ಆಗಿ ಬರೋಬ್ಬರಿ ಆರೇಳು ವರ್ಷಗಳೇ ಕಳೆದವು. ಅತ್ತ ಅಂಡರ್ ಪಾಸ್ ಅಂತೂ ಓಪನ್ ಆಗಿಲ್ಲ. ಸದ್ಯ ಈ ಅಂಡರ್ ಪಾಸ್ ಡಂಪಿಗ್ ಯಾರ್ಡ್ ಆಗಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾದ್ರೆ ಈ ಅಂಡರ್ ಪಾಸ್ ಯಾವುದು? ಅಷ್ಟಕ್ಕೂ ಇದು ನಿಂತಿದ್ಯಾಕೆ ಅಂತೀರಾ? ಈ ಸ್ಟೋರಿ ನೋಡಿ.

ಕಾಮಗಾರಿ ಸ್ಟಾಪ್ ಆಗಿ ವರ್ಷಗಳೇ ಕಳೆದಿರುವ ಅಂಡರ್ ಪಾಸ್. ಇನ್ನೊಂದು ಬದಿಯಲ್ಲಿ ಅಂಡರ್ ಪಾಸ್ ಗೆ ಅಡ್ಡಲಾಗಿರುವ ಗೋಡೆ. ಇದರ ನಡುವೆ ಕಸದ ರಾಶಿ. ಇದು ಬೆಂಗಳೂರಿನ(Bengaluru) ಕಂಠೀರವ ಸ್ಟುಡಿಯೋ(Kanteerava Studio) ಬಳಿ ಅರ್ಧಕ್ಕೇ ಕಾಮಗಾರಿ ನಿಲ್ಲಿಸಿರು ಅಂಡರ್ ಪಾಸ್ ಬಳಿ ಕಂಡುಬರುವ ದೃಶ್ಯಗಳು. ಐಟಿ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್ಗಾಗಿ ಫ್ಲೈ ಓವರ್, ಅಂಡರ್ ಪಾಸ್(Underpass) ನಿರ್ಮಾಣವಾಗ್ತಿವೆ. ಆದ್ರೆ, ನಂದಿನಿ ಲೇಔಟ್ ಮತ್ತು ಪೀಣ್ಯ ನಡುವೆ ಸಂಪರ್ಕ ಕಲ್ಪಿಸಲು 2014 ರ ಪ್ರಾರಂಭಗೊಂಡಿದ್ದ ಈ ಅಂಡರ್ ಪಾಸ್ ಮಾತ್ರ ಇನ್ನೂ ಮುಗಿದಿಲ್ಲ. ಇದಕ್ಕೆ ಕಾರಣ ಆಗಿನ ಲ್ಯಾಂಡ್ ಅಕ್ವೇಸೀಷನ್ನಲ್ಲಿ ಉಂಟಾದ  ಕೆಲವು ಅಡೆತಡೆಗಳು. ಇದರಿಂದ ಕಾಮಗಾರಿ ಆರಂಭಿಸಿದ್ದ ಬಿಡಿಎ ಅರ್ಧಕ್ಕೇ ನಿಲ್ಲಿಸಿ ಗೋಡೆ ನಿಲ್ಲಿಸಲಾಗಿತ್ತು. ಸದ್ಯ ಈ ಅಂಡರ್ ಪಾಸ್‌ಗೆ ಸಂಬಂಧಿಸಿದ ಲ್ಯಾಂಡ್ ಸಮಸ್ಯೆ ಬಗೆಹರಿದಿದೆ. ಆದ್ರೆ ಕೆಲಸ ಮಾತ್ರ ಮುಂದುವರೆದಿಲ್ಲ. ಹೀಗಾಗಿ ಅರ್ಧಂಬರ್ಧ ಕಾಮಗಾರಿಯಾಗಿರೋ ಅಂಡರ್ ಪಾಸ್ ಪುಂಡ ಪೋಕರಿಗಳ ಅಡ್ಡೆಯಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಈ ಪ್ರದೇಶದಲ್ಲಿ ಓಡಾಡೋಕು ಭಯವಾಗುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಪುಂಡ ಪೋಕರಿಗಳ ಭಯ ಒಂದು ಕಡೆಯಾದ್ರೆ, ಕಸದ ಸಮಸ್ಯೆ ಮತ್ತೊಂದ್ಕಡೆ. ಅಂಡರ್‌ಪಾಸ್ ಬಳಿ ರಾಶಿ ರಾಶಿ ಕಸ ಸುರಿಯುತ್ತಿದ್ದು, ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಮೂಗು ಮುಚ್ಚಿಕೊಂಡೇ ಜನ ಓಡಾಡುವ ಪರಿಸ್ಥಿತಿ ಎದುರಾಗಿದೆ. 

ಇದನ್ನೂ ವೀಕ್ಷಿಸಿ:  ಕಡಲ ನಗರಿಯಲ್ಲಿ ಹೆಚ್ಚಾಯ್ತು ಮರಳಿನ ಸಮಸ್ಯೆ: ಕೃತಕ ಅಭಾವಕ್ಕೆ ಗುತ್ತಿಗೆದಾರರು ಕಂಗಾಲು

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more