ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

Published : Nov 21, 2024, 04:19 PM IST

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. 

ರಾಯಚೂರು(ನ.21):  ಋಣಭಾರಕ್ಕಾಗಿ ರಾಯರಿಗೆ ಭೂ ದಾನ ಮಾಡಿದ್ದನಾ ನವಾಬ? ಅದೋನಿ ನವಾಬನ ದಾನದ ಹಿಂದೆ ರಾಘವೇಂದ್ರ ಮಹಿಮೆ! ಮಂತ್ರಾಲಯ ಮಣ್ಣು. ವಕ್ಫ್ ಕಿಚ್ಚು.. ಏನಿದು ರಾಯರ ಭೂ ಚರಿತ್ರೆ? ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ಮಂತ್ರಾಲಯ ನವಾಬರದ್ದಾ?

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. ಹಾಗಿದ್ರೆ ಇಬ್ರಾಹಿಂ ಹೇಳಿದ್ದು ನಿಜವಾ? ಮಂತ್ರಾಲಯ ಇತಿಹಾಸ ಏನ್ ಹೇಳುತ್ತೆ ಅನ್ನೋದರ ಕುರಿತು ಇಂದಿಷ್ಟು ವಿಚಾರಗಳನ್ನು ಇಲ್ಲಿ ನೋಡೋಣ. 
ನವಾಬರು ಅಲ್ಲಾಹು ಹೊರತು ಇನ್ಯಾರಿಗೂ ತಲೆ ಬಾಗುತ್ತಿರಲಿಲ್ಲ. ಅಂತದ್ರಲ್ಲಿ ಗುರು ರಾಯರ ಪವಾಡಕ್ಕೆ ಅದೋನಿ ನವಾಬ್ ತಲೆಬಾಗಿ ವಂದಿಸಿದ್ದ. ರಾಯರ ಪವಾಡ ಅವನ ಮೇಲೆ ಅಷ್ಟೊಂದು ಪ್ರಭಾವ ಬೀರಿತ್ತು. 

2 ಚುನಾವಣೆ ಫಲಿತಾಂಶ ಮೋದಿ ಸರ್ಕಾರದ ಮೇಲೂ ಬೀರುತ್ತಾ ಪರಿಣಾಮ?

ಆಗಿನ ಕಾಲದಲ್ಲಿ ಹಿಂದೂಗಳೆಂದರೆ ನವಾಬರು ಉರಿದು ಬೀಳುತ್ತಿದ್ದರು. ಅಂಥಾ ನವಾಬನೇ ಗುರು ರಾಯರ ಶಕ್ತಿಗೆ, ಪವಾಡಕ್ಕೆ ತಲೆದೂಗಿದ್ದ. ಯಾರ ಮುಂದೆನೂ ತಲೆಬಾಗದ ನವಾಬ್ ಅಂದು ಗುರು ರಾಘವೇಂದ್ರ ಸ್ವಾಮಿಗಳ ಮುಂದೆ ತಲೆಬಾಗಿ ನಿಂತಿದ್ದ. ರಾಯರ ಪವಾಡಗಳೇ ಹಾಗೆ. ರಾಯರು ಅನೇಕ ಪವಾಡಗಳನ್ನು ಮಾಡಿದ್ದಾರೆ. 

ಗುರು ರಾಯರು ಪವಾಡ ಪುರುಷರು. ಹಾಗೆನೇ ಭಕ್ತರನ್ನು ಕತ್ತಲ ಬದುಕಿನಿಂದ ಬೆಳಕಿನೆಡೆಗೆ ಮತ್ತು ಅಜ್ಞಾನದ ಕೊಟ್ಟಿಗೆಯಿಂದ ಜ್ಞಾನ ಮಂದಿರದತ್ತ ಕರೆದುಕೊಂಡು ಹೋದವರು. ರಾಯರ ಬಗ್ಗೆ ಇಷ್ಟೆಲ್ಲ ತಿಳಿದ ನಾವು ಅವರು ಮಂತ್ರಾಲಯದ ಕೆಲವು ಅಚ್ಚರಿಗಳನ್ನು ತಿಳಿಯದೇ ಇದ್ದರೆ ಹೇಗೆ? ಗುರು ರಾಯರು ಅದೇ ಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಗೊತ್ತಾ?. 

News Hour: ಗ್ಯಾರಂಟಿ ರದ್ದು ಮಾಡಲು ಹಿಂಬಾಗಿಲ ಹಾದಿ ಹೊಕ್ಕಿದ ಸರ್ಕಾರ, ಬಿಪಿಎಲ್‌ ಕಾರ್ಡ್‌ ಮೇಲೆ ಪ್ರಹಾರ!

ಗುರು ರಾಯರಿಗೆ ತನ್ನಿಂದಾದ ತಪ್ಪಿನ ಪ್ರಾಯಶ್ಚಿತವಾಗಿ ಏನನ್ನಾದರು ಕೇಳಿ ಕೊಡುತ್ತೇನೆ ಎಂದು ಹೇಳಿದಾಗ  ಗುರು ರಾಯರು ಆ ಬಂಜರು ಭೂಮಿಯನ್ನೇ ಏಕೆ ಕೇಳಿದರು ಗೊತ್ತಾ? ಆ ಭೂಮಿಯ ಚರಿತ್ರೆಯನ್ನು ತಿಳಿದರೆ ನಿಮಗೆ ಗೊತ್ತಾಗುತ್ತೆ. 

ಇದು ಅಂದಿನ ಮಂಚಾಲೆ ಮತ್ತು ಈಗಿನ ಮಂತ್ರಾಲಯದ ಇತಿಹಾಸ. ಇಲ್ಲಿ ಯಾರು ಏನೇ ಹೇಳಲಿ. ಮಂತ್ರಾಲಯದಲ್ಲಿ ಗುರು ರಾಯರು ನೆಲೆಸಿದ್ದಾರೆ. ಅವರು ನೆಲೆಸಿರುವ ಪುಣ್ಯಭೂಮಿಯನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಅನ್ನೋದು ರಾಯರ ಭಕ್ತರ ನಂಬಿಕೆ. 

24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
Read more