ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

Published : Nov 21, 2024, 04:19 PM IST

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. 

ರಾಯಚೂರು(ನ.21):  ಋಣಭಾರಕ್ಕಾಗಿ ರಾಯರಿಗೆ ಭೂ ದಾನ ಮಾಡಿದ್ದನಾ ನವಾಬ? ಅದೋನಿ ನವಾಬನ ದಾನದ ಹಿಂದೆ ರಾಘವೇಂದ್ರ ಮಹಿಮೆ! ಮಂತ್ರಾಲಯ ಮಣ್ಣು. ವಕ್ಫ್ ಕಿಚ್ಚು.. ಏನಿದು ರಾಯರ ಭೂ ಚರಿತ್ರೆ? ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ಮಂತ್ರಾಲಯ ನವಾಬರದ್ದಾ?

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. ಹಾಗಿದ್ರೆ ಇಬ್ರಾಹಿಂ ಹೇಳಿದ್ದು ನಿಜವಾ? ಮಂತ್ರಾಲಯ ಇತಿಹಾಸ ಏನ್ ಹೇಳುತ್ತೆ ಅನ್ನೋದರ ಕುರಿತು ಇಂದಿಷ್ಟು ವಿಚಾರಗಳನ್ನು ಇಲ್ಲಿ ನೋಡೋಣ. 
ನವಾಬರು ಅಲ್ಲಾಹು ಹೊರತು ಇನ್ಯಾರಿಗೂ ತಲೆ ಬಾಗುತ್ತಿರಲಿಲ್ಲ. ಅಂತದ್ರಲ್ಲಿ ಗುರು ರಾಯರ ಪವಾಡಕ್ಕೆ ಅದೋನಿ ನವಾಬ್ ತಲೆಬಾಗಿ ವಂದಿಸಿದ್ದ. ರಾಯರ ಪವಾಡ ಅವನ ಮೇಲೆ ಅಷ್ಟೊಂದು ಪ್ರಭಾವ ಬೀರಿತ್ತು. 

2 ಚುನಾವಣೆ ಫಲಿತಾಂಶ ಮೋದಿ ಸರ್ಕಾರದ ಮೇಲೂ ಬೀರುತ್ತಾ ಪರಿಣಾಮ?

ಆಗಿನ ಕಾಲದಲ್ಲಿ ಹಿಂದೂಗಳೆಂದರೆ ನವಾಬರು ಉರಿದು ಬೀಳುತ್ತಿದ್ದರು. ಅಂಥಾ ನವಾಬನೇ ಗುರು ರಾಯರ ಶಕ್ತಿಗೆ, ಪವಾಡಕ್ಕೆ ತಲೆದೂಗಿದ್ದ. ಯಾರ ಮುಂದೆನೂ ತಲೆಬಾಗದ ನವಾಬ್ ಅಂದು ಗುರು ರಾಘವೇಂದ್ರ ಸ್ವಾಮಿಗಳ ಮುಂದೆ ತಲೆಬಾಗಿ ನಿಂತಿದ್ದ. ರಾಯರ ಪವಾಡಗಳೇ ಹಾಗೆ. ರಾಯರು ಅನೇಕ ಪವಾಡಗಳನ್ನು ಮಾಡಿದ್ದಾರೆ. 

ಗುರು ರಾಯರು ಪವಾಡ ಪುರುಷರು. ಹಾಗೆನೇ ಭಕ್ತರನ್ನು ಕತ್ತಲ ಬದುಕಿನಿಂದ ಬೆಳಕಿನೆಡೆಗೆ ಮತ್ತು ಅಜ್ಞಾನದ ಕೊಟ್ಟಿಗೆಯಿಂದ ಜ್ಞಾನ ಮಂದಿರದತ್ತ ಕರೆದುಕೊಂಡು ಹೋದವರು. ರಾಯರ ಬಗ್ಗೆ ಇಷ್ಟೆಲ್ಲ ತಿಳಿದ ನಾವು ಅವರು ಮಂತ್ರಾಲಯದ ಕೆಲವು ಅಚ್ಚರಿಗಳನ್ನು ತಿಳಿಯದೇ ಇದ್ದರೆ ಹೇಗೆ? ಗುರು ರಾಯರು ಅದೇ ಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಗೊತ್ತಾ?. 

News Hour: ಗ್ಯಾರಂಟಿ ರದ್ದು ಮಾಡಲು ಹಿಂಬಾಗಿಲ ಹಾದಿ ಹೊಕ್ಕಿದ ಸರ್ಕಾರ, ಬಿಪಿಎಲ್‌ ಕಾರ್ಡ್‌ ಮೇಲೆ ಪ್ರಹಾರ!

ಗುರು ರಾಯರಿಗೆ ತನ್ನಿಂದಾದ ತಪ್ಪಿನ ಪ್ರಾಯಶ್ಚಿತವಾಗಿ ಏನನ್ನಾದರು ಕೇಳಿ ಕೊಡುತ್ತೇನೆ ಎಂದು ಹೇಳಿದಾಗ  ಗುರು ರಾಯರು ಆ ಬಂಜರು ಭೂಮಿಯನ್ನೇ ಏಕೆ ಕೇಳಿದರು ಗೊತ್ತಾ? ಆ ಭೂಮಿಯ ಚರಿತ್ರೆಯನ್ನು ತಿಳಿದರೆ ನಿಮಗೆ ಗೊತ್ತಾಗುತ್ತೆ. 

ಇದು ಅಂದಿನ ಮಂಚಾಲೆ ಮತ್ತು ಈಗಿನ ಮಂತ್ರಾಲಯದ ಇತಿಹಾಸ. ಇಲ್ಲಿ ಯಾರು ಏನೇ ಹೇಳಲಿ. ಮಂತ್ರಾಲಯದಲ್ಲಿ ಗುರು ರಾಯರು ನೆಲೆಸಿದ್ದಾರೆ. ಅವರು ನೆಲೆಸಿರುವ ಪುಣ್ಯಭೂಮಿಯನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಅನ್ನೋದು ರಾಯರ ಭಕ್ತರ ನಂಬಿಕೆ. 

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more