ಮೈಸೂರಿನಲ್ಲಿ ಯುವ ದಸರಾ ಸಂಭ್ರಮ: ಮಕ್ಕಳ ದಸರಾದಲ್ಲಿ ಕಳೆಗಟ್ಟಿದ ಕಲರವ

ಮೈಸೂರಿನಲ್ಲಿ ಯುವ ದಸರಾ ಸಂಭ್ರಮ: ಮಕ್ಕಳ ದಸರಾದಲ್ಲಿ ಕಳೆಗಟ್ಟಿದ ಕಲರವ

Published : Oct 19, 2023, 11:07 AM IST

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಾಲ್ಕನೇ ದಿನ ವರ್ಣ ರಂಜಿತವಾಗಿ ಕೊನೆಗೊಂಡಿದೆ. ಹತ್ತುಹಲವು ಕಾರ್ಯಕ್ರಮಗಳ ಮೂಲಕ ನಾಡಹಬ್ಬಕ್ಕೆ‌ ಮೆರಗು ಸಿಕ್ಕಿದೆ. ಮಹಿಳಾ ದಸರಾದಲ್ಲಿ ರಾಗಿ ಬೀಸಿ, ಭತ್ತಕುಟ್ಟಿ ಮಹಿಳೆಯರು ಸಂಭ್ರಮಿಸಿದ್ರೆ, ಮಕ್ಕಳ ದಸರಾದಲ್ಲಿ ಚಿಣ್ಣರ ಕಲರವ ಜೋರಾಗಿತ್ತು.
 

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಅರಮನೆ ನಗರಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಅರಮನೆಯಂತೂ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ನಾಲ್ಕನೇ ದಿನದ ಯುವ ದಸರಾದಲ್ಲಿ(Yuva dasara)  ವಿವಿಧ ಶಾಲೆಯ ಮಕ್ಕಳು ಕರಕುಶಲ ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಶೈಕ್ಷಣಿಕ, ತಂತ್ರಜ್ಞಾನ ವಿಷಯಗಳ  ವಸ್ತು ಪ್ರದರ್ಶನಗಳನ್ನು ಮಾಡಿ ನೋಡುಗರ ಕಣ್ಮನ ಸೆಳೆಯಿತು. ಮಕ್ಕಳ ದಸರಾ ಉದ್ಘಾಟಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ(Madhubangarappa )  ಕಾರ್ಯಕ್ರಮಗಳನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ರು.. ಜೆ.ಕೆ.ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾ(women dasara) ಕೂಡಾ ಹಲವು ಗ್ರಾಮೀಣ ಕ್ರೀಡೆಗಳಿಂದ ಗಮನ ಸೆಳೆಯಿತು. ರಾಗಿ ಬೀಸುವ ಸ್ಪರ್ಧೆ, ಭತ್ತ ಕುಟ್ಟುವ ಸ್ಪರ್ಧೆ, ಹೂ ಕಟ್ಟುವ ಸ್ಪರ್ಧೆ, ಒಲೆರಹಿತ ಅಡಿಗೆ ಸ್ಪರ್ಧೆ ಹಾಗೂ ವೇಗದ ನಡಿಗೆ ಸ್ಪರ್ಧೆ ಮಹಿಳೆಯರು ಎಂಜಾಯ್ ಮಾಡುವಂತೆ ಮಾಡಿತ್ತು. ಯುವ ದಸರಾಗೆ  ಸ್ಯಾಂಡಲ್‌ವುಡ್ ನಟ, ನಟಿಯರು ಭಾಗವಹಿಸಿ ಮೆರುಗು ನೀಡಿದ್ರು. ಸಾಧು ಕೋಕಿಲ ಅಂಡ್ ಟೀಂ ಯುವ ಮನಸುಗಳನ್ನು ರಂಜಿಸಿದ್ರು. ಇತ್ತ ದಾಸರಾ ಆನೆಗಳ ಮಾವುತರ ಜೊತೆ ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಕಾಲ ಕಳೆದ್ರು.. ತಮ್ಮ ಹಳೆಯ ದಿನಗಳ ದಸರಾ ನೆನಪುಗಳನ್ನು ಮೆಲುಕು ಹಾಕಿದ್ರು.

ಇದನ್ನೂ ವೀಕ್ಷಿಸಿ:  ಯುವ ಸಿನಿಮಾಗಾಗಿ ಕಾದು ಕುಂತ ದೊಡ್ಮನೆ ಫ್ಯಾನ್ಸ್! ಸಲಾರ್‌ಗಾಗಿ ಯುವ ರಿಲೀಸ್ ತಡವಾಗುತ್ತಾ..?

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!