Hubballi-Dharwad: ಕರೆ ಮಾಡಿದ್ರೆ, ಕೋವಿಡ್ ರೋಗಿಗಳ ಮನೆ ಬಾಗಿಲಿಗೆ ಕೋವಿಡ್ ಕಿಟ್

Hubballi-Dharwad: ಕರೆ ಮಾಡಿದ್ರೆ, ಕೋವಿಡ್ ರೋಗಿಗಳ ಮನೆ ಬಾಗಿಲಿಗೆ ಕೋವಿಡ್ ಕಿಟ್

Suvarna News   | Asianet News
Published : Jan 28, 2022, 05:23 PM IST

- ಕೋವಿಡ್ ರೋಗಿಗಳ ಮನೆ ಬಾಗಿಲಿಗೆ ಕೋವಿಡ್ ಕಿಟ್ ವಿತರಣೆ 

- ವಿನೂತನ ಪ್ಲಾನ್ ಮಾಡಿದ ಪಾಲಿಕೆ ಕಮಿಷನರ್ ಗೋಪಾಲಕೃಷ್ಣ

-ಹೋಮ್ ಐಸೂಲೇಶನ್ ನಂಬರ್: 08362213803, 9141051611 
 

ಧಾರವಾಡ (ಜ. 28): ರಾಜ್ಯದಲ್ಲಿ ದಿನೆ ದಿನೆ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಎರಡು ಅಲೆಯಲ್ಲಿ ಕೊರೊನಾ ರೋಗಿಗಳು ಅನುಭವಿಸಿದ ತೊಂದರೆಯನ್ನು ಮತ್ತೆ ಅನುಭವಿಸಬಾರದು ಎಂದು ಹುಬ್ಬಳ್ಳಿ-ಧಾರವಾಡ (Hubballi Dharwad) ಮಹಾನಗರ ಪಾಲಿಕೆಯ ಕಮಿಷನರ್ ಆರ್ ಗೋಪಾಲಕೃಷ್ಣ ಸೋಂಕಿತರ ಮನೆ ಬಾಗಿಲಿಗೆ ಔಷಧಿಯನ್ನ ತಲುಪಿಸುವ ವಿನೂತನ ಕಾರ್ಯಕ್ರಮವನ್ನ  ರೂಪಿಸಿದ್ದಾರೆ. 

ಧಾರವಾಡ ಹುಬ್ಬಳ್ಳಿ ಅವಳಿ ನಗರದಲ್ಲಿ ದಿನೆ ದಿನೇ ಕೊರೊನಾ ಕೇಸ್‌ಗಳು ಹೆಚ್ಚುತ್ತಿವೆ. ಅದರಲ್ಲಿ ಎರಡನೇ ಅಲೆಗಿಂತ ಮೂರನೇಯ ಅಲೆಯಲ್ಲಿ ಶೇ 90 ರಷ್ಡು ಜನರು ‌ಹೋಂ ಐಶೋಲೇಶನಲ್ಲಿ‌ದ್ದಾರೆ. ಅವರೆಲ್ಲರಿಗೂ ಮನೆ ಮನೆಗೆ ಔಷಧಿ ಕಿಟ್ ಕೊಡಲು ಅವಳಿ‌ನಗರದ 12 ಝೋನಲ್ ಕಚೇರಿಯಲ್ಲಿ ಪ್ರತಿ ಝೋನ್‌ಗೆ ಎರಡು ವಾಹನದಂತೆ, 25 ವಾಹನಗಳನ್ನ ಪಡೆದುಕೊಂಡಿದ್ದಾರೆ.‌ ಒಂದು ವಾಹನದಲ್ಲಿ ಮೂವರು ಸಿಬ್ಬಂದಿಗಳನ್ನ ನೇಮಕ ಮಾಡಿದ್ದಾರೆ. ಯಾರೇ ಕೋವಿಡ್ ಪೇಶಂಟ್‌ಗಳು ನಿಗದಿಪಡಿಸಿದ ನಂಬರ್‌ಗಳಿಗೆ ಕರೆ ಮಾಡಿದರೆ ಸಾಕು ಮನೆ ಬಾಗಿಲಿಗೆ ತೆರಳಿ ಕಿಟ್ ನೀಡುತ್ತಿದ್ದಾರೆ. ಇನ್ನು ಈ ಯೋಜನೆಯ ವೆಚ್ಚವನ್ನ ಪಾಲಿಕೆ ಮತ್ತು ಜಿಲ್ಲಾಡಳಿತ ಭರಿಸಲಿದೆ ಎಂದು ಹೇಳ್ತಾರೆ ಕಮಿಷನರ್ ಗೋಪಾಲಕೃಷ್ಣ.

ದಿನದ 24 ಘಂಟೆಗಳಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಿದರೆ ಸಾಕು,  ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಔಷಧಿಯನ್ನ ಕೊಡಲು ಸಜ್ಜಾಗಿದ್ದಾರೆ. ಈಗಾಗಲೆ‌ ಎರಡು ಅಲೆಯಲ್ಲಿ ಕೊವಿಡ್ ಕಿಟ್ ಗಾಗಿ ಜನಸಾಮಾನ್ಯರು ತುಂಬಾ ತೊಂದರೆಯನ್ನು ಅನುಭವಿಸಿದ್ರು. ಆದರೆ ಈ ತೊಂದರೆಯನ್ನ ಮೂರನೇಯ ಅಲೆಯಲ್ಲಿ ಅನುಭವಿಸಬಾರದು ಎಂದು ಕಮಿಷನರ್ ಅವರು ಸಹಾಯವಾಣಿ ಆರಂಭಿಸಿದ್ದಾರೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಿಷನರ್ ವ್ಯಾಪ್ತಿಯಲ್ಲಿ ಧಾರವಾಡ ಮಹಾನಗರ ಪಾಲಿಕೆ ಕೆಲಸವನ್ನ ಮಾಡುತ್ತಿದೆ. ಜನರು ಕೂಡಾ ಈ ವಿನೂತನ ಯೋಜನೆಯನ್ನ ಸದುಪಯೋಗಪಡಿಸಿಕ್ಕೋಳ್ಳಬೇಕು ಅಂತಾರೆ ಸ್ಥಳಿಯ ನಿವಾಸಿಗಳು. 
 

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more