ಒಂದು ದಿನದ ಸಮಸ್ಯೆ ಅಲ್ಲ, ಇವರದ್ದು ನಿತ್ಯ ನರಕ: 6 ವರ್ಷವಾದ್ರೂ ಉದ್ಘಾಟನೆಯಾಗದ ಶೌಚಾಲಯ

ಒಂದು ದಿನದ ಸಮಸ್ಯೆ ಅಲ್ಲ, ಇವರದ್ದು ನಿತ್ಯ ನರಕ: 6 ವರ್ಷವಾದ್ರೂ ಉದ್ಘಾಟನೆಯಾಗದ ಶೌಚಾಲಯ

Published : Sep 12, 2023, 01:17 PM IST

ಈ ರಾಜಕಾರಣಿಗಳು ಅದನ್ನ ಮುಕ್ತ ಮಾಡ್ತೀವಿ, ಇದನ್ನ ಮುಕ್ತ ಮಾಡ್ತೀವಿ ಅಂತಾರೆ. ಅಧಿಕಾರಿ ಗಳು ಹೊಸದ್ರಲ್ಲಿ ಹುಮ್ಮಸ್ಸಲ್ಲಿ ಮಾಡೋಕು ಮುಂದಾಗ್ತಾರೆ. ಆಮೇಲೆ ಆ ಯೋಜನೆಗಳನ್ನ ಹೆಂಗ್ ಹಳ್ಳ ಹಿಡಿಸಿ ಬಿಡ್ತಾರೆ ಅಂದ್ರೆ ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಸ್ಟೋರಿ. 

ಕಾಲಲ್ಲಿ ರಾಡ್ ಇದೆ ಆದ್ರೂ ಹಳ್ಳದಾಟಿಯೇ ಶೌಚ್ಯಕ್ಕೆ ಹೋಗ್ಬೇಕು. ಇಳಿ ವಯಸ್ಸಲ್ಲಿ ಮನೆ ಮೆಟ್ಟಿಲು ಹ ತ್ತೋದೇ ಕಷ್ಟ. ಆದ್ರೂ, ಶೌಚಕ್ಕೆ  ತಗ್ಗು ದಿನ್ನೆ ಹತ್ಬೇಕು. ಇದು ಒಂದು ದಿನದ ಸಮಸ್ಯೆ ಅಲ್ಲ. ಇವ್ರದ್ದು ನಿತ್ಯ ನರಕ. ಬಡಾವಣೆಗೆ ಸರಿಯಾದ ವಿದ್ಯುತ್ ಲೈಟ್‌ಗಳೂ (Lights) ಇಲ್ಲ. ಹೀಗಾಗಿ ರಾತ್ರಿ ಹೊತ್ತು ಶೌಚ್ಯಕ್ಕೆ ಹೋಗ್ಬೇಕೆಂದ್ರೆ ಕತ್ತಲೆಯಲ್ಲಿ ಟಾರ್ಚ್ ಹಿಡ್ಕೊಂಡು ಹೋಗ್ಬೇಕು. ಮನೆ ಎದ್ರು ಇರೋ ಶೌಚಾಲಯಕ್ಕೆ(Toilet) ಕನೆಕ್ಷನ್ ಇಲ್ಲ. ಹೀಗಾಗಿ ನಿತ್ಯ ನರಕದಲ್ಲೇ ಬಡಾವಣೆ ಜನ ಜೀವನ ಸಾಗಿಸ್ತಿದ್ದಾರೆ. ಅಷ್ಟಕ್ಕೂ ಈ ದೃಶ್ಯ ಕಂಡು ಬಂದಿದ್ದು ಗದಗ(Gadag) ನಗರದ ಹೊರ ವಲಯದ ಗಂಗಿಮಡಿ ಗಂಗಾನಗರ ಬಡಾವಣೆಯ ಬಯಲು ಶೌಚದ ಸಮಸ್ಯೆ ಹೇಳ ತೀರದು. ಮಳೆ ಇರ್ಲಿ, ರಾತ್ರಿಯಾಗಿರ್ಲಿ ಮಹಿಳೆಯರು ಹಳ್ಳ ದಾಟಿ ಬಯ ಲಿಗೆ ಶೌಚಕ್ಕೆ ಹೋಗ್ಬೇಕು.. ಮಳೆ ಅಬ್ಬರಿಸಿದ್ರೆ ಹಳ್ಳ ತುಂಬುತ್ತೆ.. ಹಳ್ಳ ಕಟ್ಕೊಂಡ್ರೆ ರಸ್ತೆ ಬ್ಲಾಕ್. 

