ಕಲ್ಪತರು ನಾಡಿಗೂ ಕಾವೇರಿ ನೀರಿನ ಸಂಕಷ್ಟ: ತುಮಕೂರಿನಲ್ಲಿ ಕುಡಿಯೋ ನೀರಿಗೆ ಹಾಹಾಕಾರ ?

ಕಲ್ಪತರು ನಾಡಿಗೂ ಕಾವೇರಿ ನೀರಿನ ಸಂಕಷ್ಟ: ತುಮಕೂರಿನಲ್ಲಿ ಕುಡಿಯೋ ನೀರಿಗೆ ಹಾಹಾಕಾರ ?

Published : Oct 13, 2023, 10:35 AM IST

ತಮಿಳುನಾಡಿಗೆ ಪ್ರತಿನಿತ್ಯ ಕಾವೇರಿ ನೀರು ಹರಿಯುತ್ತಿದೆ. ಇದರ ಎಫೆಕ್ಟ್ ತುಮಕೂರಿಗೂ ತಟ್ಟಿದೆ. ಹೇಮಾವತಿಯಿಂದ ಸರ್ಕಾರ ನೀರು ಹರಿಸುತ್ತಿದ್ರೆ..ಇತ್ತ ಕಲ್ಪತರು ನಾಡಿಗೆ ಕುಡಿಯೋ ನೀರಿನ ಆತಂಕ ಎದುರಾಗಿದೆ.

ಕಾವೇರಿ ನೀರಿಗಾಗಿ ತಮಿಳುನಾಡು ಜಿದ್ದಿಗೆ ಬಿದ್ದಿದೆ. ತಮಿಳುನಾಡು ಮೊಂಡಾಟ, ಹಠವಾಧಿ ನಡೆಯಿಂದಲೇ ನೀರು ಪಡೆಯುತ್ತಿದೆ. ಮೊನ್ನೆ ಕೂಡ ನಿತ್ಯ 3 ಸಾವಿರ ಕ್ಯೂಸೆಕ್ನಂತೆ 15 ದಿನ ತಮಿಳುನಾಡಿಗೆ ನೀರು ಬಿಡುವಂತೆ CWRC ಸೂಚಿಸಿದೆ. ಕರ್ನಾಟಕದಲ್ಲೇ(Karnataka) ನೀರಿಲ್ಲದೆ ಬರ ತಾಂಡವವಾಡ್ತಿದೆ. ಬರದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ(Tamilnadu) ನೀರು ಬಿಟ್ಟು ಆದೇಶ ಪಾಲಿಸುತ್ತಿದೆ.. ಇದರಿಂದ ಕಾವೇರಿ ನೀರನ್ನೇ ನಂಬಿಕೊಂಡಿದ್ದ ಮಂಡ್ಯ, ಮೈಸೂರು, ಬೆಂಗಳೂರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲ ಕಾವೇರಿ(Cauvery) ನೀರಿನ ಬರ ತುಮಕೂರು ಜಿಲ್ಲೆಗೂ ತಟ್ಟಿದೆ. ತುಮಕೂರು ಜನ ಕುಡಿಯೋ ನೀರಿಗಾಗಿ ಹೇಮಾವತಿ ನೀರನ್ನೇ ಅವಲಂಬಿಸಿದ್ದಾರೆ. ಹಾಸನದ ಗೋರೂರು ಡ್ಯಾಂನಿಂದ ತುಮಕೂರು(Tumakuru) ಜಿಲ್ಲೆಗೆ ಹೇಮಾವತಿ ನೀರು ಪೂರೈಕೆ ಆಗುತ್ತೆ..ಆದ್ರೆ ಈ ಬಾರಿ ಹೇಮಾವತಿ(Hemavati) ಮೂಲಕ ತಮಿಳುನಾಡಿಗೆ ಸರ್ಕಾರ ನೀರು ಹರಿಸಿದೆ. ಹೀಗಾಗಿ ಗೋರಾರು ಜಲಾಶಯದಲ್ಲಿ 14 ಟಿಎಮ್‌ಸಿ ನೀರು ಇದೆ ಎನ್ನಲಾಗ್ತಿದೆ. ಇಷ್ಟು ನೀರು ತುಮಕೂರು ಹಾಗೂ ಹಾಸನ ಜಿಲ್ಲೆಗೆ ಹರಿಸಲು ಸಾಲುತ್ತಿಲ್ಲ. ತುಮಕೂರು  ಜಿಲ್ಲೆಗೆ ಗೋರಾರು ಜಲಾಶಯದಿಂದ ಪ್ರತಿ ವರ್ಷ 25 TMC ನೀರು ಬಿಡಬೇಕು..ಆದ್ರೆ ಇಲ್ಲಿವರೆಗೆ ಕೇವಲ 5 TMC ನೀರು ಮಾತ್ರ ಹರಿಸಿದೆ. ಇನ್ನು 20 ಟಿಎಂಸಿ ನೀರು ಬಿಡಬೇಕಿರುವ ಜಲಾಶಯದಲ್ಲೇ 14 ಟಿಎಂಸಿ ನೀರಿದ್ದು ಇದು ಎರಡು ಜಿಲ್ಲೆಗೆ ಹಂಚಿಕೆ ಆಗಬೇಕು. ಈ ನೀರು ಡಿಸೆಂಬರ್ ತನಕ ಮಾತ್ರ ಕುಡಿಯೋಕೆ ಸಾಧ್ಯವಾಗುತ್ತೆ. ಆ ನಂತರ ತುಮಕೂರಿನ ಜನ ಕುಡಿಯೋ ನೀರಿಗೂ ಪರದಾಡಬೇಕಾಗುತ್ತೆ. ಹೀಗಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಹಾಸನ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮತ್ತು ತುಮಕೂರು ಉಸ್ತುವಾರಿ ಸಚಿವ ಜಿ.ಪರಮೇಶ್ವರ್‌ಗೆ ಪತ್ರ ಬರೆದಿದ್ದು ಜಿಲ್ಲೆಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಅಚ್ಚರಿ ಮೂಡಿಸುತ್ತೆ ಸ್ಟಾರ್ಸ್ ಸಿಕ್ರೇಟ್‌ ಡಯೆಟ್: 72ರ ರಜಿನಿಕಾಂತ್ ಹೈ ಬಿಪಿ ಬಂದಾಗ ಏನ್ಮಾಡಿದ್ರು ಗೊತ್ತಾ?

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more