ಬಣ್ಣ ಬಣ್ಣದ ಹಣತೆ..ಒಂದಕ್ಕಿಂತ ಒಂದು ಸುಂದರ: ವಿಶೇಷ ಚೇತನ ಮಕ್ಕಳ ಪ್ರತಿಭೆಗೆ ಭಾರೀ ಪ್ರೋತ್ಸಾಹ

ಬಣ್ಣ ಬಣ್ಣದ ಹಣತೆ..ಒಂದಕ್ಕಿಂತ ಒಂದು ಸುಂದರ: ವಿಶೇಷ ಚೇತನ ಮಕ್ಕಳ ಪ್ರತಿಭೆಗೆ ಭಾರೀ ಪ್ರೋತ್ಸಾಹ

Published : Nov 13, 2023, 11:33 AM IST

ದೀಪಾವಳಿ ಕತ್ತಲಿನಿಂದ ಬೆಳಕಿನೆಡೆಗೆ. ನಿತ್ಯ ಬದುಕಿನಿಂದ ಹೊಸತನದ ಬದುಕಿಗೆ ದಾರಿ ತೋರಿಸೋ ಸಂಭ್ರಮದ ಹಬ್ಬ. ಮಕ್ಕಳ ಪಾಲಿಗಂತೂ ದೀಪಾವಳಿ ದೀಪ ಹಚ್ಚಿ ಎಲ್ಲರೂ ಸೇರಿ ಪಟಾಕಿ ಸಿಡಿಸಿ  ಸಂಭ್ರಮಿಸೋ ದಿವಸ. ಇಲ್ಲೊಂದು ಶಾಲೆಯ ಮಕ್ಕಳಿಗೆ ಹಣತೆಯೇ ಬಾಳ ಬೆಳಕಾಗಿದೆ.
 

ಬಣ್ಣ ಬಣ್ಣದ ಹಣತೆ. ಒಂದಕ್ಕಿಂತ ಒಂದು ಸುಂದರ..ಬೆಳಕಿನ ಹಬ್ಬದ ಸಂಭ್ರ ಇಮ್ಮಡಿ ಗೊಳಿಸುವ ಈ ಸ್ಪೆಷಲ್ ಹಣತೆಗಳಿಗೆ(Deepa) ಡಿಮ್ಯಾಂಡಪ್ಪೋ ಡಿಮ್ಯಾಂಡ್. ಮಾರುಕಟ್ಟೆಯಲ್ಲಿ ಸಿಗುವ ಇತರೆ ಹಣತೆಗಳಿಗಿಂತ ಈ ಹಣತೆಗಳು ಡಿಫರೆಂಟ್ ಆಗಿ ಕಾಣುತ್ತವೆ.. ಅಷ್ಟೇ ಅಲ್ಲ ಈ ಸ್ಪೆಷಲ್ ಹಣತೆ ಹಿಂದೆಯೂ ಒಂದು ವಿಶೇಷತೆ ಇದೆ.. ಹೀಗೆ ಬಣ್ಣ ಬಣ್ಣರ ರೂಪ ಪಡೆದ ಹಣತೆಗಳ ಹಿಂದಿರೋದಿ ವಿಶೇಷ ಚೇತನರು( Specialized Children). ಮಂಗಳೂರಿನ (Mangalore) ವಿಠೋಬ ಟೆಂಪಲ್ ರೋಡ್ನಲ್ಲಿರುವ ನವಚೇತನ ವಿಶೇಷ ಶಾಲೆಯ ಮಕ್ಕಳ ಕೈಯ್ಯಲ್ಲಿ ಮೂಡಿ ಬಂದ ಹಣತೆಗಳಿವು. ತಮ್ಮನ್ನು ತಾವೇ ನಿಭಾಯಿಸಲಾಗದ ವಿಶೇಷ ಚೇತನ ಮಕ್ಕಳು ಈ ಹಣತೆಗಳನ್ನು ತಯಾರಿಸಿದ್ದು ವಿಶೇಷ. ನವಚೇತನ ವಿಶೇಷ ಸ್ಕೂಲ್ನ ಮಕ್ಕಳಿಗೆ ಸುಮಾರು 20 ವರ್ಷಗಳಿಂದ ಇಂತಹ ಕರ ಕುಶಲ ತಯಾರಿಯ ತರಬೇತಿ ನೀಡಲಾಗುತ್ತಿದೆ. ಕೇವಲ ಹಣತೆ ಮಾತ್ರವಲ್ಲದೆ, ವೆಡ್ಡಿಂಗ್ ಕಾರ್ಡ್, ಸ್ವೀಟ್ ಬಾಕ್ಸ್, ಗಿಫ್ಟ್ ಬಾಕ್ಸ್ಗಳನ್ನೂ ತಯಾರಿಸೋದು ಗೊತ್ತು.ವಿಶೇಷ ಚೇತನ ಮಕ್ಕಳ ವಿಶೇಷ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ಜನ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದು ಮಕ್ಕಳ ಕೌಶಲ್ಯಾಭಿವೃದ್ಧಿ ಜೊತೆಗೆ ಆರ್ಥಿಕ ಭದ್ರತೆಯನ್ನೂ ನೀಡುತ್ತಿದೆ. ಹಣತೆ ಇಲ್ಲದೆ ದೀಪಾವಳಿ ಹಬ್ಬ ಪೂರ್ಣವಾಗೋದಿಲ್ಲ.ಬೆಳಕಿನ ಹಬ್ಬವನ್ನು ಸಂಭ್ರಮಿಸಲು ಈ ವಿಶೇಷ ಚೇತನರ ಸ್ಪೆಷಲ್ ಹಣತೆಯನ್ನೇ ಖರೀದಿ ಮಾಡ್ತಿದ್ದಾರೆ. ಶಾಲೆಗೆ ಭೇಟಿ ನೀಡಿ ಕೆಲವರು ಹಣತೆ ಖರೀದಿ ಮಾಡಿದ್ರೆ, ಉಳಿದ ಹಣತೆಗಳನ್ನು ಮಾರುಕಟ್ಟೆಯಲ್ಲಿ ಮಾರಟಕ್ಕಿಡಲಾಗಿದೆ.

ಇದನ್ನೂ ವೀಕ್ಷಿಸಿ:  ರಾಯಚೂರಲ್ಲಿ ಬಂಜಾರ ಸಮುದಾಯದ ದೀಪಾವಳಿ ಆಚರಣೆ ಸ್ಪೆಷಲ್: ಪೂಜೆ ಪುನಸ್ಕಾರ..ಮನೆಮನೆಗಳಲ್ಲೂ ಹಬ್ಬದ ಸಂಭ್ರಮ

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?