ಕೇರಳದ ಜೈ ಹಿಂದ್ ಚಾನೆಲ್ ಮತ್ತು ಡಿಕೆಶಿ..ಏನಿದರ ಗುಟ್ಟು..? ರಾಜಕೀಯ ಷಡ್ಯಂತ್ರ ಅಂದಿದ್ದೇಕೆ ಡಿಸಿಎಂ..?

ಕೇರಳದ ಜೈ ಹಿಂದ್ ಚಾನೆಲ್ ಮತ್ತು ಡಿಕೆಶಿ..ಏನಿದರ ಗುಟ್ಟು..? ರಾಜಕೀಯ ಷಡ್ಯಂತ್ರ ಅಂದಿದ್ದೇಕೆ ಡಿಸಿಎಂ..?

Published : Jan 03, 2024, 01:00 PM IST

ಸಿಬಿಐ ಚಕ್ರವ್ಯೂಹದಲ್ಲಿ ಬಂಧಿಯಾಗ್ತಾರಾ ಕನಕಪುರದ ಬೇಟೆಗಾರ..?
ಕೇಸ್ ವಾಪಸ್ ಪಡೆದರೂ ಕನಕಾಧಿಪತಿಗೆ ತಪ್ಪಲ್ವಾ ಸಿಬಿಐ ಕಂಟಕ..?
ಡಿಕೆ ಶಿವಕುಮಾರ್‌ ಕೊರಳಿಗೆ ಉರುಳಾಗುತ್ತಾ "ಅಕ್ರಮ ಆಸ್ತಿ" ರಹಸ್ಯ..?

ರಾಜಕೀಯದಲ್ಲಿ ಅದೆಷ್ಟೋ ಚಕ್ರವ್ಯೂಹಗಳನ್ನು ಭೇದಿಸಿ ನಿಂತಿರೋ ಬೇಟೆಗಾರನಿಗೆ ಸಿಬಿಐ(CBI) ಚಕ್ರವ್ಯೂಹ. ರಣರಂಗದ ಚದುರಂಗದಲ್ಲಿ ಅತಿ ರೋಚಕ ದಾಳಗಳನ್ನು ಉರುಳಿಸಿ ಸೈ ಎನಿಸಿಕೊಂಡ ಚಾಣಾಕ್ಷನ ಮುಂದೆ ಮತ್ತದೇ ಚಕ್ರವ್ಯೂಹ. ಆ ಚಕ್ರವ್ಯೂಹದ ಮುಂದೆ ನಿಂತಿರೋ ಡಿಕೆ ಶಿವಕುಮಾರ್(DK Shivakumar), ಜೈಲಿಗೆ ಹಾಕೋದಾದ್ರೆ ಹಾಕ್ಲಿ, ರೆಡಿ ಇದ್ದೇನೆ ನಾನು ಅಂತಿದ್ದಾರೆ. ಡಿಕೆ ಶಿವಕುಮಾರ್ ಅವ್ರನ್ನು ರಾಜಕೀಯದಲ್ಲಿ ಅಂಜದ ಗಂಡು, ಎಂಟೆದೆ ಬಂಟ ಅಂತ ಕರೀತಾರೆ. ಅಂತಹ ಬಹದ್ದೂರ್ ಗಂಡೇ, ಕಂಪಿಸಿದ ಧ್ವನಿಯಲ್ಲಿ ಮಾತನಾಡ್ತಿದ್ದಾರೆ ಅಂದ್ರೆ ಅಲ್ಲೇನೋ ನಡೆದಿರ್ಲೇಬೇಕು.ಡಿಕೆ ಸಾಹೇಬನ ಕೋಟೆಯೊಳಗೆ ಮತ್ತೊಮ್ಮೆ ಬಿರುಗಾಳಿ ಎದ್ದಿದೆ. ಕನಕಪುರದ ಬೇಟೆಗಾರನನ್ನು ಬೇಟೆಯಾಡಲು ಹೊಂಚು ಹಾಕ್ತಿರೋ ಸಿಬಿಐ, ಡಿಕೆಶಿಗೆ ಮತ್ತೆ ಶಾಕ್ ಕೊಟ್ಟಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವ್ರಿಗೆ ಇಡಿ, ಐಟಿ, ಸಿಬಿಐ ಕೇಸ್'ಗಳೆಲ್ಲಾ ಹೊಸನೇತಲ್ಲ. 2017ರಲ್ಲಿ ಶುರುವಾದ ಈ ಕೇಸ್'ಗಳ ಸರಮಾಲೆ, ಬೆನ್ನು ಬಿಡದ ಬೇತಾಳನಂತೆ ಡಿಕೆಶಿಯವ್ರನ್ನ ಕಾಡ್ತಾನೇ ಇವೆ. ಆ ಕೇಸ್"ಗಳ ಕಾರಣದಿಂದ ಡಿಕೆಶಿ, ಅದೆಷ್ಟು ರಾತ್ರಿಗಳನ್ನ ನಿದ್ದೆಯಿಲ್ಲದೆ ಕಳೆದಿದ್ದಾರೋ ಗೊತ್ತಿಲ್ಲ. ಒಂದಾದ ಮೇಲೊಂದರಂತೆ ಕೇಸ್'ಗಳ ಮೇಲೆ ಕೇಸ್.. ಒಮ್ಮೆ ಐಟಿ, ಮತ್ತೊಮ್ಮೆ ಇಡಿ, ಮಗದೊಮ್ಮೆ ಸಿಬಿಐ. ಈ ಕೇಸ್"ಗಳೆಲ್ಲಾ ಡಿಕೆ ಶಿವಕುಮಾರ್ ಅವ್ರನ್ನು ಅದೆಷ್ಟರ ಮಟ್ಟಿಗೆ ಅಲುಗಾಡಿಸಿ ಬಿಟ್ಟಿವೆ ಅಂದ್ರೆ, ಯಾವುದಕ್ಕೂ ಹೆದರಲ್ಲ ಅಂತಿದ್ದ ಡಿಕೆಶಿ 2019ರಲ್ಲಿ ಕಣ್ಣೀರು ಹಾಕ್ತಾ ಜೈಲಿಗೆ ಹೋಗುವಂತಾಗಿತ್ತು.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್-ಬಿಜೆಪಿ ನಡುವೆ ಭುಗಿಲೆದ್ದ ‘ಕರಸೇವಕ’ ಫೈಟ್: ಹಳೇ ಕೇಸ್ ಕೆದಕುವ ಹಿಂದೆ ರಾಜಕೀಯ ಇದ್ಯಾ..?

25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
Read more