ಕನ್ನಡ ಸಾಹಿತ್ಯ ಸಮ್ಮೇಳನ ಎರಡನೇ ದಿನ/ ಶರಣರ ನಾಡು ಕಲಬುರಗಿಯಲ್ಲಿ ಸಮ್ಮೇಳನ/ ಪುಸ್ತಕ ಖರೀದಿ ಮಾಡಿದ ಸಾಹಿತ್ಯಾಭಿಮಾನಿಗಳು/ ಕನ್ನಡಪ್ರಭ-ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರಿಗೆ ಸನ್ಮಾನ
ಕಲಬುರಗಿ(ಫೆ. 06) ಶರಣರ ನಾಡು ಕಲಬುರಗಿಯಲ್ಲಿ ಎರಡನೇ ದಿನವೂ ಕನ್ನಡದ ಕಂಪು ಮನೆ ಮಾಡಿತ್ತು. ಕನ್ನಡಾಭಿಮಾನಿಗಳು ಪುಸ್ತಕ ಖರೀದಿ ಮಾಡಿ ಸಂಭ್ರಮಿಸಿದರು.
ಸಾಧಕರನ್ನು ಸನ್ಮಾನಿಸಿದ್ದು ವಿಶೇಷ. ಶ್ರೀ ವಿಜಯ ವೇದಿಕೆಯಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಡಾ. ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮುಂದಿನ ವರ್ಷದ ಅಂದರೆ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ.