ಹಾಸನದಲ್ಲಿ ನಾಡಿಗೆ ಲಗ್ಗೆಯಿಟ್ಟ ಕಾಡಾನೆಗಳ ಕಾರ್ಯಾಚರಣೆ: 4ನೇ ದಿನ ಇನ್ನೊಂದು ಆನೆ ಸೆರೆ !

ಹಾಸನದಲ್ಲಿ ನಾಡಿಗೆ ಲಗ್ಗೆಯಿಟ್ಟ ಕಾಡಾನೆಗಳ ಕಾರ್ಯಾಚರಣೆ: 4ನೇ ದಿನ ಇನ್ನೊಂದು ಆನೆ ಸೆರೆ !

Published : Nov 30, 2023, 10:39 AM IST

ಹಾಸನ ಜಿಲ್ಲೆಯಲ್ಲಿ ಆಪರೇಷನ್ ಎಲಿಫೆಂಟ್ ಮುಂದುವರೆದಿದೆ. ನಾಲ್ಕನೇ ದಿನದ ಕಾರ್ಯಾಚರಣೆಯಲ್ಲಿ ಆಪರೇಷನ್ ಒಂಟಿ ಕೋರೆ ಸಕ್ಸಸ್ ಆಗಿದೆ. ಬರೋಬ್ಬರಿ ಆರು ಗಂಟೆಗಳ ಕಾರ್ಯಾಚರಣೆ ನಂತರ ಕಡೆಗೂ ಒಂಟಿ ಕೋರೆ ಆನೆ ಖೆಡ್ಡಾಕ್ಕೆ ಬೀಳಿಸಿತು ಅರಣ್ಯ ಇಲಾಖೆ.
 

ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಹಾವಳಿ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಹಾಸನ(Hassan) ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ ಭಾಗದಲ್ಲಿ ಗಜಪಡೆ ಆತಂಕದಲ್ಲೇ ಜನ ಬದುಕುತ್ತಿದ್ದಾರೆ. ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಗಳು ಕೇಳಿ ಬಂದಿದ್ವು. ಇದರ ಬೆನ್ನಲ್ಲೇ ಸಾಕಾನೆಗಳೊಂದಿಗೆ ಕಾಡಾನೆ(Elephant) ಹಂಟಿಂಗ್ ಶುರುವಾಗಿತ್ತು.ಕಾರ್ಯಾಚರಣೆ ಶುರುವಾಗಿ ನಾಲ್ಕನೇ ದಿನಕ್ಕೆ ಮತ್ತೊಂದು ಆನೆ  ಸೆರೆ ಹಿಡಿಯಲಾಗಿದೆ. ಬೇಲೂರು ತಾಲೂಕಿನ ಬಿಕ್ಕೋಡು ಭಾಗದಲ್ಲಿ 6 ಸಾಕಾನೆಗಳ ಮೂಲಕ ಕಾಡಾನೆ ಸೆರೆ ಹಿಡಿಯಲಾಗಿದೆ. ಬೆಳಗ್ಗೆ 11 ಗಂಟೆಗೆ ಟ್ರೇಸ್ ಆಗಿದ್ದ ಒಂಟಿ ಕೋರೆ  ಸಲಗ, ಕಿಲೋ ಮೀಟರ್ ಗಟ್ಟಲೇ ಸುತ್ತಾಡಿಸಿತ್ತು. ಕೊನೆಗೂ ಅರವಳಿಕೆ ಚುಚ್ಚು ಮದ್ದು ನೀಡಿ ಆನೆ ಸೆರೆ ಹಿಡಿಯಲಾಯ್ತು. ಸಾಕಾನೆಗಳು ಹಾಗೂ ಜೆಸಿಬಿಗಳ ನೆರವಿನೊಂದಿಗೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿ ಶಿಫ್ಟ್ ಮಾಡಲಾಯಿತು. ಕಾರ್ಯಾಚರಣೆ ವೇಳೆ ಸೆರೆ ಸಿಕ್ಕ ಆನೆಗೆ ಒಂದು ಕೋರೆಯೇ ಇಲ್ಲ. ಈ ಒಂಟಿ ಕೋರೆ ಸಲಗ ಬೇಲೂರು(Belur) ಭಾಗದ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. 30 ಕಾಡಾನೆಗಳಿದ್ದ ದೊಡ್ದ ಗುಂಪನ್ನು ಒಂಟಿ ಕೋರೆ ಸಲಗ ಲೀಡ್ ಮಾಡುತ್ತಿತ್ತು. ಹೀಗಾಗಿ ಅರಣ್ಯ ಇಲಾಖೆ ಆಪರೇಷನ್ ಒಂಟಿ ಸಲಗ ಆರಂಭಿಸಿದ್ದರು.. ಕಾರ್ಯಾಚರಣೆ ಆರಂಭಿಸಿದ ನಾಲ್ಕನೇ ದಿನಕ್ಕೆ ಒಂಟಿ ಕೋರೆ ಸಲಗ ಸೆರೆ ಸಿಕ್ಕಿದ್ದು ಸ್ಥಳೀಯರಲ್ಲಿ ಕೊಂಚ ಸಮಧಾನ ತಂದಿದೆ.ಆನೆಗಳ ಉಪಟಳಕ್ಕೆ ಕಡಿವಾಣ ಹಾಲು ಆಪರೇಷನ್ ಎಲಿಫೆಂಟ್ ನಡೆಸಲಾಗ್ತಿದೆ. ಇದುವರೆಗೆ ಅರಣ್ಯ ಇಲಾಖೆ(Forest Department) ಕಾರ್ಯಾಚರಣೆ ನಡೆಸಿ 3 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, 2 ಕಾಡಾನೆಗಳನ್ನು ಸ್ಥಳಾಂತರ ಮಾಡಿದೆ.ಹೆಚ್ಚಿನ ಉಪಟಳ ನೀಡೋ ಕಾಡಾನೆಗಳ ಶಿಫ್ಟ್ ಮಾಡುತ್ತಿರುವ ಅರಣ್ಯ ಇಲಾಖೆ ನಿರ್ಧಾರ ಜನರ ಆತಂಕವನ್ನು ಕೊಂಚ ದೂರ ಮಾಡಿದೆ.

ಇದನ್ನೂ ವೀಕ್ಷಿಸಿ:  ರಕ್ತದಾನಿಗಳ ಕೊರತೆ, ಬರಿದಾಗುತ್ತಿವೆ ಬ್ಲಡ್ ಬ್ಯಾಂಕ್‌ಗಳು: ತುರ್ತು ಪರಿಸ್ಥಿತಿಯಲ್ಲಿ ಬ್ಲಡ್‌ಗಾಗಿ ರೋಗಿಗಳ ಪರದಾಟ

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more