Dia Rice For Diabetic: ಡಯಾರೈಸ್- ಮಧುಮೇಹಿಗಳ ಸ್ನೇಹಿ ಈ ಅಕ್ಕಿ!

Dia Rice For Diabetic: ಡಯಾರೈಸ್- ಮಧುಮೇಹಿಗಳ ಸ್ನೇಹಿ ಈ ಅಕ್ಕಿ!

Suvarna News   | Asianet News
Published : Dec 21, 2021, 05:52 PM ISTUpdated : Dec 21, 2021, 06:08 PM IST

ಬೇರೆ ಭತ್ತದ ತಳಿಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಳೆಯುವ ಹೆಚ್ಚು ಇಳುವರಿ ಬರುವ ಭತ್ತ ಇದಾಗಿದೆ.  ಈ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಇದನ್ನು ಡಯಾರೈಸ್ ಎಂದು ಸಹ ಕರೆಯುತ್ತಾರೆ..
 

ಚಾಮರಾಜನಗರ (ಡಿ. 21): ಹೈದರಾಬಾದ್ ನಲ್ಲಿರುವ ಭಾರತೀಯ ಭತ್ತ ಸಂಶೋಧನ ಸಂಸ್ಥೆ ಅಭಿವೃದ್ಧಿಪಡಿಸಿರುವ  ಮಧುಮೇಹಿಗಳ ಸ್ನೇಹಿ (  Dia Rice For Diabetic) ಎಂದೆ ಹೆಸರಾದ ಆರ್.ಎನ್.ಆರ್ ತಳಿಯ ಭತ್ತ  ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಂಪರ್ ಇಳುವರಿ ಬಂದಿದೆ. ಎಡಬಿಡದೆ ಸುರಿದ ಮಳೆ, ಸಾಮಾನ್ಯವಾಗಿ ಬಾಧಿಸುವ ಬೆಂಕಿ ರೋಗವನ್ನು ತಾಳಿಕೊಂಡು ಬೆಳದಿರುವ ಆರ್.ಎನ್.ಆರ್ ತಳಿ ಭತ್ತ ಉತ್ತಮವಾಗಿ ಬೆಳೆದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಇದು ಸಕ್ಕರೆ ಅಂಶ ಕಡಿಮೆ ಇರುವ ಡಯಾಬಿಟಿಸ್ ರೋಗಿಗಳು ಉಪಯೋಗಿಸಬಹುದಾದ ಆರ್.ಎನ್.ಆರ್ ತಳಿಯ ಭತ್ತ. ಹೈದರಾಬಾದ್‌ನಲ್ಲಿರುವ ಭಾರತೀಯ ಭತ್ತ ಸಂಶೋಧನ ಸಂಸ್ಥೆ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ಬೆಂಕಿ ರೋಗ ಸೇರಿದಂತೆ ಇತರ ರೋಗ ನಿರೋಧಕ ಗುಣ ಹೊಂದಿರುವ ಈ ಭತ್ತದ ತಳಿಯನ್ನು ಚಾಮರಾಜನಗರದ ಕೃಷಿವಿಜ್ಞಾನ ಕೇಂದ್ರ ಜಿಲ್ಲೆಯ ರೈತರಿಗೆ ಪರಿಚಯಿಸಿದೆ.

ಜಿಲ್ಲೆಯ ವಿವಿಧೆಡೆ 100 ಮಂದಿ ರೈತರಿಗೆ ಉಚಿತವಾಗಿ  ಈ ತಳಿಯ ಭತ್ತದಬೀಜ ನೀಡಿ ಬೆಳೆ ಬೆಳೆಯಲು ಎಲ್ಲಾ ರೀತಿಯ ನೆರವನ್ನು ಕೃಷಿ ವಿಜ್ಞಾನಕೇಂದ್ರ ನೀಡಿತ್ತು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಐಎನ್.ಆರ್ ತಳಿಯ ಭತ್ತ ಬೆಳೆದ ರೈತರಿಗೆ ಬಂಪರ್ ಇಳುವರಿ ಬಂದಿದೆ. ಸಾಮಾನ್ಯವಾಗಿ ಬೇರೆ ಭತ್ತದ ತಳಿಗಳು ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿ ಬಂದರೆ ಐಎನ್.ಆರ್ ತಳಿ ಭತ್ತ 25 ರಿಂದ 26 ಕ್ವಿಂಟಾಲ್ ಇಳುವರಿ ಬಂದಿದೆ..

ಬೇರೆ ಭತ್ತದ ತಳಿಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಳೆಯುವ ಹೆಚ್ಚು ಇಳುವರಿ ಬರುವ ಭತ್ತ ಇದಾಗಿದೆ.  ಈ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಇದನ್ನು ಡಯಾರೈಸ್ ಎಂದು ಸಹ ಕರೆಯುತ್ತಾರೆ..

ಮಣ್ಣಿನ ಗುಣಮಟ್ಟ ಉತ್ತಮವಾಗಿರುವ ಕಡೆಗಳಲ್ಲಿ ಒಂದು ಎಕರೆಗೆ 35 ರಿಂದ 40 ಕ್ವಿಂಟಾಲ್ ವರೆಗು ಇಳುವರಿ ತೆಗೆಯಬಹುದಾಗಿದೆ. ಇತರ ತಳಿ ಭತ್ತದ ಬೆಳೆಯುವಾಗಿ ಕಳೆ ನಿರ್ವಹಣೆಗೆ ಎಕರೆಗೆ 7 ರಿಂದ 8  ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಐ.ಎನ್ಆರ್.ತಳಿಯ ಭತ್ತದ ಬೆಳೆಯಲ್ಲಿ ಕಳೆ ನಿರ್ವಹಣೆಗೆ 1ರಿಂದ 2 ಸಾವಿರ ರೂಪಾಯಿ ಸಾಕು ಎಂಬುಂದು ರೈತರ ಅಭಿಪ್ರಾಯವಾಗಿದ್ದು ಒಟ್ಟಾರೆ ಬೇರೆ ತಳಿಯ ಭತ್ತಕ್ಕೆ ತಗಲುವ ವೆಚ್ಚಕ್ಕಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ತೆಗೆಯಬಹುದು ಎಂಬುದನ್ನು ಜಿಲ್ಲೆಯ ರೈತರು ತೋರಿಸಿಕೊಟ್ಟಿದ್ದಾರೆ.
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more