ಕಲ್ಪತರು ನಾಡಿಗೂ ಕಾವೇರಿ ನೀರಿನ ಸಂಕಷ್ಟ: ತುಮಕೂರಿನಲ್ಲಿ ಕುಡಿಯೋ ನೀರಿಗೆ ಹಾಹಾಕಾರ ?

ಕಲ್ಪತರು ನಾಡಿಗೂ ಕಾವೇರಿ ನೀರಿನ ಸಂಕಷ್ಟ: ತುಮಕೂರಿನಲ್ಲಿ ಕುಡಿಯೋ ನೀರಿಗೆ ಹಾಹಾಕಾರ ?

Published : Oct 13, 2023, 10:35 AM IST

ತಮಿಳುನಾಡಿಗೆ ಪ್ರತಿನಿತ್ಯ ಕಾವೇರಿ ನೀರು ಹರಿಯುತ್ತಿದೆ. ಇದರ ಎಫೆಕ್ಟ್ ತುಮಕೂರಿಗೂ ತಟ್ಟಿದೆ. ಹೇಮಾವತಿಯಿಂದ ಸರ್ಕಾರ ನೀರು ಹರಿಸುತ್ತಿದ್ರೆ..ಇತ್ತ ಕಲ್ಪತರು ನಾಡಿಗೆ ಕುಡಿಯೋ ನೀರಿನ ಆತಂಕ ಎದುರಾಗಿದೆ.

ಕಾವೇರಿ ನೀರಿಗಾಗಿ ತಮಿಳುನಾಡು ಜಿದ್ದಿಗೆ ಬಿದ್ದಿದೆ. ತಮಿಳುನಾಡು ಮೊಂಡಾಟ, ಹಠವಾಧಿ ನಡೆಯಿಂದಲೇ ನೀರು ಪಡೆಯುತ್ತಿದೆ. ಮೊನ್ನೆ ಕೂಡ ನಿತ್ಯ 3 ಸಾವಿರ ಕ್ಯೂಸೆಕ್ನಂತೆ 15 ದಿನ ತಮಿಳುನಾಡಿಗೆ ನೀರು ಬಿಡುವಂತೆ CWRC ಸೂಚಿಸಿದೆ. ಕರ್ನಾಟಕದಲ್ಲೇ(Karnataka) ನೀರಿಲ್ಲದೆ ಬರ ತಾಂಡವವಾಡ್ತಿದೆ. ಬರದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ(Tamilnadu) ನೀರು ಬಿಟ್ಟು ಆದೇಶ ಪಾಲಿಸುತ್ತಿದೆ.. ಇದರಿಂದ ಕಾವೇರಿ ನೀರನ್ನೇ ನಂಬಿಕೊಂಡಿದ್ದ ಮಂಡ್ಯ, ಮೈಸೂರು, ಬೆಂಗಳೂರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲ ಕಾವೇರಿ(Cauvery) ನೀರಿನ ಬರ ತುಮಕೂರು ಜಿಲ್ಲೆಗೂ ತಟ್ಟಿದೆ. ತುಮಕೂರು ಜನ ಕುಡಿಯೋ ನೀರಿಗಾಗಿ ಹೇಮಾವತಿ ನೀರನ್ನೇ ಅವಲಂಬಿಸಿದ್ದಾರೆ. ಹಾಸನದ ಗೋರೂರು ಡ್ಯಾಂನಿಂದ ತುಮಕೂರು(Tumakuru) ಜಿಲ್ಲೆಗೆ ಹೇಮಾವತಿ ನೀರು ಪೂರೈಕೆ ಆಗುತ್ತೆ..ಆದ್ರೆ ಈ ಬಾರಿ ಹೇಮಾವತಿ(Hemavati) ಮೂಲಕ ತಮಿಳುನಾಡಿಗೆ ಸರ್ಕಾರ ನೀರು ಹರಿಸಿದೆ. ಹೀಗಾಗಿ ಗೋರಾರು ಜಲಾಶಯದಲ್ಲಿ 14 ಟಿಎಮ್‌ಸಿ ನೀರು ಇದೆ ಎನ್ನಲಾಗ್ತಿದೆ. ಇಷ್ಟು ನೀರು ತುಮಕೂರು ಹಾಗೂ ಹಾಸನ ಜಿಲ್ಲೆಗೆ ಹರಿಸಲು ಸಾಲುತ್ತಿಲ್ಲ. ತುಮಕೂರು  ಜಿಲ್ಲೆಗೆ ಗೋರಾರು ಜಲಾಶಯದಿಂದ ಪ್ರತಿ ವರ್ಷ 25 TMC ನೀರು ಬಿಡಬೇಕು..ಆದ್ರೆ ಇಲ್ಲಿವರೆಗೆ ಕೇವಲ 5 TMC ನೀರು ಮಾತ್ರ ಹರಿಸಿದೆ. ಇನ್ನು 20 ಟಿಎಂಸಿ ನೀರು ಬಿಡಬೇಕಿರುವ ಜಲಾಶಯದಲ್ಲೇ 14 ಟಿಎಂಸಿ ನೀರಿದ್ದು ಇದು ಎರಡು ಜಿಲ್ಲೆಗೆ ಹಂಚಿಕೆ ಆಗಬೇಕು. ಈ ನೀರು ಡಿಸೆಂಬರ್ ತನಕ ಮಾತ್ರ ಕುಡಿಯೋಕೆ ಸಾಧ್ಯವಾಗುತ್ತೆ. ಆ ನಂತರ ತುಮಕೂರಿನ ಜನ ಕುಡಿಯೋ ನೀರಿಗೂ ಪರದಾಡಬೇಕಾಗುತ್ತೆ. ಹೀಗಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಹಾಸನ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮತ್ತು ತುಮಕೂರು ಉಸ್ತುವಾರಿ ಸಚಿವ ಜಿ.ಪರಮೇಶ್ವರ್‌ಗೆ ಪತ್ರ ಬರೆದಿದ್ದು ಜಿಲ್ಲೆಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಅಚ್ಚರಿ ಮೂಡಿಸುತ್ತೆ ಸ್ಟಾರ್ಸ್ ಸಿಕ್ರೇಟ್‌ ಡಯೆಟ್: 72ರ ರಜಿನಿಕಾಂತ್ ಹೈ ಬಿಪಿ ಬಂದಾಗ ಏನ್ಮಾಡಿದ್ರು ಗೊತ್ತಾ?

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
Read more