ಕಲ್ಪತರು ನಾಡಿಗೂ ಕಾವೇರಿ ನೀರಿನ ಸಂಕಷ್ಟ: ತುಮಕೂರಿನಲ್ಲಿ ಕುಡಿಯೋ ನೀರಿಗೆ ಹಾಹಾಕಾರ ?

ಕಲ್ಪತರು ನಾಡಿಗೂ ಕಾವೇರಿ ನೀರಿನ ಸಂಕಷ್ಟ: ತುಮಕೂರಿನಲ್ಲಿ ಕುಡಿಯೋ ನೀರಿಗೆ ಹಾಹಾಕಾರ ?

Published : Oct 13, 2023, 10:35 AM IST

ತಮಿಳುನಾಡಿಗೆ ಪ್ರತಿನಿತ್ಯ ಕಾವೇರಿ ನೀರು ಹರಿಯುತ್ತಿದೆ. ಇದರ ಎಫೆಕ್ಟ್ ತುಮಕೂರಿಗೂ ತಟ್ಟಿದೆ. ಹೇಮಾವತಿಯಿಂದ ಸರ್ಕಾರ ನೀರು ಹರಿಸುತ್ತಿದ್ರೆ..ಇತ್ತ ಕಲ್ಪತರು ನಾಡಿಗೆ ಕುಡಿಯೋ ನೀರಿನ ಆತಂಕ ಎದುರಾಗಿದೆ.

ಕಾವೇರಿ ನೀರಿಗಾಗಿ ತಮಿಳುನಾಡು ಜಿದ್ದಿಗೆ ಬಿದ್ದಿದೆ. ತಮಿಳುನಾಡು ಮೊಂಡಾಟ, ಹಠವಾಧಿ ನಡೆಯಿಂದಲೇ ನೀರು ಪಡೆಯುತ್ತಿದೆ. ಮೊನ್ನೆ ಕೂಡ ನಿತ್ಯ 3 ಸಾವಿರ ಕ್ಯೂಸೆಕ್ನಂತೆ 15 ದಿನ ತಮಿಳುನಾಡಿಗೆ ನೀರು ಬಿಡುವಂತೆ CWRC ಸೂಚಿಸಿದೆ. ಕರ್ನಾಟಕದಲ್ಲೇ(Karnataka) ನೀರಿಲ್ಲದೆ ಬರ ತಾಂಡವವಾಡ್ತಿದೆ. ಬರದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ(Tamilnadu) ನೀರು ಬಿಟ್ಟು ಆದೇಶ ಪಾಲಿಸುತ್ತಿದೆ.. ಇದರಿಂದ ಕಾವೇರಿ ನೀರನ್ನೇ ನಂಬಿಕೊಂಡಿದ್ದ ಮಂಡ್ಯ, ಮೈಸೂರು, ಬೆಂಗಳೂರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲ ಕಾವೇರಿ(Cauvery) ನೀರಿನ ಬರ ತುಮಕೂರು ಜಿಲ್ಲೆಗೂ ತಟ್ಟಿದೆ. ತುಮಕೂರು ಜನ ಕುಡಿಯೋ ನೀರಿಗಾಗಿ ಹೇಮಾವತಿ ನೀರನ್ನೇ ಅವಲಂಬಿಸಿದ್ದಾರೆ. ಹಾಸನದ ಗೋರೂರು ಡ್ಯಾಂನಿಂದ ತುಮಕೂರು(Tumakuru) ಜಿಲ್ಲೆಗೆ ಹೇಮಾವತಿ ನೀರು ಪೂರೈಕೆ ಆಗುತ್ತೆ..ಆದ್ರೆ ಈ ಬಾರಿ ಹೇಮಾವತಿ(Hemavati) ಮೂಲಕ ತಮಿಳುನಾಡಿಗೆ ಸರ್ಕಾರ ನೀರು ಹರಿಸಿದೆ. ಹೀಗಾಗಿ ಗೋರಾರು ಜಲಾಶಯದಲ್ಲಿ 14 ಟಿಎಮ್‌ಸಿ ನೀರು ಇದೆ ಎನ್ನಲಾಗ್ತಿದೆ. ಇಷ್ಟು ನೀರು ತುಮಕೂರು ಹಾಗೂ ಹಾಸನ ಜಿಲ್ಲೆಗೆ ಹರಿಸಲು ಸಾಲುತ್ತಿಲ್ಲ. ತುಮಕೂರು  ಜಿಲ್ಲೆಗೆ ಗೋರಾರು ಜಲಾಶಯದಿಂದ ಪ್ರತಿ ವರ್ಷ 25 TMC ನೀರು ಬಿಡಬೇಕು..ಆದ್ರೆ ಇಲ್ಲಿವರೆಗೆ ಕೇವಲ 5 TMC ನೀರು ಮಾತ್ರ ಹರಿಸಿದೆ. ಇನ್ನು 20 ಟಿಎಂಸಿ ನೀರು ಬಿಡಬೇಕಿರುವ ಜಲಾಶಯದಲ್ಲೇ 14 ಟಿಎಂಸಿ ನೀರಿದ್ದು ಇದು ಎರಡು ಜಿಲ್ಲೆಗೆ ಹಂಚಿಕೆ ಆಗಬೇಕು. ಈ ನೀರು ಡಿಸೆಂಬರ್ ತನಕ ಮಾತ್ರ ಕುಡಿಯೋಕೆ ಸಾಧ್ಯವಾಗುತ್ತೆ. ಆ ನಂತರ ತುಮಕೂರಿನ ಜನ ಕುಡಿಯೋ ನೀರಿಗೂ ಪರದಾಡಬೇಕಾಗುತ್ತೆ. ಹೀಗಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಹಾಸನ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮತ್ತು ತುಮಕೂರು ಉಸ್ತುವಾರಿ ಸಚಿವ ಜಿ.ಪರಮೇಶ್ವರ್‌ಗೆ ಪತ್ರ ಬರೆದಿದ್ದು ಜಿಲ್ಲೆಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಅಚ್ಚರಿ ಮೂಡಿಸುತ್ತೆ ಸ್ಟಾರ್ಸ್ ಸಿಕ್ರೇಟ್‌ ಡಯೆಟ್: 72ರ ರಜಿನಿಕಾಂತ್ ಹೈ ಬಿಪಿ ಬಂದಾಗ ಏನ್ಮಾಡಿದ್ರು ಗೊತ್ತಾ?

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
Read more