Dharwad: ಕಾಮಗಾರಿ ಓಕೆ, ತೆರಿಗೆ ಕಟ್ಟಲ್ಲ ಯಾಕೆ?: ಟ್ಯಾಕ್ಸ್‌ ಕಟ್ಟದ ಕಂಪನಿಗೆ ಗ್ರಾಪಂ ನೋಟಿಸ್

Dharwad: ಕಾಮಗಾರಿ ಓಕೆ, ತೆರಿಗೆ ಕಟ್ಟಲ್ಲ ಯಾಕೆ?: ಟ್ಯಾಕ್ಸ್‌ ಕಟ್ಟದ ಕಂಪನಿಗೆ ಗ್ರಾಪಂ ನೋಟಿಸ್

Published : Feb 12, 2022, 12:59 PM IST

*  ತೆರಿಗೆಗಾಗಿ ಹಠ ಬಿಡದ ಗ್ರಾಮ ಪಂಚಾಯತಿ ಪಿಡಿಓ
*  ನೋಟಿಸ್ ಜಾರಿ  ಮಾಡಿದ್ರೂ ತೆರಿಗೆ ಕಟ್ಟದೆ ಕಾಮಗಾರಿ
*  ಆಯುಕ್ತರಿಂದ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ
 

ಧಾರವಾಡ(ಫೆ.12):  ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ಕೊಟ್ಟು ತರಾಟೆಗೆ ತೆಗೆದುಕ್ಕೊಳ್ಳುತ್ತಿರುವ ಗ್ರಾಮಸ್ಥರು. ಇದೆಲ್ಲ ನಡಿತಾ ಇರೋದು ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ. ಗ್ರಾಮ ಪಂಚಾಯತಿ ಪಿಡಿಓನಿಂದ ಎಲ್ ಆ್ಯಂಡ್‌ ಟಿ‌ ಕಂಪನಿಗೆ ನೋಟಿಸ್ ಜಾರಿಯಾಗಿದೆ. ನೋಟಿಸ್ ಜಾರಿ ಯಾಗಿ ಮೂರು ತಿಂಗಳು ಕಳೆದ್ರೂ ತೆರಿಗೆ ಕಟ್ಟದೆ, ಎಲ್ ಆ್ಯಂಡ್‌ ಟಿ ಕಂಪನಿ ಕೆಲಸವನ್ನ‌ ಮಾಡುತ್ತಿದೆ. 

ಸವದತ್ತಿಯಿಂದ ಧಾರವಾಡದವರೆಗೆ ನಡೆಯುತ್ತಿರುವ 24x7 ಕುಡಿಯುವ ನೀರಿನ ಕಾಮಗಾರಿ ಇದಾಗಿದೆ. ಇನ್ನು ಪಂಚಾಯತ ರಾಜ್ಯ ಕಾಯ್ದೆ 1993 ರ 66 ಎ ಮತ್ತು 66 ಬಿ ಅಧಿನಿಯಮದಡಿಯಲ್ಲಿ ನೋಟಿಸ್ ಜಾರಿ  ಮಾಡಿದ್ರೂ, ಪಂಚಾಯತಿಗೆ ತೆರಿಗೆ ಕಟ್ಟದೆ ಕೆಲಸವನ್ನ ಮಾಡುತ್ತಿದ್ದಾರೆ‌. ಗ್ರಾಮ ಪಂಚಾಯತಿಯ 47,348.220 ಚದರ ಮಿಟರ್ ಜಾಗವನ್ನ ಬಳಕೆ ಮಾಡಿಕೊಂಡ ಎಲ್ ಆ್ಯಂಡ್‌ ಟಿ ಕಂಪನಿ 2 ಕೋಟಿ 72 ಲಕ್ಷದ 25 ಸಾವಿರದ 226 ರೂಪಾಯಿ 50 ಪೈಸೆ ಟ್ಯಾಕ್ಸ್ ಕಟ್ಟಬೇಕಿದೆ.  ಹಾರೋಬೆಳವಡಿ ಗ್ರಾಮ ಪಂಚಾಯತಿ ಪಿಡಿಓ ಅವರಿಂದ 13 ಅಕ್ಟೋಬರ್ 2021ರಂದು ನೋಟಿಸ್ ಜಾರಿಯಾಗಿದೆ. ಇನ್ನು ಕಾಮಗಾರಿ ಕಳಪೆಯಾಗುತ್ತಿದೆ ಎಂದು ತಾ ಪಂ ಮಾಜಿ ಆಧ್ಯಕ್ಷ ಈರಣ್ಣ ಏಣಗಿ ಆರೋಪವನ್ನ ಮಾಡಿದ್ದಾರೆ.

Hijab Row: ಮೌನವಾಗಿರುವಂತೆ ಡಿಕೆಶಿ ಸೂಚನೆ, ಪರ ಮಾತನಾಡುವಂತೆ ಸಿದ್ದರಾಮಯ್ಯ ಸಲಹೆ

ನೋಟಿಸ್ ನೀಡಿ 7 ದಿನಗಳೊಳಗಾಗಿ ಪಂಚಾಯತಿ ಟ್ಯಾಕ್ಸ್ ಕಟ್ಟಬೇಕು ಎಂದು ನೋಟಿಸ್ ಜಾರಿಯಾದ್ರು ಇನ್ನುವೆರೆಗೂ ಟ್ಯಾಕ್ಸ್ ಕಟ್ಟದೆ ಕೆಲಸವನ್ನ ಆರಂಭಿಸಿದ್ದಾರೆ. ಬರೊಬ್ಬರಿ 760 ಕೋಟಿ ಪ್ರೊಜೆಕ್ಟ್‌ ಕಾಮಗಾರಿ ಕಳೆದ 8 ತಿಂಗಳಿಂದ ಆರಂಭವಾಗಿದ್ದು, ಇನ್ನು ಐದು ವರ್ಷ ನಡೆಯಲಿದೆ. ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಗೆ ಪ್ರತಿ ಮನೆ ಮನೆಗೆ ದಿನದ 24 ಗಂಟೆ ಕುಡಿಯುವ ನೀರಿನ ಯೋಜನೆಯನ್ನ ಜಾರಿಗೆ ತಂದಿದೆ. 2023 ಕ್ಕೆ ಇದನ್ನ ಕಂಪ್ಲೀಟ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ತೆರಿಗೆಯನ್ನ ಕಟ್ಟಬೇಕು ಎಂಬ ವಿಚಾರವಾಗಿ ಪಾಲಿಕೆ‌ ಕಮಿಷನರ್ ಗೋಪಾಲಕೃಷ್ಣ ಅವರನ್ನ ಕೇಳಿದ್ರೆ ನಾನು ಈಗತಾನೆ ಅಧಿಕಾರವನ್ನ ವಹಿಸಿಕ್ಕೊಂಡಿದ್ದೆನೆ, ಆದಷ್ಟೂ ಬೇಗ ನಾನು ತೆರಿಗೆ ಕಟ್ಟೋದರ ಬಗ್ಗೆ ವಿಚಾರ ಮಾಡಿ, ಒಂದು ವೇಳೆ ಕಟ್ಟಲೆಬೇಕು ಎಂದು ಆದೇಶ ವಿದ್ರೆ ಅದನ್ನ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಾಗಿ ನಾವು ಕಟ್ಟಿಸಲೆಬೇಕಾಗುತ್ತದೆ. ಆದಷ್ಟೂ ಬೇಗ ನಾನು ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತೆನೆ ಅಂತಾರೆ ಕಮಿಷನರ್. 
 

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
Read more