ಗಾಯಗೊಂಡು ಖುದ್ದು ಆಸ್ಪತ್ರೆಗೆ ಬಂದ ಕೋತಿ, ಹಠ ಹಿಡಿದು ಚಿಕಿತ್ಸೆ ಪಡೆದೇ ಹೋಯ್ತು!

ಗಾಯಗೊಂಡು ಖುದ್ದು ಆಸ್ಪತ್ರೆಗೆ ಬಂದ ಕೋತಿ, ಹಠ ಹಿಡಿದು ಚಿಕಿತ್ಸೆ ಪಡೆದೇ ಹೋಯ್ತು!

Suvarna News   | Asianet News
Published : Jun 06, 2020, 07:13 PM IST

ಕೋತಿಗೆ  ಔಷಧಿ ಪಡೆದು ಖುಷಿಯಾಯ್ತಾದರೂ, ಆ ಮಹಾನುಭಾವ ಪ್ರಾಣಿಪ್ರಿಯ ತನ್ನ ಗೆಳೆಯನ ಮೂಲಕ ಔಷಧಿ ತರಿಸಿ, ಧೈರ್ಯ ಮಾಡಿ ಹಚ್ಚಿದ ಪರಿಯಂತೂ ಶ್ಲಾಘನೀಯ. ಇದನ್ನೆಲ್ಲಾ ಗಮನಿಸುತ್ತಿದ್ದ ದಾಂಡೇಲಿಯ ಹಿರಿಯ ಸಮಾಜ ಸೇವಕ ದಿನೇಶ್ ವ್ಯಾಸ್ ಅವರು ಈ ಎಲ್ಲ ಘಟನೆಗಳನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದೀಗ ಈ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. 

ದಾಂಡೇಲಿ (ಜೂ. 06): ಕೇರಳದಲ್ಲಿ ಗರ್ಭಿಣಿ ಆನೆ ಸ್ಫೋಟಕ ತುಂಬಿದ ಹಣ್ಣು ತಿಂದು ಮೃತಪಟ್ಟ ಘಟನೆ ಇನ್ನೂ ಚರ್ಚೆಯಾಗುತ್ತಿದ್ದರೆ, ಕರ್ನಾಟಕದಲ್ಲಿ ಗಾಯಗೊಂಡ ಕೋತಿಗೆ ಮಾನವೀಯ ಸ್ಪರ್ಶ ಸಿಕ್ಕಿದೆ.  ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಕೋತಿಯೊಂದು ಸನ್ನೆಯಿಂದಲೇ ಗಾಯ ತೋರಿಸಿ ಔಷಧಿ ಹಚ್ಚಿಸಿಕೊಂಡು ತೆರಳಿದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.

ಹೌದು, ನಿನ್ನೆ ದಾಂಡೇಲಿಯ ಪಾಟೀಲ್ ಆಸ್ಪತ್ರೆಗೆ ಕೋತಿಯೊಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಚಾನಕ್ಕಾಗಿ ಕೋತಿಯೊಂದು ಬಂದು, ಆಸ್ಪತ್ರೆಯ ಮುಂಬಾಗಿಲಿನ ಮುಂದೆ ಮೆಟ್ಟಿಲಲ್ಲಿ ಕೂತೇ ಬಿಟ್ಟಿತ್ತು. ಆಸ್ಪತ್ರೆಯ ಸಿಬ್ಬಂದಿಗಳೆಲ್ಲ ಗಾಬರಿಯಾಗಿ ಓಡಿಸೆಲೆತ್ನಿಸಿದರೂ ಅದು ಧೈರ್ಯ ಮಾಡಿ ಚಿಕಿತ್ಸೆಗಾಗಿ ಕೂತಲ್ಲಿಂದ ಎದ್ದೇಳಲೇ ಇಲ್ಲ.

ಇದನ್ನೂ ನೋಡಿ | ಪ್ರವಾಸಕ್ಕೆ ಹೊರಡಲು ರೆಡಿಯಾಗಿ, ಆದ್ರೆ ಸರ್ಕಾರದ ಈ ನಿಯಮ ಪಾಲಿಸಿ...

ಕೊನೆಗೆ ಆಸ್ಪತ್ರೆಗೆಂದು ಬಂದಿದ್ದ ವ್ಯಕ್ತಿಯೋರ್ವರು ತನ್ನ ಗೆಳೆಯನ ಮೂಲಕ ಔಷಧಿ ತರಿಸಿ, ಕೋತಿ ಗಾಯ ಮಾಡಿಕೊಂಡಿದ್ದ ಜಾಗಕ್ಕೆ ಔಷಧಿ ಹಚ್ಚಿದರು. ಸ್ವಲ್ಪ ಹೊತ್ತಿನ ಬಳಿಕ ಚಿಕಿತ್ಸೆ ಪಡೆದು ನಿಟ್ಟುಸಿರು ಬಿಟ್ಟ ಕೋತಿ ತನ್ನ ಪಾಡಿಗೆ ತಾನು ಹೊರಟು ಹೋಯಿತು. 

ಕೋತಿಗೆ  ಔಷಧಿ ಪಡೆದು ಖುಷಿಯಾಯ್ತಾದರೂ, ಆ ಮಹಾನುಭಾವ ಪ್ರಾಣಿಪ್ರಿಯ ತನ್ನ ಗೆಳೆಯನ ಮೂಲಕ ಔಷಧಿ ತರಿಸಿ, ಧೈರ್ಯ ಮಾಡಿ ಹಚ್ಚಿದ ಪರಿಯಂತೂ ಶ್ಲಾಘನೀಯ. ಇದನ್ನೆಲ್ಲಾ ಗಮನಿಸುತ್ತಿದ್ದ ದಾಂಡೇಲಿಯ ಹಿರಿಯ ಸಮಾಜ ಸೇವಕ ದಿನೇಶ್ ವ್ಯಾಸ್ ಅವರು ಈ ಎಲ್ಲ ಘಟನೆಗಳನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದೀಗ ಈ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!