ಬಡಾವಣೆಯ ಫಸ್ಟ್ ಕ್ರಾಸ್ ನಲ್ಲಿ 50 ಕ್ಕೂ ಹೆಚ್ಚು ಮನೆ ಇವೆ. ನೂರಾರು ಜನರು ವಾಸಿಸುತ್ತಾರೆ. ಅವ್ರೆಲ್ಲರಿಗೂ ಹಳ್ಳದ ಆಚಾಯ ಖಾಲಿ ಜಾಗೆಯೇ ಶೌಚಾಲಯ. ನಗರದ ಹೊರವಲಯದಲ್ಲಿರೋ ಗಂಗಿಮಡಿ ಗಂಗಾನಗರ ಬಡಾವಣೆಯಲ್ಲಿ ಪುಂಡರ ಕಾಟವೂ ಜಾಸ್ತಿ. ಶೌಚಕ್ಕೆ ಅಂತಾ ಬಯಲಿಗೆ ಹೋಗೋ ಮಹಿಳೆಯರ ಬಳಿ ಮೊಬೈಲ್ ಕಿತ್ತುಕೊಳ್ಳೋ ಪ್ರಕರಣವೂ ನಡೆದಿವೆಂತೆ. ಬಡಾವಣೆಯ ಹಿರಿಯ ಅಜ್ಜಿಯೊಬ್ಬರಿಗೆ ಕಾಲಿನಲ್ಲಿ ರಾಡ್ ಹಾಕಿದೆ. ಕಾಲು ನೋವಿದ್ರೂ ಹಳ್ಳದ ದಾಟಿ ಬಹಿರ್ದೆಸೆಗೆ ಹೋಗ್ಬೇಕು. 

ಮನೆಗೊಂದು ಶೌಚಾಲಯ ಅನ್ನೋ ಯೋಜನೆಯಡಿ ಮನೆಗೊಂದು ಶೌಚಾಲಯ ನಿರ್ಮಿಸಲಾಗಿದೆ. ಆದ್ರೆ, ಶೌಚಾಲಯಕ್ಕೆ ಪೈಪ್ ಕನೆಕ್ಷನ್ ಕೊಟ್ಟಿಲ್ಲ. ಹೀಗಾಗಿ ಟಾಯ್ಲೆಟ್ ಗಳು ಇದ್ದೂ ಇಲ್ಲವಾಗಿದೆ. ಗದಗ ಬೆಟಗೇರಿ ನಗರಸಭೆ 2017 ರಲ್ಲೇ ಬಡಾವಣೆಯಲ್ಲಿ ಪಬ್ಲಿಕ್ ಟಾಯ್ಲೆಟ್ ನಿರ್ಮಿಸಿದೆ. ಕಟ್ಟಡ ರೆಡಿ ಇದೆ..  ಕಟ್ಟಡಕ್ಕೆ ಬೋರ್  ವೆಲ್ ವ್ಯವಸ್ಥೆಯೂ ಇದೆ. ಆದ್ರೆ, ಆರು ವರ್ಷವಾದ್ರೂ ಸಾರ್ವಜನಿಕ ಶೌಚಾಲಯ ಉದ್ಘಾ ನೆಯಾಗಿಲ್ಲ. ನಗರಸಭೆ ಅಧಿಕಾರಿಗಳನ್ನ ಕೇಳಿದ್ರೆ ನೀರಿಟ್ಯಾಂಕ್ ಅಳವಡಿಸ್ಬೇಕು, ಮಾಡ್ತೀವಿ. ನೋಡ್ತೀವಿ ಅಂತಾ ಹಾರಿಕೆ ಉತ್ತರ ಕೊಡ್ತಿದ್ದಾರಂತೆ. ಸ್ವಚ್ಛ ಭಾರತ ಯೋಜನೆಯಡಿ ನಿರ್ಮಾಣವಾಗಿರೋ ಟಾಯ್ಲೆಟ್ ಇದ್ರೂ ಪಕ್ಕದಲ್ಲೇ ಬಯಲು ಬಹಿರ್ದೆಸೆಗೆ ಹೋಗೋ ಪರಿಸ್ಥಿತಿ.

ಇದನ್ನೂ ವೀಕ್ಷಿಸಿ:  ವಿಷ ಕೇಳಿದ ಕುಟುಂಬಕ್ಕೆ ಅಮೃತ ಕೊಡಿಸಿದ ಬಿಗ್ -3: 8 ವರ್ಷಗಳಿಂದ ಆಗದ್ದು ಕೇವಲ 4 ದಿನದಲ್ಲಿ ಆಯ್ತು !

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more