Dia Rice For Diabetic: ಡಯಾರೈಸ್- ಮಧುಮೇಹಿಗಳ ಸ್ನೇಹಿ ಈ ಅಕ್ಕಿ!

Dia Rice For Diabetic: ಡಯಾರೈಸ್- ಮಧುಮೇಹಿಗಳ ಸ್ನೇಹಿ ಈ ಅಕ್ಕಿ!

Suvarna News   | Asianet News
Published : Dec 21, 2021, 05:52 PM ISTUpdated : Dec 21, 2021, 06:08 PM IST

ಬೇರೆ ಭತ್ತದ ತಳಿಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಳೆಯುವ ಹೆಚ್ಚು ಇಳುವರಿ ಬರುವ ಭತ್ತ ಇದಾಗಿದೆ.  ಈ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಇದನ್ನು ಡಯಾರೈಸ್ ಎಂದು ಸಹ ಕರೆಯುತ್ತಾರೆ..
 

ಚಾಮರಾಜನಗರ (ಡಿ. 21): ಹೈದರಾಬಾದ್ ನಲ್ಲಿರುವ ಭಾರತೀಯ ಭತ್ತ ಸಂಶೋಧನ ಸಂಸ್ಥೆ ಅಭಿವೃದ್ಧಿಪಡಿಸಿರುವ  ಮಧುಮೇಹಿಗಳ ಸ್ನೇಹಿ (  Dia Rice For Diabetic) ಎಂದೆ ಹೆಸರಾದ ಆರ್.ಎನ್.ಆರ್ ತಳಿಯ ಭತ್ತ  ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಂಪರ್ ಇಳುವರಿ ಬಂದಿದೆ. ಎಡಬಿಡದೆ ಸುರಿದ ಮಳೆ, ಸಾಮಾನ್ಯವಾಗಿ ಬಾಧಿಸುವ ಬೆಂಕಿ ರೋಗವನ್ನು ತಾಳಿಕೊಂಡು ಬೆಳದಿರುವ ಆರ್.ಎನ್.ಆರ್ ತಳಿ ಭತ್ತ ಉತ್ತಮವಾಗಿ ಬೆಳೆದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಇದು ಸಕ್ಕರೆ ಅಂಶ ಕಡಿಮೆ ಇರುವ ಡಯಾಬಿಟಿಸ್ ರೋಗಿಗಳು ಉಪಯೋಗಿಸಬಹುದಾದ ಆರ್.ಎನ್.ಆರ್ ತಳಿಯ ಭತ್ತ. ಹೈದರಾಬಾದ್‌ನಲ್ಲಿರುವ ಭಾರತೀಯ ಭತ್ತ ಸಂಶೋಧನ ಸಂಸ್ಥೆ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ಬೆಂಕಿ ರೋಗ ಸೇರಿದಂತೆ ಇತರ ರೋಗ ನಿರೋಧಕ ಗುಣ ಹೊಂದಿರುವ ಈ ಭತ್ತದ ತಳಿಯನ್ನು ಚಾಮರಾಜನಗರದ ಕೃಷಿವಿಜ್ಞಾನ ಕೇಂದ್ರ ಜಿಲ್ಲೆಯ ರೈತರಿಗೆ ಪರಿಚಯಿಸಿದೆ.

ಜಿಲ್ಲೆಯ ವಿವಿಧೆಡೆ 100 ಮಂದಿ ರೈತರಿಗೆ ಉಚಿತವಾಗಿ  ಈ ತಳಿಯ ಭತ್ತದಬೀಜ ನೀಡಿ ಬೆಳೆ ಬೆಳೆಯಲು ಎಲ್ಲಾ ರೀತಿಯ ನೆರವನ್ನು ಕೃಷಿ ವಿಜ್ಞಾನಕೇಂದ್ರ ನೀಡಿತ್ತು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಐಎನ್.ಆರ್ ತಳಿಯ ಭತ್ತ ಬೆಳೆದ ರೈತರಿಗೆ ಬಂಪರ್ ಇಳುವರಿ ಬಂದಿದೆ. ಸಾಮಾನ್ಯವಾಗಿ ಬೇರೆ ಭತ್ತದ ತಳಿಗಳು ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿ ಬಂದರೆ ಐಎನ್.ಆರ್ ತಳಿ ಭತ್ತ 25 ರಿಂದ 26 ಕ್ವಿಂಟಾಲ್ ಇಳುವರಿ ಬಂದಿದೆ..

ಬೇರೆ ಭತ್ತದ ತಳಿಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಳೆಯುವ ಹೆಚ್ಚು ಇಳುವರಿ ಬರುವ ಭತ್ತ ಇದಾಗಿದೆ.  ಈ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಇದನ್ನು ಡಯಾರೈಸ್ ಎಂದು ಸಹ ಕರೆಯುತ್ತಾರೆ..

ಮಣ್ಣಿನ ಗುಣಮಟ್ಟ ಉತ್ತಮವಾಗಿರುವ ಕಡೆಗಳಲ್ಲಿ ಒಂದು ಎಕರೆಗೆ 35 ರಿಂದ 40 ಕ್ವಿಂಟಾಲ್ ವರೆಗು ಇಳುವರಿ ತೆಗೆಯಬಹುದಾಗಿದೆ. ಇತರ ತಳಿ ಭತ್ತದ ಬೆಳೆಯುವಾಗಿ ಕಳೆ ನಿರ್ವಹಣೆಗೆ ಎಕರೆಗೆ 7 ರಿಂದ 8  ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಐ.ಎನ್ಆರ್.ತಳಿಯ ಭತ್ತದ ಬೆಳೆಯಲ್ಲಿ ಕಳೆ ನಿರ್ವಹಣೆಗೆ 1ರಿಂದ 2 ಸಾವಿರ ರೂಪಾಯಿ ಸಾಕು ಎಂಬುಂದು ರೈತರ ಅಭಿಪ್ರಾಯವಾಗಿದ್ದು ಒಟ್ಟಾರೆ ಬೇರೆ ತಳಿಯ ಭತ್ತಕ್ಕೆ ತಗಲುವ ವೆಚ್ಚಕ್ಕಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ತೆಗೆಯಬಹುದು ಎಂಬುದನ್ನು ಜಿಲ್ಲೆಯ ರೈತರು ತೋರಿಸಿಕೊಟ್ಟಿದ್ದಾರೆ.
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more