ಹಳೇ ವೈಷಮ್ಯಕ್ಕೆ ಬಲಿಯಾದ ಚಿನ್ನದಂತ ಫಸಲು: ಬೆಳೆದ ಬೆಳೆ ಕೈಸೇರಲಿಲ್ಲ ಎಂದು ಅನ್ನದಾತ ಅಳಲು..!

ಹಳೇ ವೈಷಮ್ಯಕ್ಕೆ ಬಲಿಯಾದ ಚಿನ್ನದಂತ ಫಸಲು: ಬೆಳೆದ ಬೆಳೆ ಕೈಸೇರಲಿಲ್ಲ ಎಂದು ಅನ್ನದಾತ ಅಳಲು..!

Published : Oct 12, 2023, 11:26 AM IST

ಸಮೃದ್ಧವಾಗಿ ಬೆಳೆದಿರೋ ಹತ್ತಿ ಬೆಳೆ.. ಸುಮಾರು 15-16 ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದ  ಹತ್ತಿ ಬೆಳೆ  ಇನ್ನೇನು 1 ತಿಂಗಳು ಕಳೆದರೇ ರೈತನ  ಕೈ ಸೇರುತ್ತಿತ್ತು. ಅಷ್ಟರಲ್ಲಿಯೇ ಕುರ್ಡಿ ಗ್ರಾಮದ ಅಬ್ರಾಹಮಪ್ಪ ಎಂಬಾತ 50 -60 ಜನರ ರೌಡಿಗಳನ್ನ ಕರೆದುಕೊಂಡು ಬಂದು ಜಮೀನಿಗೆ ಟ್ರ್ಯಾಕ್ಟರ್ ನುಗ್ಗಿಸಿ ಹತ್ತಿಬೆಳೆನ್ನ ನಾಶ ಮಾಡಿದ್ದಾನಂತೆ. 

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹುಲಿಗೆಪ್ಪ ಕಳೆದ 25 ವರ್ಷಗಳ ಹಿಂದೆ ಕೃಷಿ ಮಾಡಲು ಗೊಬ್ಬರ ಮತ್ತು ಕ್ರಿಮಿನಾಶಕ ತಂದಿದ್ದರಂತೆ. ಆದ್ರೆ ಅದಕ್ಕೆ ಹಣ ಕಟ್ಟಲು ಆಗದೇ ತಮ್ಮ ಜಮೀನು ಅಡವಿಟ್ಟು ಗೂಳೆ ಹೋಗಿದ್ರು. ಆ ಜಮೀನಿನಲ್ಲಿ ಅಬ್ರಾಹಮಪ್ಪ ದಬ್ಬಾಳಿಕೆಯಿಂದ ಕೃಷಿ ಮಾಡಿಕೊಂಡು ಇದ್ದ, ಈ ವರ್ಷ ಕೋರ್ಟ್ ಹುಲಿಗೆಪ್ಪನಿಗೆ ಜಮೀನು ವಾಪಸ್ ಕೊಡಿಸಿ ಆದೇಶ ನೀಡಿತ್ತು. ಹೀಗಾಗಿ ಹುಲಿಗೆಪ್ಪ ಸಹೋದರರು ಸೇರಿ ಹತ್ತಿ ಬಿತ್ತನೆ ಮಾಡಿದ್ರು. ಹತ್ತಿ ಬೆಳೆ(cotton crop) ಕೂಡ ಚೆನ್ನಾಗಿ ಬಂದಿತ್ತು.. ಆದ್ರೆ, ಈಗ ಎಲ್ಲಾ ಸರ್ವನಾಶ ಮಾಡಿದ್ದಾರೆ. ಇಡೀ ಕುಟುಂಬದ 25ಕ್ಕೂ ಹೆಚ್ಚು ಜನರು ಕೃಷಿ ಮಾಡಿ, ಬೆಳೆಯನ್ನೇ  ನಂಬಿಕೊಂಡಿದ್ರು. ಈಗ ಏಕಾಏಕಿ ಅಬ್ರಾಹಮಪ್ಪ ಹತ್ತಿ ಬೆಳೆನಾಶ ಮಾಡಿದಕ್ಕೆ ಹುಲಿಗೆಪ್ಪನ ಕುಟುಂಬಸ್ಥರು ಬೀದಿಗೆ ಬಿದ್ದಾರೆ.  ಬೆಳೆನಾಶ ಮಾಡಿದ ಅಬ್ರಾಹಮಪ್ಪನ ವಿರುದ್ಧ ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕಷ್ಟಪಟ್ಟು ದುಡಿದು ಬೆಳೆದ ಬೆಳೆ ಹಾಳು ಮಾಡಿದ್ದಾರೆ. ನ್ಯಾಯ ಕೊಡಿಸಿ ಎಂದು ಹುಲಿಗೆಪ್ಪ ಕುಟುಂಬಸ್ಥರು ಪೊಲೀಸರಿಗೆ(police) ದೂರು ಕೊಟ್ಟಿದ್ದಾರೆ. ಆದ್ರೆ ಪೊಲೀಸರು ಮಾತ್ರ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ. ಕಷ್ಟಪಟ್ಟು ಬೆಳೆದಿದ್ದ 9 ಎಕರೆ ಹತ್ತಿ ಬೆಳೆ ಸಂಪೂರ್ಣ ನಾಶ ಮಾಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ.

ಇದನ್ನೂ ವೀಕ್ಷಿಸಿ:  ಯಾದಗಿರಿ ರೈತರಿಗೆ 2.5 ಕೋಟಿ ಪಂಗನಾಮ: ಹತ್ತಿ ಖರೀದಿಸಿ..150 ಅನ್ನದಾತರಿಗೆ ಮೋಸ

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more