ಹಳೇ ವೈಷಮ್ಯಕ್ಕೆ ಬಲಿಯಾದ ಚಿನ್ನದಂತ ಫಸಲು: ಬೆಳೆದ ಬೆಳೆ ಕೈಸೇರಲಿಲ್ಲ ಎಂದು ಅನ್ನದಾತ ಅಳಲು..!

ಹಳೇ ವೈಷಮ್ಯಕ್ಕೆ ಬಲಿಯಾದ ಚಿನ್ನದಂತ ಫಸಲು: ಬೆಳೆದ ಬೆಳೆ ಕೈಸೇರಲಿಲ್ಲ ಎಂದು ಅನ್ನದಾತ ಅಳಲು..!

Published : Oct 12, 2023, 11:26 AM IST

ಸಮೃದ್ಧವಾಗಿ ಬೆಳೆದಿರೋ ಹತ್ತಿ ಬೆಳೆ.. ಸುಮಾರು 15-16 ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದ  ಹತ್ತಿ ಬೆಳೆ  ಇನ್ನೇನು 1 ತಿಂಗಳು ಕಳೆದರೇ ರೈತನ  ಕೈ ಸೇರುತ್ತಿತ್ತು. ಅಷ್ಟರಲ್ಲಿಯೇ ಕುರ್ಡಿ ಗ್ರಾಮದ ಅಬ್ರಾಹಮಪ್ಪ ಎಂಬಾತ 50 -60 ಜನರ ರೌಡಿಗಳನ್ನ ಕರೆದುಕೊಂಡು ಬಂದು ಜಮೀನಿಗೆ ಟ್ರ್ಯಾಕ್ಟರ್ ನುಗ್ಗಿಸಿ ಹತ್ತಿಬೆಳೆನ್ನ ನಾಶ ಮಾಡಿದ್ದಾನಂತೆ. 

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹುಲಿಗೆಪ್ಪ ಕಳೆದ 25 ವರ್ಷಗಳ ಹಿಂದೆ ಕೃಷಿ ಮಾಡಲು ಗೊಬ್ಬರ ಮತ್ತು ಕ್ರಿಮಿನಾಶಕ ತಂದಿದ್ದರಂತೆ. ಆದ್ರೆ ಅದಕ್ಕೆ ಹಣ ಕಟ್ಟಲು ಆಗದೇ ತಮ್ಮ ಜಮೀನು ಅಡವಿಟ್ಟು ಗೂಳೆ ಹೋಗಿದ್ರು. ಆ ಜಮೀನಿನಲ್ಲಿ ಅಬ್ರಾಹಮಪ್ಪ ದಬ್ಬಾಳಿಕೆಯಿಂದ ಕೃಷಿ ಮಾಡಿಕೊಂಡು ಇದ್ದ, ಈ ವರ್ಷ ಕೋರ್ಟ್ ಹುಲಿಗೆಪ್ಪನಿಗೆ ಜಮೀನು ವಾಪಸ್ ಕೊಡಿಸಿ ಆದೇಶ ನೀಡಿತ್ತು. ಹೀಗಾಗಿ ಹುಲಿಗೆಪ್ಪ ಸಹೋದರರು ಸೇರಿ ಹತ್ತಿ ಬಿತ್ತನೆ ಮಾಡಿದ್ರು. ಹತ್ತಿ ಬೆಳೆ(cotton crop) ಕೂಡ ಚೆನ್ನಾಗಿ ಬಂದಿತ್ತು.. ಆದ್ರೆ, ಈಗ ಎಲ್ಲಾ ಸರ್ವನಾಶ ಮಾಡಿದ್ದಾರೆ. ಇಡೀ ಕುಟುಂಬದ 25ಕ್ಕೂ ಹೆಚ್ಚು ಜನರು ಕೃಷಿ ಮಾಡಿ, ಬೆಳೆಯನ್ನೇ  ನಂಬಿಕೊಂಡಿದ್ರು. ಈಗ ಏಕಾಏಕಿ ಅಬ್ರಾಹಮಪ್ಪ ಹತ್ತಿ ಬೆಳೆನಾಶ ಮಾಡಿದಕ್ಕೆ ಹುಲಿಗೆಪ್ಪನ ಕುಟುಂಬಸ್ಥರು ಬೀದಿಗೆ ಬಿದ್ದಾರೆ.  ಬೆಳೆನಾಶ ಮಾಡಿದ ಅಬ್ರಾಹಮಪ್ಪನ ವಿರುದ್ಧ ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕಷ್ಟಪಟ್ಟು ದುಡಿದು ಬೆಳೆದ ಬೆಳೆ ಹಾಳು ಮಾಡಿದ್ದಾರೆ. ನ್ಯಾಯ ಕೊಡಿಸಿ ಎಂದು ಹುಲಿಗೆಪ್ಪ ಕುಟುಂಬಸ್ಥರು ಪೊಲೀಸರಿಗೆ(police) ದೂರು ಕೊಟ್ಟಿದ್ದಾರೆ. ಆದ್ರೆ ಪೊಲೀಸರು ಮಾತ್ರ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ. ಕಷ್ಟಪಟ್ಟು ಬೆಳೆದಿದ್ದ 9 ಎಕರೆ ಹತ್ತಿ ಬೆಳೆ ಸಂಪೂರ್ಣ ನಾಶ ಮಾಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ.

ಇದನ್ನೂ ವೀಕ್ಷಿಸಿ:  ಯಾದಗಿರಿ ರೈತರಿಗೆ 2.5 ಕೋಟಿ ಪಂಗನಾಮ: ಹತ್ತಿ ಖರೀದಿಸಿ..150 ಅನ್ನದಾತರಿಗೆ ಮೋಸ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more