ಹಾವಿನ ಬಾತ್‌ರೂಂ ಮೋಹ...  ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು..!

ಹಾವಿನ ಬಾತ್‌ರೂಂ ಮೋಹ... ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು..!

Contributor Asianet   | Asianet News
Published : Feb 03, 2022, 01:09 PM IST
  • ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು!
  • ಪೈಪ್ ಮೂಲಕ ಬಾತ್‌ರೂಂ ಪ್ರವೇಶಿಸಿ ಪುನಃ ಅದೇ ಪೈಪ್ ಮೂಲಕ ಹೊರಗೆ
  • ಶಿವಮೊಗ್ಗದ ಮದಾರಿಪಾಳ್ಯದ ಮನೆಯೊಂದರಲ್ಲಿ ವಿಚಿತ್ರ ಘಟನೆ

ಶಿವಮೊಗ್ಗ(ಫೆ.3): ನಾಗರ ಹಾವೊಂದರ ಬಾತ್‌ರೂಂ ಮೋಹ ಈಗ ಶಿವಮೊಗ್ಗದಲ್ಲಿ ಚರ್ಚೆಯ ವಿಷಯವಾಗಿದೆ. ಹೌದು,  ಇದೆಂಥಾ  ವಿಚಿತ್ರ ಅಂತಾ ನಿಮಗನಿಸಬಹುದು. ನಗರದ ಮದಾರಿಪಾಳ್ಯದ  ಮೊಹಮ್ಮದ್ ಜಿಯಾವುಲ್ಲಾ ಎಂಬುವರ ಮನೆಯಲ್ಲಿ ಕಳೆದ 3 ತಿಂಗಳಿಂದ ಹಾವೊಂದು ಬಾತ್‌ರೂಂಗೆ ಪದೇ ಪದೇ ವಿಸಿಟ್‌ ಕೊಡುತ್ತಿದೆ. ಯಾರೂ ಇಲ್ಲದ ವೇಳೆ ಪೈಪ್ ಮೂಲಕ ಬಾತ್ ರೂಂ ಪ್ರವೇಶಿಸಿ ಪುನಃ ಅದೇ ಪೈಪ್ ಮೂಲಕ ಹೊರ ಹೋಗುತ್ತಿದೆ. ಹಿಂದೊಮ್ಮೆ ಮನೆಯವರು ಆಕಸ್ಮಿಕವಾಗಿ ಹಾವು ಬಾತ್ ರೂಂ ನಲ್ಲಿ ಬಂದಿದ್ದು ನೋಡಿದ್ದಾರೆ, ಸ್ವಲ್ಪ ಸಮಯದ ನಂತರ ಅದು ಹೊರ ಹೋಗುವುದನ್ನೂ ನೋಡಿದ್ದಾರೆ. ಅಂತೂ ಇಂತೂ ಹೊರ ಹೋಯ್ತಲ್ಲ ಎಂದು ಸುಮ್ಮನಾಗಿದ್ದಾರೆ. 

ಆದರೆ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿದೆ ಆ ಹಾವು! ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಪುನಃ ಬಾತ್ ರೂಂ ನಲ್ಲಿ ಕಾಣಿಸಿಕೊಂಡಿದೆ.  ಮನೆಯವರಿಗೆ ತಿಳಿಯದಂತೆ ಆಗಾಗ್ಗೆ ಬಾತ್ ರೂಂ ಗೆ ಹಾವು ಬಂದು ಹೋಗುತ್ತಿರುವುದು ಗೊತ್ತಾಗಿದೆ.  ಬಾತ್ ರೂಂನ ನೀರು ಹರಿದು ಹೋಗುವ ಪೈಪ್ ಒಳಗಿಂದ ನಾಗರ ಹಾವೊಂದು ಒಳ ಬಂದು ಹೋಗುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ನಿನ್ನೆ ಮತ್ತೆ ಬಾತ್ ರೂಂ ಪೈಪ್ ನಲ್ಲಿ ಹಾವು ಕಾಣಿಸಿಕೊಂಡಿದ್ದು,  ಗಾಬರಿಗೊಳಗಾದ ಮನೆಯವರು ಉರಗ ಸಂರಕ್ಷಕ ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದರು.  ಸ್ಥಳಕ್ಕಾಗಮಿಸಿದ ಕಿರಣ್ , ಸುರಕ್ಷಿತವಾಗಿ ಹಾವನ್ನು ರಕ್ಷಿಸಿದ್ದಾರೆ. 

ಒಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು... ಮನೆಯಲ್ಲಿತ್ತು 125 ಕ್ಕೂ ಹೆಚ್ಚು ಬಗೆಯ ಹಾವು

ಹಾಗಾದ್ರೆ ಕಳೆದ ಮೂರು ತಿಂಗಳಿನಿಂದ ಹಾವು ಬಾತ್ ರೂಮ್ ಪೈಪ್ ಅನ್ನೇ ವಾಸ ಸ್ಥಾನ ಮಾಡಿಕೊಂಡಿತ್ತಾ? ಎಂಬ ಅನುಮಾನ ಹುಟ್ಟಿಕೊಂಡಿದೆ.  ಆದರೆ ನಾಗರ ಹಾವಿನ ವಿಚಿತ್ರ ವರ್ತನೆ ಮಾತ್ರ ಯಕ್ಷ ಪ್ರಶ್ನೆ ಯಾಗಿ ಉಳಿದಿದೆ. 

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more