ರೈತರ ನೋವನ್ನ ಕೇಳುವ ಕೃಷಿ ಸಚಿವರೇ ಎಲ್ಲಿದ್ದಿರಪ್ಪಾ..! ಗ್ಯಾರಂಟಿ ಕೊಟ್ಟು..ಸುಲಿಗೆ ಮಾಡ್ತಿದೆಯಾ ರಾಜ್ಯ ಸರ್ಕಾರ..?

ರೈತರ ನೋವನ್ನ ಕೇಳುವ ಕೃಷಿ ಸಚಿವರೇ ಎಲ್ಲಿದ್ದಿರಪ್ಪಾ..! ಗ್ಯಾರಂಟಿ ಕೊಟ್ಟು..ಸುಲಿಗೆ ಮಾಡ್ತಿದೆಯಾ ರಾಜ್ಯ ಸರ್ಕಾರ..?

Published : May 29, 2024, 09:18 AM ISTUpdated : May 29, 2024, 09:19 AM IST

ಬಿತ್ತನೆ ಬೀಜದ ಬೆಲೆ ಈ ಪರಿ ಹೆಚ್ಚು ಮಾಡುವುದು ಎಷ್ಟು ಸರಿ..?
ಗ್ಯಾರಂಟಿ ಕೊಟ್ಟು.. ಸುಲಿಗೆ ಮಾಡ್ತಿದೆಯಾ ರಾಜ್ಯ ಸರ್ಕಾರ..? 
ರೈತ ಸಂಪರ್ಕ ಕೇಂದ್ರದಿಂದ ಬರಿಗೈಯಲ್ಲಿ ರೈತರು ವಾಪಸ್ಸು..!
 

ಕೆಲವೇ ಕೆಲವು ದಿನಗಳ ಹಿಂದಿನ ಮಾತು.. ಎಂಥಾ ಬಿಸ್ಲು ಕಣ್ರಿ. ಕಾಲ ಕೆಳಗಿನ ಭೂಮಿಯೂ ಬಿಸಿಬಿಸಿ ಹಂಚಾಗಿ ಹೋಗಿತ್ತು. ಯಾವಾಗ ಹನಿ ಹನಿ ಮಳೆ ಬಂತೋ ಭೂಮಿಯಷ್ಟೇ ಅಲ್ಲ. ಭೂಮಿಯ ಮೇಲೆ ಇರೋ ಸಕಲ ಜೀವರಾಶಿಗಳಿಗೂ ಜೀವಕ್ಕೆ ಜೀವ ಬಂದಂತಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿದೆ. ಕಳೆದ ವರ್ಷ ಬರಗಾಲದಿಂದ(Drought) ತತ್ತರಿಸಿದ್ದ ಜನ, ಈ ಮಳೆಯನ್ನ ನೋಡಿದ್ದೇ ತಡ, ನಿಟ್ಟುಸಿರು ಬಿಟ್ಟಿದ್ದಾರೆ. ಅದರಲ್ಲೂ ಅನ್ನದಾತರಂತೂ (Farmers) ದೊಡ್ಡ ಹಬ್ಬವನ್ನೇ ಆಚರಿಸ್ತಿದ್ದಾರೆ. ಇನ್ನೇನು ಮಳೆ ಆಯ್ತು..ಬಿತ್ತನೇ ಮಾಡ್ಬೇಕು ಅನ್ನೊ ಲೆಕ್ಕಾಚಾರವನ್ನೂ ಶುರು ಮಾಡಿದ್ದಾರೆ. ಆಗಲೇ ನೋಡಿ ಸರ್ಕಾರ ಅವರಿಗೆ ಎಂಥಾ ಶಾಕ್ ಕೊಟ್ಟಿದೆ ಅಂತ. ಕಳೆದ ವರ್ಷ ಬರಗಾಲ ಹೇಗಿತ್ತು ಅನ್ನೊದು ಎಲ್ಲರಿಗೂ ಅನುಭವ ಆಗ್ಹೋಗಿದೆ. ಅದರಲ್ಲೂ ರೈತರಿಗೆ ಆ ಬರಗಾಲದ ಸದ್ಯಕ್ಕೆ ಸುಧಾರಿಸಿಕೊಳ್ಳೊದಕ್ಕೂ ಆಗದಂತ ಬರೆ ಹಾಕಿದೆ. ಈ ಬಾರಿಯೂ ಅಂಥ ಕರಾಳ ದಿನಗಳು ಬರದೇ ಇರಲಿ ಅಂತ ಅಂದುಕೊಳ್ಳುತ್ತಿರುವಾಗಲೇ ಸರ್ಕಾರ ರೈತರ ಇದೇ, ಬರದ ಬರೆಯ ಮೇಲೆ ಇನ್ನೊಂದು ಬರೆಯನ್ನ ಹಾಕಿದೆ. ಅದೇ ಬಿತ್ತನೆ ಬೀಜದ(Sowing Seeds) ದರದ ಬೆಲೆ(Price High) ಏರಿಕೆಯ  ಕಳೆದ ಬಾರಿ ಮಳೆ ಕೈಕೊಟ್ಟಿತ್ತು. ಈ ಬಾರಿ ಮುಂಗಾರು ಮಳೆ ಚೆನ್ನಾಗಾಗ್ತಿದೆ, ಮುಂದಿನ ದಿನಗಳಲ್ಲೂ ಮಳೆ ಚೆನ್ನಾಗಿ ಆಗುತ್ತೆ. ಈ ಶುಭ ಸುದ್ದಿ ಯಾವಾಗ ಹವಾಮಾನ ಇಲಾಖೆ ಕೊಟ್ಟಿತ್ತೋ, ರೈತರಿಗೆ ಆದ ಸಮಾಧಾನ ಅಷ್ಟಿಷ್ಟಲ್ಲ. ಅವರು ಬೆಳೆಯೋ ಬೆಳೆಗೆ ಮಳೆಯೇ ತಾನೇ ಜೀವಾಳ. ಇನ್ನೇನು ತಡ ಅಂತ ಬಿತ್ತನೆಗೆ ಮುಂದಾದ್ರು.. ಅದಕ್ಕೆ ಈಗ ಬಿತ್ತನೇ ಬೀಜ ಬೇಕು.. ಅದನ್ನ ಕೊಂಡುಕೊಳ್ಳೊದಕ್ಕೆ ಅಂತ ಹೋದ ಅನ್ನದಾತನಿಗೆ ಶಾಕೋ ಶಾಕು.

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? 12 ರಾಶಿಗಳ ಫಲ ಯಾವ ರೀತಿ ಫಲ ಇದೆ?

24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
Read more