ಉತ್ತರ ಕರ್ನಾಟಕದ ಮಗಳು ನಾನು, ಹುಬ್ಬಳ್ಳಿ ನನ್ನ ಸ್ವರ್ಗ: ಸುಧಾಮೂರ್ತಿ

Sep 26, 2022, 9:11 PM IST

ಹುಬ್ಬಳ್ಳಿ (ಸೆ. 26): "ಹುಬ್ಬಳ್ಳಿ ನನ್ನ ತವರು ಮನೆ, ಇಲ್ಲಿಗೆ ಬಂದರೆ ನನಗೆ ಸಂತಸವಾಗುತ್ತದೆ, ಉತ್ತರ ಕರ್ನಾಟಕದ ಮಗಳು ನಾನು, ಹುಬ್ಬಳ್ಳಿ ನನ್ನ ಸ್ವರ್ಗ" ಎಂದು ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ (Sudha Murty) ಹೇಳಿದರು. ಧಾರವಾಡ ಐಐಐಟಿಯ (IIIT Dharwad) ನೂತತ ಕ್ಯಾಂಪಸ್‌ ಉದ್ಘಾಟನೆ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಅವರು "ಈ ಸಂಸ್ಥೆಗೆ ರಾಜ್ಯ ಸರಕಾರ 60 ಎಕರೆ ಭೂಮಿ ನೀಡಿದೆ, ಹಲವಾರು ವರ್ಷಗಳ ಕಾಲ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ, ಅನೇಕರು ಈ ಕೆಲಸಕ್ಕಾಗಿ ಸಹಾಯ ಮಾಡಿದ್ದಾರೆ, ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದರು.  

ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ನೂತನ ಕ್ಯಾಂಪಸ್‌ ಉದ್ಘಾಟಿಸಿದರು. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ  ಕರ್ನಾಟಕಕ್ಕೆ ಆಗಮಿಸಿದ್ದ ದ್ರೌಪದಿ ಮುರ್ಮು ನಾಡಹಬ್ಬ ದಸರಾಗೆ ಚಾಲನೆ ನೀಡಿದ ಬಳಿಕ ಧಾರವಾಡದ ಐಐಐಟಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 

IIIT Dharwad ಉದ್ಘಾಟನೆ: ರಾಷ್ಟ್ರಪತಿ ದ್ರೌಪದಿಗೆ ಕೌದಿ, ಸಿಲ್ಕ್ ಸೀರೆ ನೀಡಿದ ಸುಧಾಮೂರ್ತಿ