ಹಾಸನದಲ್ಲಿ ನಾಡಿಗೆ ಲಗ್ಗೆಯಿಟ್ಟ ಕಾಡಾನೆಗಳ ಕಾರ್ಯಾಚರಣೆ: 4ನೇ ದಿನ ಇನ್ನೊಂದು ಆನೆ ಸೆರೆ !

ಹಾಸನದಲ್ಲಿ ನಾಡಿಗೆ ಲಗ್ಗೆಯಿಟ್ಟ ಕಾಡಾನೆಗಳ ಕಾರ್ಯಾಚರಣೆ: 4ನೇ ದಿನ ಇನ್ನೊಂದು ಆನೆ ಸೆರೆ !

Published : Nov 30, 2023, 10:39 AM IST

ಹಾಸನ ಜಿಲ್ಲೆಯಲ್ಲಿ ಆಪರೇಷನ್ ಎಲಿಫೆಂಟ್ ಮುಂದುವರೆದಿದೆ. ನಾಲ್ಕನೇ ದಿನದ ಕಾರ್ಯಾಚರಣೆಯಲ್ಲಿ ಆಪರೇಷನ್ ಒಂಟಿ ಕೋರೆ ಸಕ್ಸಸ್ ಆಗಿದೆ. ಬರೋಬ್ಬರಿ ಆರು ಗಂಟೆಗಳ ಕಾರ್ಯಾಚರಣೆ ನಂತರ ಕಡೆಗೂ ಒಂಟಿ ಕೋರೆ ಆನೆ ಖೆಡ್ಡಾಕ್ಕೆ ಬೀಳಿಸಿತು ಅರಣ್ಯ ಇಲಾಖೆ.
 

ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಹಾವಳಿ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಹಾಸನ(Hassan) ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ ಭಾಗದಲ್ಲಿ ಗಜಪಡೆ ಆತಂಕದಲ್ಲೇ ಜನ ಬದುಕುತ್ತಿದ್ದಾರೆ. ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಗಳು ಕೇಳಿ ಬಂದಿದ್ವು. ಇದರ ಬೆನ್ನಲ್ಲೇ ಸಾಕಾನೆಗಳೊಂದಿಗೆ ಕಾಡಾನೆ(Elephant) ಹಂಟಿಂಗ್ ಶುರುವಾಗಿತ್ತು.ಕಾರ್ಯಾಚರಣೆ ಶುರುವಾಗಿ ನಾಲ್ಕನೇ ದಿನಕ್ಕೆ ಮತ್ತೊಂದು ಆನೆ  ಸೆರೆ ಹಿಡಿಯಲಾಗಿದೆ. ಬೇಲೂರು ತಾಲೂಕಿನ ಬಿಕ್ಕೋಡು ಭಾಗದಲ್ಲಿ 6 ಸಾಕಾನೆಗಳ ಮೂಲಕ ಕಾಡಾನೆ ಸೆರೆ ಹಿಡಿಯಲಾಗಿದೆ. ಬೆಳಗ್ಗೆ 11 ಗಂಟೆಗೆ ಟ್ರೇಸ್ ಆಗಿದ್ದ ಒಂಟಿ ಕೋರೆ  ಸಲಗ, ಕಿಲೋ ಮೀಟರ್ ಗಟ್ಟಲೇ ಸುತ್ತಾಡಿಸಿತ್ತು. ಕೊನೆಗೂ ಅರವಳಿಕೆ ಚುಚ್ಚು ಮದ್ದು ನೀಡಿ ಆನೆ ಸೆರೆ ಹಿಡಿಯಲಾಯ್ತು. ಸಾಕಾನೆಗಳು ಹಾಗೂ ಜೆಸಿಬಿಗಳ ನೆರವಿನೊಂದಿಗೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿ ಶಿಫ್ಟ್ ಮಾಡಲಾಯಿತು. ಕಾರ್ಯಾಚರಣೆ ವೇಳೆ ಸೆರೆ ಸಿಕ್ಕ ಆನೆಗೆ ಒಂದು ಕೋರೆಯೇ ಇಲ್ಲ. ಈ ಒಂಟಿ ಕೋರೆ ಸಲಗ ಬೇಲೂರು(Belur) ಭಾಗದ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. 30 ಕಾಡಾನೆಗಳಿದ್ದ ದೊಡ್ದ ಗುಂಪನ್ನು ಒಂಟಿ ಕೋರೆ ಸಲಗ ಲೀಡ್ ಮಾಡುತ್ತಿತ್ತು. ಹೀಗಾಗಿ ಅರಣ್ಯ ಇಲಾಖೆ ಆಪರೇಷನ್ ಒಂಟಿ ಸಲಗ ಆರಂಭಿಸಿದ್ದರು.. ಕಾರ್ಯಾಚರಣೆ ಆರಂಭಿಸಿದ ನಾಲ್ಕನೇ ದಿನಕ್ಕೆ ಒಂಟಿ ಕೋರೆ ಸಲಗ ಸೆರೆ ಸಿಕ್ಕಿದ್ದು ಸ್ಥಳೀಯರಲ್ಲಿ ಕೊಂಚ ಸಮಧಾನ ತಂದಿದೆ.ಆನೆಗಳ ಉಪಟಳಕ್ಕೆ ಕಡಿವಾಣ ಹಾಲು ಆಪರೇಷನ್ ಎಲಿಫೆಂಟ್ ನಡೆಸಲಾಗ್ತಿದೆ. ಇದುವರೆಗೆ ಅರಣ್ಯ ಇಲಾಖೆ(Forest Department) ಕಾರ್ಯಾಚರಣೆ ನಡೆಸಿ 3 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, 2 ಕಾಡಾನೆಗಳನ್ನು ಸ್ಥಳಾಂತರ ಮಾಡಿದೆ.ಹೆಚ್ಚಿನ ಉಪಟಳ ನೀಡೋ ಕಾಡಾನೆಗಳ ಶಿಫ್ಟ್ ಮಾಡುತ್ತಿರುವ ಅರಣ್ಯ ಇಲಾಖೆ ನಿರ್ಧಾರ ಜನರ ಆತಂಕವನ್ನು ಕೊಂಚ ದೂರ ಮಾಡಿದೆ.

ಇದನ್ನೂ ವೀಕ್ಷಿಸಿ:  ರಕ್ತದಾನಿಗಳ ಕೊರತೆ, ಬರಿದಾಗುತ್ತಿವೆ ಬ್ಲಡ್ ಬ್ಯಾಂಕ್‌ಗಳು: ತುರ್ತು ಪರಿಸ್ಥಿತಿಯಲ್ಲಿ ಬ್ಲಡ್‌ಗಾಗಿ ರೋಗಿಗಳ ಪರದಾಟ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more