Plight Of Flood Victims: ಸಿಎಂ ತವರು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಗೋಳು, ಕುರುಡಾಗಿದೆ ಜಿಲ್ಲಾಡಳಿತ

Plight Of Flood Victims: ಸಿಎಂ ತವರು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಗೋಳು, ಕುರುಡಾಗಿದೆ ಜಿಲ್ಲಾಡಳಿತ

Published : Dec 10, 2021, 04:03 PM IST

- ನೆರೆ ಸಂತ್ರಸ್ತರ ಕಣ್ಣೀರು, ಅವಕಾಶವಿದ್ರು ಪರಿಹಾರ ನೀಡದ ಜಿಲ್ಲಾಡಳಿತ

- ಕಳೆದ ಮೂರು ವರ್ಷಗಳಿಂದ ಮಳೆಗೆ ಮನೆ ಬಿದ್ದು ಕಂಗಾಲಾಗಿರುವ ಕುಟುಂಬ

- ಅಧಿಕಾರಿಗಳ ನಿರ್ಲಕ್ಷಕ್ಕೆ  5 ಲಕ್ಷದ ಬದಲು ಸಿಕ್ಕಿದ್ದು 50 ಸಾವಿರ ಪರಿಹಾರ ಮಾತ್ರ!

ಧಾರವಾಡ (ಡಿ. 10): ಕಳೆದ ಮೂರು ವರ್ಷಗಳಿಂದ ಬಾರಿ ಬಾರಿ ಮಳೆಗೆ ನೆರೆ ಸಂತ್ರಸ್ಥರು (Flood Victims) ಸೋತು ಸುಣ್ಣವಾಗಿದ್ದಾರೆ.  ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ನೆರೆ ಸಂತ್ರಸ್ತರಿಗೆ, ಮನೆ ಕಳೆದುಕೊಂಡವರಿಗೆ ಮನೆಗಳನ್ನ ಕೊಡಲು ಎ,ಬಿ,ಸಿ ಕೆಟಗೇರಿ ಅಂತ ವಿಭಜನೆ ಮಾಡಿ ಪರಿಹಾರವನ್ನ ಕೊಡುವ ವ್ಯವಸ್ಥೆ ತಂದಿದ್ದರು. ಆದರದು ಪ್ರಯೋಜನಕ್ಕೆ ಬರುತ್ತಿಲ್ಲ. 

ಸಿಎಂ ಸ್ವಂತ ಜಿಲ್ಲೆಯಲ್ಲಿ (Dharwad) ಮಹಿಳೆಯೊಬ್ಬಳು ಮನೆಯಿಲ್ಲ‌ ವಾಸ ಮಾಡಲಿಕ್ಕೆ ಎಂದು ಕಣ್ಣೀರು ಹಾಕಿದ್ದಾಳೆ.  2019 ರಲ್ಲಿ ಮಳೆಗೆ ಬಿದ್ದಿರುವ ಪಾಳು ಮನೆಯಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬಗಳು ಸರಕಾರದ ಪರಿಹಾರದ ಆಯ್ಕೆ ಪ್ರಕಾರ "ಎ" ಗ್ರೇಡ್ ಆಗಬೇಕಿತ್ತು, ಆದರೆ 'ಸಿ' ಗ್ರೇಡ್ ಹಾಕಿ ಕೇವಲ 50 ಸಾವಿರ ಪರಿಹಾರ ಕೊಟ್ಟು ಕೈ ಕಟ್ಟಿ ಕುಳಿತ ಜಿಲ್ಲಾಡಳಿತದ ವಿರುದ್ದ ಹಿಡಿಶಾಪವನ್ನ ಹಾಕುತ್ತಿದ್ದಾರೆ. ಪಾಳು ಬಿದ್ದ ಮನೆಯಲ್ಲಿ ವಾಸ ಮಾಡುತ್ತಿರುವ ಸಂತ್ರಸ್ಥ ಮಹಿಳೆ, ಚಂದ್ರಶೇಖರ ಚೌಡಿಮನಿ, ನೀಲವ್ವ ಸಲಕಿ, ಪ್ರಭು ಬಡಿಗೇರ ,ಮೂರು ಕುಟುಂಬಗಳು ಸದ್ಯ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ಹೆಚ್ಚಿನ ಪರಿಹಾರಕ್ಕಾಗಿ ಸರಕಾರದ ಮೊರೆ ಹೊದ ಬಡ ಕುಟುಂಬಗಳಿಗೆ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಈ ಗ್ರಾಮದತ್ತ ಸುಳಿದಿಲ್ಲ, ಅಧಿಕಾರಿಗಳ ನಿರ್ಲಕ್ಷಕ್ಕೆ  5 ಲಕ್ಷ ಪರಿಹಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ 7 ಜನ ವಾಸ ಮಾಡುತ್ತಿದ್ದೆವೆ, ಮಳೆ ಬಂದ್ರೆ ಎಲ್ಲಿ ಹೋಗೋಣ ಎಂದು ಗಳಗಳನೆ ಅತ್ತ ಮಹಿಳೆ ಕಣ್ಣೀರಿಟ್ಟಿದ್ದಾಳೆ.

 

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
Read more