ಸಫಾರಿ ಹೋದ ಪ್ರವಾಸಿಗರಿಗೆ ಡಬಲ್ ಎಲಿಫೆಂಟ್ ಆಟ್ಯಾಕ್!

Mar 15, 2021, 4:27 PM IST

ಚಾಮರಾಜನಗರ (ಮಾ. 15): ಸಫಾರಿ ವೇಳೆ ಪ್ರವಾಸಿಗರಿಗೆ ಡಬಲ್ ಎಲಿಫೆಂಟ್ ಅಟ್ಯಾಕ್! ಚಾಲಕನ ಸಮಯ ಪ್ರಜ್ಞೆಯಿಂದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ಧಾರೆ. ಹೌದು, ಚಾಮರಜನಗರ ಜಿಲ್ಲೆ, ಬಿಳಿಗಿರಿರಂಗನ ಬೆಟ್ಟದ ಕ್ಯಾತೆ ದೇವರ ಗುಡಿಯಲ್ಲಿ ಘಟನೆ ನಡೆದಿದೆ.

ಸಫಾರಿಗೆ ಹೋದಾಗ ಹಿಂದೆಯಿಂದ ಒಂದು ಕಾಡಾನೆ ಆಟ್ಯಾಕ್ ಮಾಡುತ್ತೆ, ವಾಹನವನ್ನು ವೇಗವಾಗಿ ಚಲಾಯಿಸುತ್ತಾನೆ ಚಾಲಕ, ಅಷ್ಟರಲ್ಲಿ ಮುಂದೆಯೂ ಒಂದು ಆನೆ ಅಟ್ಯಾಕ್ ಮಾಡುತ್ತೆ. ಆಗ ಇನ್ನೂ ವೇಗವಾಗಿ ವಾಹನ ಚಲಾಯಿಸಿದ್ದರಿಂದ ಆನೆ ಓಡಿ ಹೋಗಿದೆ. ಚಾಲಕ ನಾಗರಾಜು ಸಮಯ ಪ್ರಜ್ಞೆಗೆ ಪ್ರವಾಸಿರ ಕೃತಜ್ಞತೆ ವ್ಯಕ್ತಪಡಿಸಿದ್ಧಾರೆ.