ಗುಜರಿ ಸೇರಬೇಕಿದ್ದ ರೈಲ್ವೇ ಬೋಗಿ ಇಂದು ಹೈಟೆಕ್ ರೆಸ್ಟೋರೆಂಟ್! ಸಿಟಿಮಂದಿ ಫುಲ್ ಫಿದಾ!

ಗುಜರಿ ಸೇರಬೇಕಿದ್ದ ರೈಲ್ವೇ ಬೋಗಿ ಇಂದು ಹೈಟೆಕ್ ರೆಸ್ಟೋರೆಂಟ್! ಸಿಟಿಮಂದಿ ಫುಲ್ ಫಿದಾ!

Published : May 07, 2024, 05:24 PM IST

ಗುಜರಿ ಸೇರಬೇಕಿದ್ದ ರೈಲ್ವೇ ಬೋಗಿ ಇಂದು ಹೈಟೆಕ್ ರೆಸ್ಟೋರೆಂಟ್ ಆಗಿ ಮಾರ್ಪಟ್ಟಿದೆ. 15 ವರ್ಷದ ಹಳೆಯ ರೈಲಿನ ಬೋಗಿಯನ್ನು ರೆಸ್ಟೋರೆಂಟ್ ಆಗಿ ಬದಲಾವಣೆ ಮಾಡಲಾಗಿದ್ದು, ಮೆಜೆಸ್ಟಿಕ್ ರೈಲ್ವೇ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದಲ್ಲಿ ಇವುಗಳನ್ನು ಕಾಣಬಹುದಾಗಿದೆ.

ರೈಲ್ವೇ ಇಲಾಖೆ (Railway Department) ಆಗಾಗ್ಗೆ ವಿಶೇಷ  ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಯಾಣಿಕರಿಗೆ ಭಿನ್ನ ಅನುಭವ ನೀಡುವ ಕೆಲಸ ಮಾಡುತ್ತಲೇ ಇರುತ್ತದೆ. ಅದರಂತೆ  ರೈಲ್ವೇ ಇಲಾಖೆ ಈಗ  ಕಸವನ್ನು ರಸವಾಗಿಸುವ ಕೆಲಸ ಮಾಡಿದೆ. ರೈಲ್ವೇ ಇಲಾಖೆಯ ಈ ಅದ್ಭುತ ಪ್ಲ್ಯಾನ್‌ಗೆ ಸಿಟಿಮಂದಿ ಫುಲ್ ಫಿದಾ ಆಗಿದ್ದಾರೆ. ಅಂದರೆ ಗುಜರಿ ಸೇರಬೇಕಿದ್ದ ರೈಲ್ವೇ ಬೋಗಿ (Railway bogie) ಇಂದು ಹೈಟೆಕ್ ರೆಸ್ಟೋರೆಂಟ್ (Restaurant) ಆಗಿ ಮಾರ್ಪಟ್ಟಿದೆ. 15 ವರ್ಷದ ಹಳೆಯ ರೈಲಿನ ಬೋಗಿಯನ್ನು ರೆಸ್ಟೋರೆಂಟ್ ಆಗಿ ಬದಲಾವಣೆ ಮಾಡಲಾಗಿದ್ದು, ಮೆಜೆಸ್ಟಿಕ್ ರೈಲ್ವೇ ನಿಲ್ದಾಣ (Majestic Railway Station) ಮತ್ತು ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದಲ್ಲಿ ಜನರನ್ನು ಕೈಬೀಸಿ ಕರೆಯುತ್ತಿವೆ. 

ಈ ನಡುವೆ  ಬೋಗಿ ಬಳಕೆ ಮಾಡಿಕೊಂಡು ವಿನೂತನ ರೆಸ್ಟೋರೆಂಟ್ ಮಾಡಲು ಉಚಿತ ಬೋಗಿ ನೀಡಲು ರೈಲ್ವೇ ಇಲಾಖೆ ಸಹ ಮುಂದಾಗಿದೆ. ಈ ಕಾರಣಕ್ಕೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಈ ರೆಸ್ಟೋರೆಂಟ್‌ ಅನ್ನು ಖಾಸಗಿ ಕಂಪನಿಗೆ ವರ್ಷಕ್ಕೆ 87 ಲಕ್ಷ ರೂಪಾಯಿಗೆ ಗುತ್ತಿಗೆ ನೀಡಲಾಗಿದೆ. ಇನ್ನು ಈ ಈ ರೆಸ್ಟೋರೆಂಟ್ ನಲ್ಲಿ ಒಮ್ಮೆ 40 ಜನ ಕೂತು ಊಟ ಮಾಡಬಹುದಾಗಿದೆ . ಅಲ್ಲದೆ  ದಿನದ 24 ಗಂಟೆಗಳ ಕಾಲ ಈ ರೆಸ್ಟೋರೆಂಟ್ ಕಾರ್ಯನಿರ್ವಹಿಸಲಿದ್ದು, ರೈಲ್ವೇ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಹೈಟೆಕ್ ಫೀಲ್  ನೀಡಲಿದೆ. ಇಷ್ಟು ಮಾತ್ರವಲ್ಲದೆ ಗ್ರಾಹಕರ ಭದ್ರತೆಯ ದೃಷ್ಟಿಯಿಂದ 5 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ನಡುವೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಪ್ರತಿನಿತ್ಯ 2 ಲಕ್ಷ ಜನ ಸಂಚಾರ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಸಿಡಿ ಕೇಸ್‌ನ ಕಥಾ ನಾಯಕ ಕಾಂಗ್ರೆಸ್‌ನ ಡಿಕೆಶಿ?

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!