Feb 23, 2021, 10:43 AM IST
ಬೆಂಗಳೂರು (ಫೆ. 23): ಕೋಟೆ ನಾಡಿನಲ್ಲಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ, ನಗರದ ಅಂಗಡಿ ಮಾಲಿಕರು ಸಿಸಿಟಿವಿಯನ್ನು ಒಂದು ವಾರದೊಳಗೆ ಅಳವಡಿಸಬೇಕು. ಇಲ್ಲವಾದಲ್ಲಿ ಅವರ ಅಂಗಡಿ ಲೈಸೆನ್ಸ್ ರದ್ದುಗೊಳಿಸುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಖಾಕಿ ಪಡೆಯ ಈ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರಿಂದ ಸರಗಳ್ಳತನ, ಅಂಗಡಿಯಲ್ಲಿ ಕಳ್ಳತನ, ಮಕ್ಕಳ ಕಳ್ಳತನ ತಪ್ಪಿಸಲು ಸಾಧ್ಯವಾಗುತ್ತದೆ. ಎಲ್ಲರೂ ಸಹಕರಿಸಬೇಕು ಎಂದು ಚಿತ್ರದುರ್ಗ ಎಸ್ಪಿ ಮನವಿ ಮಾಡಿದ್ದಾರೆ.