Uttara Kannada: ಶಿರಸಿಯಲ್ಲಿ ಸಂಭ್ರಮದ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವ

Uttara Kannada: ಶಿರಸಿಯಲ್ಲಿ ಸಂಭ್ರಮದ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವ

Published : Mar 18, 2022, 12:28 PM ISTUpdated : Mar 18, 2022, 12:39 PM IST

*  ರಾಜ್ಯದ ಪ್ರಸಿದ್ಧ ಹಾಗೂ ಜನಪದ ಸಂಸ್ಕೃತಿಯ ಜೀವ ಚೈತನ್ಯ ಜಾತ್ರೆ
*  ಏಳು ದಿನಗಳ ಕಾಲ ಗದ್ದುಗೆಯಲ್ಲಿ ವೀರಾಜಮಾನಳಾಗುವ ಮಾರಿಕಾಂಬೆ 
*  ಶ್ರೀದೇವಿಗೆ ಬಾಳೆ ಹಣ್ಣು, ದುಡ್ಡು, ಎಸೆದು ಕೃತಾರ್ಥರಾದ ಸಹಸ್ರಾರು ಭಕ್ತರು 
 

ಕಾರವಾರ​(ಮಾ.18): ರಾಜ್ಯದ ಪ್ರಸಿದ್ಧ ಹಾಗೂ ಜನಪದ ಸಂಸ್ಕೃತಿಯ ಜೀವ ಚೈತನ್ಯ ಜಾತ್ರೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವ ಅದ್ಧೂರಿಯಾಗಿ ನೇರವೇರಿದೆ. ಭಕ್ತರನ್ನು ಪೊರೆವ ಶಿರಸಿಯ ಮಾರಮ್ಮ ಮಾರಿಗುಡಿಯಿಂದ ಅಲಂಕೃತಗೊಂಡ ರಥದಲ್ಲಿ ಆರೂಢಳಾಗಿ ಹಾದಿ ಬೀದಿಯಲ್ಲಿ ನಿಲ್ಲುವ ಭಕ್ತರ ಕಡೆಗೆ ತನ್ನ ದೃಷ್ಠಿಯನ್ನು ಬೀರುತ್ತಾ ದೇವಳದ ರಾಜಮಾರ್ಗದಲ್ಲಿ ಸಾಗುತ್ತಾ ಎಲ್ಲರನ್ನೂ ಆಶೀರ್ವದಿಸಿದ್ದಾಳೆ. ಬಳಿಕ ಬಿಡಕಿಬೈಲಿನ ಜಾತ್ರೆ ಗದ್ದುಗೆಯಲ್ಲಿ ದೇವಿ ವಿರಾಜಮಾನಳಾಗಿದ್ದು, ನಾಳೆಯಿಂದ ಏಳು ದಿನಗಳ ಕಾಲ ಗದ್ದುಗೆಯಲ್ಲಿ ವೀರಾಜಮಾನಳಾಗಿಯೇ ಮಾರಿಕಾಂಬೆ ಕ್ಷೇತ್ರಕ್ಕೆ ಬರೋ ಭಕ್ತರನ್ನು ಪೊರೆಯಲಿದ್ದಾಳೆ. 

James 2022: ಅಪ್ಪು ಕೊನೆ ಚಿತ್ರವನ್ನು ನೋಡಿ ಪುನೀತರಾದ ಅಭಿಮಾನಿಗಳು

ನಸುಕಿನ ಜಾವದಲ್ಲೇ ರಥವನ್ನು ಏರಿದ್ದ ತಾಯಿ ಮಾರಿಕಾಂಬೆಯ ರಥೋತ್ಸವ ನೋಡಿ ಕಣ್ತುಂಬಿಳ್ಳಲು ಲಕ್ಷಾಂತರ ಭಕ್ತರು ಆಗಮಿಸಿದ್ದರು. ರಥೋತ್ಸವದ ಮೆರವಣಿಗೆಯುದ್ದಕ್ಕೂ ಸೇರಿದ ಸಹಸ್ರಾರು ಭಕ್ತರು ಶ್ರೀದೇವಿಗೆ ಬಾಳೆ ಹಣ್ಣು, ದುಡ್ಡು, ಎಸೆದು ಕೃತಾರ್ಥರಾದರು. ಇನ್ನು ಜಾತ್ರೆಗೆ ಆಗಮಿಸಿದ ಲಂಬಾಣಿ ಮಹಿಳೆಯರು ಸೋಬಾನೆ ಪದ ಹೇಳುತ್ತಾ ದೇವಿಗೆ ಸೇವೆ ಸಲ್ಲಿಸಿದ್ರೆ, ಹಲವು ಮಹಿಳೆಯರು, ಪುರುಷರು ದೇವಿಯನ್ನು ಆವಾಹನೆ ಮಾಡಿಕೊಂಡು ಆವೇಶಭರಿತರಾಗಿ ಕುಣಿದು ಮಾರಿಕಾಂಬೆ ತಾಯಿಗೆ ಸೇವೆ ಅರ್ಪಿಸಿದರು. ಮತ್ತೊಂದೆಡೆ ಕ್ಷೇತ್ರಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾಧಿಗಳ ಸುರಕ್ಷತೆಗಾಗಿ ಶಿರಸಿ ನಗರದಾದ್ಯಂತ ಪೊಲೀಸರಿಂದ ಭಾರೀ ಭಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 

ಒಟ್ಟಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಜಾತ್ರೆಯಲ್ಲಿ ಒಂದಾಗಿರುವ ಮಾರಿಕಾಂಬೆಯ ಜಾತ್ರಾ ರಥೋತ್ಸವ ಅದ್ಧೂರಿಯಾಗಿ ನಡೆದಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.
 

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
Read more