ಹಾವಿನ ಬಾತ್‌ರೂಂ ಮೋಹ...  ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು..!

ಹಾವಿನ ಬಾತ್‌ರೂಂ ಮೋಹ... ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು..!

Contributor Asianet   | Asianet News
Published : Feb 03, 2022, 01:09 PM IST
  • ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು!
  • ಪೈಪ್ ಮೂಲಕ ಬಾತ್‌ರೂಂ ಪ್ರವೇಶಿಸಿ ಪುನಃ ಅದೇ ಪೈಪ್ ಮೂಲಕ ಹೊರಗೆ
  • ಶಿವಮೊಗ್ಗದ ಮದಾರಿಪಾಳ್ಯದ ಮನೆಯೊಂದರಲ್ಲಿ ವಿಚಿತ್ರ ಘಟನೆ

ಶಿವಮೊಗ್ಗ(ಫೆ.3): ನಾಗರ ಹಾವೊಂದರ ಬಾತ್‌ರೂಂ ಮೋಹ ಈಗ ಶಿವಮೊಗ್ಗದಲ್ಲಿ ಚರ್ಚೆಯ ವಿಷಯವಾಗಿದೆ. ಹೌದು,  ಇದೆಂಥಾ  ವಿಚಿತ್ರ ಅಂತಾ ನಿಮಗನಿಸಬಹುದು. ನಗರದ ಮದಾರಿಪಾಳ್ಯದ  ಮೊಹಮ್ಮದ್ ಜಿಯಾವುಲ್ಲಾ ಎಂಬುವರ ಮನೆಯಲ್ಲಿ ಕಳೆದ 3 ತಿಂಗಳಿಂದ ಹಾವೊಂದು ಬಾತ್‌ರೂಂಗೆ ಪದೇ ಪದೇ ವಿಸಿಟ್‌ ಕೊಡುತ್ತಿದೆ. ಯಾರೂ ಇಲ್ಲದ ವೇಳೆ ಪೈಪ್ ಮೂಲಕ ಬಾತ್ ರೂಂ ಪ್ರವೇಶಿಸಿ ಪುನಃ ಅದೇ ಪೈಪ್ ಮೂಲಕ ಹೊರ ಹೋಗುತ್ತಿದೆ. ಹಿಂದೊಮ್ಮೆ ಮನೆಯವರು ಆಕಸ್ಮಿಕವಾಗಿ ಹಾವು ಬಾತ್ ರೂಂ ನಲ್ಲಿ ಬಂದಿದ್ದು ನೋಡಿದ್ದಾರೆ, ಸ್ವಲ್ಪ ಸಮಯದ ನಂತರ ಅದು ಹೊರ ಹೋಗುವುದನ್ನೂ ನೋಡಿದ್ದಾರೆ. ಅಂತೂ ಇಂತೂ ಹೊರ ಹೋಯ್ತಲ್ಲ ಎಂದು ಸುಮ್ಮನಾಗಿದ್ದಾರೆ. 

ಆದರೆ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿದೆ ಆ ಹಾವು! ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಪುನಃ ಬಾತ್ ರೂಂ ನಲ್ಲಿ ಕಾಣಿಸಿಕೊಂಡಿದೆ.  ಮನೆಯವರಿಗೆ ತಿಳಿಯದಂತೆ ಆಗಾಗ್ಗೆ ಬಾತ್ ರೂಂ ಗೆ ಹಾವು ಬಂದು ಹೋಗುತ್ತಿರುವುದು ಗೊತ್ತಾಗಿದೆ.  ಬಾತ್ ರೂಂನ ನೀರು ಹರಿದು ಹೋಗುವ ಪೈಪ್ ಒಳಗಿಂದ ನಾಗರ ಹಾವೊಂದು ಒಳ ಬಂದು ಹೋಗುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ನಿನ್ನೆ ಮತ್ತೆ ಬಾತ್ ರೂಂ ಪೈಪ್ ನಲ್ಲಿ ಹಾವು ಕಾಣಿಸಿಕೊಂಡಿದ್ದು,  ಗಾಬರಿಗೊಳಗಾದ ಮನೆಯವರು ಉರಗ ಸಂರಕ್ಷಕ ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದರು.  ಸ್ಥಳಕ್ಕಾಗಮಿಸಿದ ಕಿರಣ್ , ಸುರಕ್ಷಿತವಾಗಿ ಹಾವನ್ನು ರಕ್ಷಿಸಿದ್ದಾರೆ. 

ಒಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು... ಮನೆಯಲ್ಲಿತ್ತು 125 ಕ್ಕೂ ಹೆಚ್ಚು ಬಗೆಯ ಹಾವು

ಹಾಗಾದ್ರೆ ಕಳೆದ ಮೂರು ತಿಂಗಳಿನಿಂದ ಹಾವು ಬಾತ್ ರೂಮ್ ಪೈಪ್ ಅನ್ನೇ ವಾಸ ಸ್ಥಾನ ಮಾಡಿಕೊಂಡಿತ್ತಾ? ಎಂಬ ಅನುಮಾನ ಹುಟ್ಟಿಕೊಂಡಿದೆ.  ಆದರೆ ನಾಗರ ಹಾವಿನ ವಿಚಿತ್ರ ವರ್ತನೆ ಮಾತ್ರ ಯಕ್ಷ ಪ್ರಶ್ನೆ ಯಾಗಿ ಉಳಿದಿದೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more