ಕೊಲೆ ನಂತರ 12 ಸಾಕ್ಷಿಗಳ ನಾಶಕ್ಕೆ ದರ್ಶನ್‌ ಗ್ಯಾಂಗ್‌ ಯತ್ನ: ಪೊಲೀಸರಿಗೆ ಸಿಕ್ಕ ಸಾಕ್ಷಿಗಳು ಎಷ್ಟು ?

Jun 21, 2024, 9:05 AM IST

ನಟ ದರ್ಶನ್‌ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ(Renukaswamy Murder Case) ಮಾಡಲಾಗಿದ್ದು, ಇದರಿಂದ ಬಚಾವ್‌ ಆಗಲು ಈ ಗ್ಯಾಂಗ್‌ ಅನೇಕ ಸಾಕ್ಷಿಗಳನ್ನು ನಾಶ ಮಾಡಿತ್ತು. ಆದ್ರೆ ಇದೀಗ ತನಿಖಾಧಿಕಾರಿಗಳು ಅವುಗಳನ್ನು ಪತ್ತೆ ಮಾಡಿದ್ದಾರೆ. ಅಲ್ಲದೇ ಕೊಲೆ ನಂತರ ದರ್ಶನ್‌(Darshan) ಹನ್ನೆರಡು ಸಾಕ್ಷಿಗಳನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರದುರ್ಗದ(Chitradurga) ರೇಣುಕಾಸ್ವಾಮಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟು ದರ್ಶನ್‌ ಗ್ಯಾಂಗ್‌ ಸಾಯಿಸಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಶವದ ಮೇಲಿನ ಬಟ್ಟೆಯನ್ನು ಬದಲಿಸಲಾಗಿದ್ದು, ರೇಣುಕಾಸ್ವಾಮಿಯ ಮೊಬೈಲ್‌ನನ್ನು ಎಸೆಯಲಾಗಿದೆ. ಹೀಗೆ ಹಲವಾರು ಸಾಕ್ಷಿಗಳನ್ನು ದರ್ಶನ್‌ ಗ್ಯಾಂಗ್‌ ನಾಶಪಡಿಸಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಆರೋಗ್ಯ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..