ಬಿಜೆಪಿ ಯಾತ್ರೆಯಲ್ಲಿ ಗುಂಡಿನ ಸದ್ದು.. ಗೃಹ ಸಚಿವರಿಗೆ ಹೆಚ್ಚಿನ ಮಾಹಿತಿ ಇಲ್ಲ!

Aug 18, 2021, 5:41 PM IST

ಯಾದಗಿರಿ, ಬೆಂಗಳೂರು(ಆ. 18)  ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವರನ್ನು ಸ್ವಾಗತ ಮಾಡಲು ನಾಡ ಬಂದೂಕಿನಿಂದ ಗುಂಡು  ಹಾರಿಸಿರುವುದು
ದೊಡ್ಡ ಸುದ್ದಿಯಾಗುತ್ತಿದೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕೇಂದ್ರ ಸಚಿವರ ಯಾತ್ರೆಯಲ್ಲಿ ಬೆಂಬಲಿಗರ ಪುಂಡಾಟ

ಈ ಬಗ್ಗೆ ಚರ್ಚೆ  ಮಾಡಿದ್ದು ಸರಿ ಇದೆ.. ಹೆಚ್ಚಿನ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಈ ಘಟನೆ ಹಿನ್ನೆಲೆ ಏನು ಎನ್ನುವುದು ಗೊತ್ತಿಲ್ಲ.  ಕಾನೂನು ಇಂಥ
ಕೆಲಸಕ್ಕೆ ಅನ್ವಯವಾಗುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಕ್ಕೆ ಆರಗ ಜ್ಞಾನೇಂದ್ರ ಸಮರ್ಪಕ ಉತ್ತರ ನೀಡಲು ಪರದಾಡಿದರು.  ಮಾಹಿತಿ ಪಡೆದುಕೊಂಡು ಆದಷ್ಟೂ
ಬೇಗನೇ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.