Uttara Kannada: ಶಿರಸಿಯಲ್ಲಿ ಸಂಭ್ರಮದ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವ

Uttara Kannada: ಶಿರಸಿಯಲ್ಲಿ ಸಂಭ್ರಮದ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವ

Published : Mar 18, 2022, 12:28 PM ISTUpdated : Mar 18, 2022, 12:39 PM IST

*  ರಾಜ್ಯದ ಪ್ರಸಿದ್ಧ ಹಾಗೂ ಜನಪದ ಸಂಸ್ಕೃತಿಯ ಜೀವ ಚೈತನ್ಯ ಜಾತ್ರೆ
*  ಏಳು ದಿನಗಳ ಕಾಲ ಗದ್ದುಗೆಯಲ್ಲಿ ವೀರಾಜಮಾನಳಾಗುವ ಮಾರಿಕಾಂಬೆ 
*  ಶ್ರೀದೇವಿಗೆ ಬಾಳೆ ಹಣ್ಣು, ದುಡ್ಡು, ಎಸೆದು ಕೃತಾರ್ಥರಾದ ಸಹಸ್ರಾರು ಭಕ್ತರು 
 

ಕಾರವಾರ​(ಮಾ.18): ರಾಜ್ಯದ ಪ್ರಸಿದ್ಧ ಹಾಗೂ ಜನಪದ ಸಂಸ್ಕೃತಿಯ ಜೀವ ಚೈತನ್ಯ ಜಾತ್ರೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವ ಅದ್ಧೂರಿಯಾಗಿ ನೇರವೇರಿದೆ. ಭಕ್ತರನ್ನು ಪೊರೆವ ಶಿರಸಿಯ ಮಾರಮ್ಮ ಮಾರಿಗುಡಿಯಿಂದ ಅಲಂಕೃತಗೊಂಡ ರಥದಲ್ಲಿ ಆರೂಢಳಾಗಿ ಹಾದಿ ಬೀದಿಯಲ್ಲಿ ನಿಲ್ಲುವ ಭಕ್ತರ ಕಡೆಗೆ ತನ್ನ ದೃಷ್ಠಿಯನ್ನು ಬೀರುತ್ತಾ ದೇವಳದ ರಾಜಮಾರ್ಗದಲ್ಲಿ ಸಾಗುತ್ತಾ ಎಲ್ಲರನ್ನೂ ಆಶೀರ್ವದಿಸಿದ್ದಾಳೆ. ಬಳಿಕ ಬಿಡಕಿಬೈಲಿನ ಜಾತ್ರೆ ಗದ್ದುಗೆಯಲ್ಲಿ ದೇವಿ ವಿರಾಜಮಾನಳಾಗಿದ್ದು, ನಾಳೆಯಿಂದ ಏಳು ದಿನಗಳ ಕಾಲ ಗದ್ದುಗೆಯಲ್ಲಿ ವೀರಾಜಮಾನಳಾಗಿಯೇ ಮಾರಿಕಾಂಬೆ ಕ್ಷೇತ್ರಕ್ಕೆ ಬರೋ ಭಕ್ತರನ್ನು ಪೊರೆಯಲಿದ್ದಾಳೆ. 

James 2022: ಅಪ್ಪು ಕೊನೆ ಚಿತ್ರವನ್ನು ನೋಡಿ ಪುನೀತರಾದ ಅಭಿಮಾನಿಗಳು

ನಸುಕಿನ ಜಾವದಲ್ಲೇ ರಥವನ್ನು ಏರಿದ್ದ ತಾಯಿ ಮಾರಿಕಾಂಬೆಯ ರಥೋತ್ಸವ ನೋಡಿ ಕಣ್ತುಂಬಿಳ್ಳಲು ಲಕ್ಷಾಂತರ ಭಕ್ತರು ಆಗಮಿಸಿದ್ದರು. ರಥೋತ್ಸವದ ಮೆರವಣಿಗೆಯುದ್ದಕ್ಕೂ ಸೇರಿದ ಸಹಸ್ರಾರು ಭಕ್ತರು ಶ್ರೀದೇವಿಗೆ ಬಾಳೆ ಹಣ್ಣು, ದುಡ್ಡು, ಎಸೆದು ಕೃತಾರ್ಥರಾದರು. ಇನ್ನು ಜಾತ್ರೆಗೆ ಆಗಮಿಸಿದ ಲಂಬಾಣಿ ಮಹಿಳೆಯರು ಸೋಬಾನೆ ಪದ ಹೇಳುತ್ತಾ ದೇವಿಗೆ ಸೇವೆ ಸಲ್ಲಿಸಿದ್ರೆ, ಹಲವು ಮಹಿಳೆಯರು, ಪುರುಷರು ದೇವಿಯನ್ನು ಆವಾಹನೆ ಮಾಡಿಕೊಂಡು ಆವೇಶಭರಿತರಾಗಿ ಕುಣಿದು ಮಾರಿಕಾಂಬೆ ತಾಯಿಗೆ ಸೇವೆ ಅರ್ಪಿಸಿದರು. ಮತ್ತೊಂದೆಡೆ ಕ್ಷೇತ್ರಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾಧಿಗಳ ಸುರಕ್ಷತೆಗಾಗಿ ಶಿರಸಿ ನಗರದಾದ್ಯಂತ ಪೊಲೀಸರಿಂದ ಭಾರೀ ಭಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 

ಒಟ್ಟಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಜಾತ್ರೆಯಲ್ಲಿ ಒಂದಾಗಿರುವ ಮಾರಿಕಾಂಬೆಯ ಜಾತ್ರಾ ರಥೋತ್ಸವ ಅದ್ಧೂರಿಯಾಗಿ ನಡೆದಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.
 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more