ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ: ಮಾರುಕಟ್ಟೆಗೆ ಲಗ್ಗೆ ಇಟ್ಟ ಸಗಣಿ ದೀಪಗಳು

ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ: ಮಾರುಕಟ್ಟೆಗೆ ಲಗ್ಗೆ ಇಟ್ಟ ಸಗಣಿ ದೀಪಗಳು

Published : Nov 14, 2023, 11:00 AM IST

ರಾಜ್ಯದೆಲ್ಲೆಡೆ ದೀಪಾವಳಿ ಹಬ್ಬ ಕಳೆಗಟ್ಟಿದೆ. ಪ್ರತೀ ವರ್ಷ ಮಾರುಕಟ್ಟೆಗೆ ಬಗೆ ಬಗೆಯ ದೀಪಗಳು ಲಗ್ಗೆಯಿಡ್ತಿದ್ರೆ ಈ ಬಾರಿ ಸಗಣಿ ದೀಪ ಎಲ್ಲರ ಮನೆಯಲ್ಲೂ ಬೆಳಗುತ್ತಿದೆ. 
 


ಗುಂಪು ಗುಂಪಾಗಿ ಕುಳಿತು ದೀಪಗಳ ತಯಾರಿಯಲ್ಲಿ ನಿರತರಾಗಿರೋ ಮಹಿಳೆಯರು. ದೀಪಗಳ ತಯಾರಿಯನ್ನ ಕುತೂಹಲದಿಂದ ನೋಡ್ತಿರೋ ಜನ. ಮತ್ತೊಂದೆಡೆ ಸಿದ್ಧವಾಗಿರೋ ದೀಪಗಳನ್ನ(Deepas) ಖರೀದಿ ಮಾಡ್ತಿರೋ ಸಾರ್ವಜನಿಕರು. ಈ ದೃಶ್ಯ ಕಂಡುಬಂದಿದ್ದು ದೊಡ್ಡಬಳ್ಳಾಪುರದಲ್ಲಿ(Doddaballapura). ಬೆಳಕಿನ ಹಬ್ಬ ದೀಪಾವಳಿ ಆಚರಣೆ (Deepavali celebration)ಜೋರಾಗಿದೆ. ದೀಪಾವಳಿ ಹಬ್ಬಕ್ಕೆಂದೇ ಮಾರುಕಟ್ಟೆಯಲ್ಲಿ ತರಹೇವಾರಿ ದೀಪಗಳು ಲಗ್ಗೆ ಇಟ್ಟಿವೆ. ಈ ಬಾರಿ ಮಣ್ಣಿನ ದೀಪಗಳ ಬದಲಿಗೆ ಸಗಣಿ ದೀಪಗಳು ಮಾರುಕಟ್ಟೆಗೆ ಬಂದಿದ್ದು, ಸಗಣಿ ದೀಪ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ರಾಷ್ಟ್ರೋತ್ಥಾನ ಗೋ ಶಾಲೆಯಲ್ಲಿ(Rashtrothana Goshala) ಸಗಣಿ ದೀಪಗಳನ್ನ ತಯಾರಿಸಲಾಗ್ತಿದೆ. ಸಗಣಿ ದೀಪ ತಯಾರಿಸಿ ಅದನ್ನು 3 ದಿನ ಬಿಸಿಲಿನಲ್ಲಿ ಒಣಗಿಸಿ ಮಾರುಕಟ್ಟೆಗೆ ಕಳಿಸಲಾಗ್ತಿದೆ. ಮಾರುಕಟ್ಟೆಗೆ ಬಂದಿರೋ ಸಗಣಿ ದೀಪ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಗಣಿ ದೀಪಗಳಿಗೆ ಸಾಕಷ್ಟು ಬೇಡಿಕೆ ಬರುತ್ತಿದೆ ಅಂತಾರೆ ಗೋಶಾಲೆ ಸಿಬ್ಬಂದಿ.ಸಗಣಿ ದೀಪ ಹಚ್ಚಿದ್ರೆ ಅದರಿಂದ ಬರುವ ಹೊಗೆ ಗಾಳಿಯ ಜತೆ ಸೇರಿ ಗಾಳಿ ಶುದ್ಧವಾಗುತ್ತಂತೆ. ಜೊತೆಗೆ ಶುದ್ಧ ಗಾಳಿಯಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗಲಿದೆ ಅಂತಾರೆ ಗೋಶಾಲೆ ಸಿಬ್ಬಂದಿ. ಸಗಣಿ ದೀಪಗಳು ಮಾರುಕಟ್ಟೆಗೆ ಲಗ್ಗೆಯಿಡ್ತಿರೋದು ಖುಷಿಯ ಸಂಗತಿ. ಸಗಣಿ ದೀಪಗಳನ್ನ ಹಚ್ಚುವ ಮೂಲಕ ಜನ ಆರೋಗ್ಯಕರ ದೀಪಾವಳಿ ಆಚರಣೆ ಮಾಡಲಿ ಅನ್ನೋದು ನಮ್ಮ ಆಶಯ.

ಇದನ್ನೂ ವೀಕ್ಷಿಸಿ:  ಅಗಲಿದವರನ್ನೂ ಸ್ಮರಿಸುವ 'ಜನಪದ ದೀಪಾವಳಿ' ಆಚರಣೆ: ಖಾದ್ಯಗಳನ್ನಿಟ್ಟು ಸತ್ತವರನ್ನ ಬರಮಾಡಿಕೊಳ್ಳೋದು ಸಂಪ್ರದಾಯ

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more