ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ: ಮಾರುಕಟ್ಟೆಗೆ ಲಗ್ಗೆ ಇಟ್ಟ ಸಗಣಿ ದೀಪಗಳು

ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ: ಮಾರುಕಟ್ಟೆಗೆ ಲಗ್ಗೆ ಇಟ್ಟ ಸಗಣಿ ದೀಪಗಳು

Published : Nov 14, 2023, 11:00 AM IST

ರಾಜ್ಯದೆಲ್ಲೆಡೆ ದೀಪಾವಳಿ ಹಬ್ಬ ಕಳೆಗಟ್ಟಿದೆ. ಪ್ರತೀ ವರ್ಷ ಮಾರುಕಟ್ಟೆಗೆ ಬಗೆ ಬಗೆಯ ದೀಪಗಳು ಲಗ್ಗೆಯಿಡ್ತಿದ್ರೆ ಈ ಬಾರಿ ಸಗಣಿ ದೀಪ ಎಲ್ಲರ ಮನೆಯಲ್ಲೂ ಬೆಳಗುತ್ತಿದೆ. 
 


ಗುಂಪು ಗುಂಪಾಗಿ ಕುಳಿತು ದೀಪಗಳ ತಯಾರಿಯಲ್ಲಿ ನಿರತರಾಗಿರೋ ಮಹಿಳೆಯರು. ದೀಪಗಳ ತಯಾರಿಯನ್ನ ಕುತೂಹಲದಿಂದ ನೋಡ್ತಿರೋ ಜನ. ಮತ್ತೊಂದೆಡೆ ಸಿದ್ಧವಾಗಿರೋ ದೀಪಗಳನ್ನ(Deepas) ಖರೀದಿ ಮಾಡ್ತಿರೋ ಸಾರ್ವಜನಿಕರು. ಈ ದೃಶ್ಯ ಕಂಡುಬಂದಿದ್ದು ದೊಡ್ಡಬಳ್ಳಾಪುರದಲ್ಲಿ(Doddaballapura). ಬೆಳಕಿನ ಹಬ್ಬ ದೀಪಾವಳಿ ಆಚರಣೆ (Deepavali celebration)ಜೋರಾಗಿದೆ. ದೀಪಾವಳಿ ಹಬ್ಬಕ್ಕೆಂದೇ ಮಾರುಕಟ್ಟೆಯಲ್ಲಿ ತರಹೇವಾರಿ ದೀಪಗಳು ಲಗ್ಗೆ ಇಟ್ಟಿವೆ. ಈ ಬಾರಿ ಮಣ್ಣಿನ ದೀಪಗಳ ಬದಲಿಗೆ ಸಗಣಿ ದೀಪಗಳು ಮಾರುಕಟ್ಟೆಗೆ ಬಂದಿದ್ದು, ಸಗಣಿ ದೀಪ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ರಾಷ್ಟ್ರೋತ್ಥಾನ ಗೋ ಶಾಲೆಯಲ್ಲಿ(Rashtrothana Goshala) ಸಗಣಿ ದೀಪಗಳನ್ನ ತಯಾರಿಸಲಾಗ್ತಿದೆ. ಸಗಣಿ ದೀಪ ತಯಾರಿಸಿ ಅದನ್ನು 3 ದಿನ ಬಿಸಿಲಿನಲ್ಲಿ ಒಣಗಿಸಿ ಮಾರುಕಟ್ಟೆಗೆ ಕಳಿಸಲಾಗ್ತಿದೆ. ಮಾರುಕಟ್ಟೆಗೆ ಬಂದಿರೋ ಸಗಣಿ ದೀಪ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಗಣಿ ದೀಪಗಳಿಗೆ ಸಾಕಷ್ಟು ಬೇಡಿಕೆ ಬರುತ್ತಿದೆ ಅಂತಾರೆ ಗೋಶಾಲೆ ಸಿಬ್ಬಂದಿ.ಸಗಣಿ ದೀಪ ಹಚ್ಚಿದ್ರೆ ಅದರಿಂದ ಬರುವ ಹೊಗೆ ಗಾಳಿಯ ಜತೆ ಸೇರಿ ಗಾಳಿ ಶುದ್ಧವಾಗುತ್ತಂತೆ. ಜೊತೆಗೆ ಶುದ್ಧ ಗಾಳಿಯಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗಲಿದೆ ಅಂತಾರೆ ಗೋಶಾಲೆ ಸಿಬ್ಬಂದಿ. ಸಗಣಿ ದೀಪಗಳು ಮಾರುಕಟ್ಟೆಗೆ ಲಗ್ಗೆಯಿಡ್ತಿರೋದು ಖುಷಿಯ ಸಂಗತಿ. ಸಗಣಿ ದೀಪಗಳನ್ನ ಹಚ್ಚುವ ಮೂಲಕ ಜನ ಆರೋಗ್ಯಕರ ದೀಪಾವಳಿ ಆಚರಣೆ ಮಾಡಲಿ ಅನ್ನೋದು ನಮ್ಮ ಆಶಯ.

ಇದನ್ನೂ ವೀಕ್ಷಿಸಿ:  ಅಗಲಿದವರನ್ನೂ ಸ್ಮರಿಸುವ 'ಜನಪದ ದೀಪಾವಳಿ' ಆಚರಣೆ: ಖಾದ್ಯಗಳನ್ನಿಟ್ಟು ಸತ್ತವರನ್ನ ಬರಮಾಡಿಕೊಳ್ಳೋದು ಸಂಪ್ರದಾಯ

02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
Read more