ಬಣ್ಣ ಬಣ್ಣದ ಹಣತೆ..ಒಂದಕ್ಕಿಂತ ಒಂದು ಸುಂದರ: ವಿಶೇಷ ಚೇತನ ಮಕ್ಕಳ ಪ್ರತಿಭೆಗೆ ಭಾರೀ ಪ್ರೋತ್ಸಾಹ

ಬಣ್ಣ ಬಣ್ಣದ ಹಣತೆ..ಒಂದಕ್ಕಿಂತ ಒಂದು ಸುಂದರ: ವಿಶೇಷ ಚೇತನ ಮಕ್ಕಳ ಪ್ರತಿಭೆಗೆ ಭಾರೀ ಪ್ರೋತ್ಸಾಹ

Published : Nov 13, 2023, 11:33 AM IST

ದೀಪಾವಳಿ ಕತ್ತಲಿನಿಂದ ಬೆಳಕಿನೆಡೆಗೆ. ನಿತ್ಯ ಬದುಕಿನಿಂದ ಹೊಸತನದ ಬದುಕಿಗೆ ದಾರಿ ತೋರಿಸೋ ಸಂಭ್ರಮದ ಹಬ್ಬ. ಮಕ್ಕಳ ಪಾಲಿಗಂತೂ ದೀಪಾವಳಿ ದೀಪ ಹಚ್ಚಿ ಎಲ್ಲರೂ ಸೇರಿ ಪಟಾಕಿ ಸಿಡಿಸಿ  ಸಂಭ್ರಮಿಸೋ ದಿವಸ. ಇಲ್ಲೊಂದು ಶಾಲೆಯ ಮಕ್ಕಳಿಗೆ ಹಣತೆಯೇ ಬಾಳ ಬೆಳಕಾಗಿದೆ.
 

ಬಣ್ಣ ಬಣ್ಣದ ಹಣತೆ. ಒಂದಕ್ಕಿಂತ ಒಂದು ಸುಂದರ..ಬೆಳಕಿನ ಹಬ್ಬದ ಸಂಭ್ರ ಇಮ್ಮಡಿ ಗೊಳಿಸುವ ಈ ಸ್ಪೆಷಲ್ ಹಣತೆಗಳಿಗೆ(Deepa) ಡಿಮ್ಯಾಂಡಪ್ಪೋ ಡಿಮ್ಯಾಂಡ್. ಮಾರುಕಟ್ಟೆಯಲ್ಲಿ ಸಿಗುವ ಇತರೆ ಹಣತೆಗಳಿಗಿಂತ ಈ ಹಣತೆಗಳು ಡಿಫರೆಂಟ್ ಆಗಿ ಕಾಣುತ್ತವೆ.. ಅಷ್ಟೇ ಅಲ್ಲ ಈ ಸ್ಪೆಷಲ್ ಹಣತೆ ಹಿಂದೆಯೂ ಒಂದು ವಿಶೇಷತೆ ಇದೆ.. ಹೀಗೆ ಬಣ್ಣ ಬಣ್ಣರ ರೂಪ ಪಡೆದ ಹಣತೆಗಳ ಹಿಂದಿರೋದಿ ವಿಶೇಷ ಚೇತನರು( Specialized Children). ಮಂಗಳೂರಿನ (Mangalore) ವಿಠೋಬ ಟೆಂಪಲ್ ರೋಡ್ನಲ್ಲಿರುವ ನವಚೇತನ ವಿಶೇಷ ಶಾಲೆಯ ಮಕ್ಕಳ ಕೈಯ್ಯಲ್ಲಿ ಮೂಡಿ ಬಂದ ಹಣತೆಗಳಿವು. ತಮ್ಮನ್ನು ತಾವೇ ನಿಭಾಯಿಸಲಾಗದ ವಿಶೇಷ ಚೇತನ ಮಕ್ಕಳು ಈ ಹಣತೆಗಳನ್ನು ತಯಾರಿಸಿದ್ದು ವಿಶೇಷ. ನವಚೇತನ ವಿಶೇಷ ಸ್ಕೂಲ್ನ ಮಕ್ಕಳಿಗೆ ಸುಮಾರು 20 ವರ್ಷಗಳಿಂದ ಇಂತಹ ಕರ ಕುಶಲ ತಯಾರಿಯ ತರಬೇತಿ ನೀಡಲಾಗುತ್ತಿದೆ. ಕೇವಲ ಹಣತೆ ಮಾತ್ರವಲ್ಲದೆ, ವೆಡ್ಡಿಂಗ್ ಕಾರ್ಡ್, ಸ್ವೀಟ್ ಬಾಕ್ಸ್, ಗಿಫ್ಟ್ ಬಾಕ್ಸ್ಗಳನ್ನೂ ತಯಾರಿಸೋದು ಗೊತ್ತು.ವಿಶೇಷ ಚೇತನ ಮಕ್ಕಳ ವಿಶೇಷ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ಜನ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದು ಮಕ್ಕಳ ಕೌಶಲ್ಯಾಭಿವೃದ್ಧಿ ಜೊತೆಗೆ ಆರ್ಥಿಕ ಭದ್ರತೆಯನ್ನೂ ನೀಡುತ್ತಿದೆ. ಹಣತೆ ಇಲ್ಲದೆ ದೀಪಾವಳಿ ಹಬ್ಬ ಪೂರ್ಣವಾಗೋದಿಲ್ಲ.ಬೆಳಕಿನ ಹಬ್ಬವನ್ನು ಸಂಭ್ರಮಿಸಲು ಈ ವಿಶೇಷ ಚೇತನರ ಸ್ಪೆಷಲ್ ಹಣತೆಯನ್ನೇ ಖರೀದಿ ಮಾಡ್ತಿದ್ದಾರೆ. ಶಾಲೆಗೆ ಭೇಟಿ ನೀಡಿ ಕೆಲವರು ಹಣತೆ ಖರೀದಿ ಮಾಡಿದ್ರೆ, ಉಳಿದ ಹಣತೆಗಳನ್ನು ಮಾರುಕಟ್ಟೆಯಲ್ಲಿ ಮಾರಟಕ್ಕಿಡಲಾಗಿದೆ.

ಇದನ್ನೂ ವೀಕ್ಷಿಸಿ:  ರಾಯಚೂರಲ್ಲಿ ಬಂಜಾರ ಸಮುದಾಯದ ದೀಪಾವಳಿ ಆಚರಣೆ ಸ್ಪೆಷಲ್: ಪೂಜೆ ಪುನಸ್ಕಾರ..ಮನೆಮನೆಗಳಲ್ಲೂ ಹಬ್ಬದ ಸಂಭ್ರಮ

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!