Plight Of Flood Victims: ಸಿಎಂ ತವರು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಗೋಳು, ಕುರುಡಾಗಿದೆ ಜಿಲ್ಲಾಡಳಿತ

Plight Of Flood Victims: ಸಿಎಂ ತವರು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಗೋಳು, ಕುರುಡಾಗಿದೆ ಜಿಲ್ಲಾಡಳಿತ

Suvarna News   | Asianet News
Published : Dec 10, 2021, 04:03 PM IST

- ನೆರೆ ಸಂತ್ರಸ್ತರ ಕಣ್ಣೀರು, ಅವಕಾಶವಿದ್ರು ಪರಿಹಾರ ನೀಡದ ಜಿಲ್ಲಾಡಳಿತ

- ಕಳೆದ ಮೂರು ವರ್ಷಗಳಿಂದ ಮಳೆಗೆ ಮನೆ ಬಿದ್ದು ಕಂಗಾಲಾಗಿರುವ ಕುಟುಂಬ

- ಅಧಿಕಾರಿಗಳ ನಿರ್ಲಕ್ಷಕ್ಕೆ  5 ಲಕ್ಷದ ಬದಲು ಸಿಕ್ಕಿದ್ದು 50 ಸಾವಿರ ಪರಿಹಾರ ಮಾತ್ರ!

ಧಾರವಾಡ (ಡಿ. 10): ಕಳೆದ ಮೂರು ವರ್ಷಗಳಿಂದ ಬಾರಿ ಬಾರಿ ಮಳೆಗೆ ನೆರೆ ಸಂತ್ರಸ್ಥರು (Flood Victims) ಸೋತು ಸುಣ್ಣವಾಗಿದ್ದಾರೆ.  ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ನೆರೆ ಸಂತ್ರಸ್ತರಿಗೆ, ಮನೆ ಕಳೆದುಕೊಂಡವರಿಗೆ ಮನೆಗಳನ್ನ ಕೊಡಲು ಎ,ಬಿ,ಸಿ ಕೆಟಗೇರಿ ಅಂತ ವಿಭಜನೆ ಮಾಡಿ ಪರಿಹಾರವನ್ನ ಕೊಡುವ ವ್ಯವಸ್ಥೆ ತಂದಿದ್ದರು. ಆದರದು ಪ್ರಯೋಜನಕ್ಕೆ ಬರುತ್ತಿಲ್ಲ. 

ಸಿಎಂ ಸ್ವಂತ ಜಿಲ್ಲೆಯಲ್ಲಿ (Dharwad) ಮಹಿಳೆಯೊಬ್ಬಳು ಮನೆಯಿಲ್ಲ‌ ವಾಸ ಮಾಡಲಿಕ್ಕೆ ಎಂದು ಕಣ್ಣೀರು ಹಾಕಿದ್ದಾಳೆ.  2019 ರಲ್ಲಿ ಮಳೆಗೆ ಬಿದ್ದಿರುವ ಪಾಳು ಮನೆಯಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬಗಳು ಸರಕಾರದ ಪರಿಹಾರದ ಆಯ್ಕೆ ಪ್ರಕಾರ "ಎ" ಗ್ರೇಡ್ ಆಗಬೇಕಿತ್ತು, ಆದರೆ 'ಸಿ' ಗ್ರೇಡ್ ಹಾಕಿ ಕೇವಲ 50 ಸಾವಿರ ಪರಿಹಾರ ಕೊಟ್ಟು ಕೈ ಕಟ್ಟಿ ಕುಳಿತ ಜಿಲ್ಲಾಡಳಿತದ ವಿರುದ್ದ ಹಿಡಿಶಾಪವನ್ನ ಹಾಕುತ್ತಿದ್ದಾರೆ. ಪಾಳು ಬಿದ್ದ ಮನೆಯಲ್ಲಿ ವಾಸ ಮಾಡುತ್ತಿರುವ ಸಂತ್ರಸ್ಥ ಮಹಿಳೆ, ಚಂದ್ರಶೇಖರ ಚೌಡಿಮನಿ, ನೀಲವ್ವ ಸಲಕಿ, ಪ್ರಭು ಬಡಿಗೇರ ,ಮೂರು ಕುಟುಂಬಗಳು ಸದ್ಯ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ಹೆಚ್ಚಿನ ಪರಿಹಾರಕ್ಕಾಗಿ ಸರಕಾರದ ಮೊರೆ ಹೊದ ಬಡ ಕುಟುಂಬಗಳಿಗೆ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಈ ಗ್ರಾಮದತ್ತ ಸುಳಿದಿಲ್ಲ, ಅಧಿಕಾರಿಗಳ ನಿರ್ಲಕ್ಷಕ್ಕೆ  5 ಲಕ್ಷ ಪರಿಹಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ 7 ಜನ ವಾಸ ಮಾಡುತ್ತಿದ್ದೆವೆ, ಮಳೆ ಬಂದ್ರೆ ಎಲ್ಲಿ ಹೋಗೋಣ ಎಂದು ಗಳಗಳನೆ ಅತ್ತ ಮಹಿಳೆ ಕಣ್ಣೀರಿಟ್ಟಿದ್ದಾಳೆ.

 

21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more