DCM ರದ್ದು: ರೇಣುಕಾಚಾರ್ಯಗೆ ಲಕ್ಷ್ಮಣ ಸವದಿ ಗುದ್ದು !

Jan 1, 2020, 2:31 PM IST

ಬೆಂಗಳೂರು(ಜ.01): ಉಪಮುಖ್ಯಮಂತ್ರಿ ಹುದ್ದೆ ರದ್ದು ವಿಚಾರವನ್ನ ಹಾದಿ ಬೀದಿಯಲ್ಲಿ ನಾನೂ ಚರ್ಚೆ ಮಾಡೋದಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರಿಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ರೇಣುಕಾಚಾರ್ಯ ಅವರು ಸಹಿ ಸಂಗ್ರಹ ಮಾಡುತ್ತಿರುವ ವಿಚಾರ ನನಗೆ ಗೊತ್ತಿಲ್ಲ, ಈ ಬಗ್ಗೆ ನಾನು ಮಾತಾಡಲ್ಲ, ಕಾಲ ಕೂಡಿ ಬಂದಾಗ ವಿಧಾನ ಪರಿಷತ್ತಿಗೆ ಪ್ರವೇಶ ಆಗತ್ತದೆ ಎಂದು ಹೇಳಿದ್ದಾರೆ. 

ಡಿಸಿಎಂ ಸ್ಥಾನಕ್ಕೆ ಕತ್ತರಿ ಹಾಕಿ ಎಂದಿದ್ದ ಶಾಸಕ ರೇಣುಕಾಚಾರ್ಯ ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಡಿಸಿಎಂ ಕಿತ್ತಾಕಲು ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.