ಚಾಮರಾಜನಗರ: ರೈತರ ಪಾಲಿಗೆ ಆದಾಯ ಮೂಲವಾದ ತೆಂಗಿನಕಾಯಿ ಚಿಪ್ಪು!

Nov 25, 2023, 10:28 AM IST

ಚಾಮರಾಜನಗರ ರೈತರ ಪಾಲಿಗೆ ಕಲ್ಪವೃಕ್ಷ  ದೊಡ್ಡ ಆದಾಯದ ಮೂಲವಾಗಿ ಹೊರ ಹೊಮ್ಮಿದೆ. ತೆಂಗಿನಕಾಯಿ ಚಿಪ್ಪುಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ನಂಜನಗೂಡಿನಲ್ಲಿರುವ ಪ್ರತಿಷ್ಠಿತ ಚಾಕೋಲೆಟ್ ಕಂಪನಿಯು ಈ ತೆಂಗಿನ ಚಿಪ್ಪನ್ನು ಖರೀದಿ ಮಾಡುತ್ತಿದೆ. ಬಾಯ್ಲರ್ ಕಾಯಿಸಲು ಚಿಪ್ಪು ಬಳಕೆ ಮಾಡಲಾಗುತ್ತದೆ. ಕಲ್ಲಿದ್ದಲು ಶೆಲ್‌ ಉತ್ಪಾದನೆಗೂ ತೆಂಗಿನ ಚಿಪ್ಪನ್ನು ಬಳಕೆ ಮಾಡಲಾಗುತ್ತದೆ. ನಂಜನಗೂಡು, ಅರಸೀಕರೆ ಉದ್ಯಮಿಗಳಿಂದ ಚಿಪ್ಪು ಖರೀದಿಯಾಗುತ್ತಿದೆ.