ಒಂಟಿಯಾಗಿ ಹೋರಾಡಿ ಜೀವತೆತ್ತ ಅರ್ಜುನ: ಕಾಡಾನೆ ಕಾರ್ಯಾಚರಣೆ ವೇಳೆ ಹಂಟರ್ ಸ್ಪೆಷಲಿಸ್ಟ್ ಸಾವು !

ಒಂಟಿಯಾಗಿ ಹೋರಾಡಿ ಜೀವತೆತ್ತ ಅರ್ಜುನ: ಕಾಡಾನೆ ಕಾರ್ಯಾಚರಣೆ ವೇಳೆ ಹಂಟರ್ ಸ್ಪೆಷಲಿಸ್ಟ್ ಸಾವು !

Published : Dec 05, 2023, 09:52 AM ISTUpdated : Dec 05, 2023, 10:19 AM IST

ಕಾಡಾನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಬಲು ಚಾಣಾಕ್ಷ, ಬರೋಬ್ಬರಿ ಎಂಟು ಬಾರಿ ಮೈಸೂರು ದಸರೆಯಲ್ಲಿ ಚಿನ್ನದ ಅಂಬಾರಿಗೆ ಹೆಗಲಾಗುವ ಮೂಲಕ ವಿಶೇಷ ದಾಖಲೆ ಬರೆದಿದ್ದ, ಅಪಾರ ಮಂದಿಯ ಪ್ರೀತಿ ಪಾತ್ರನಾಗಿದ್ದ ಕ್ಯಾಪ್ಟನ್ ಅರ್ಜುನ ದುರಂತ ಸಾವಿಗೀಡಾಗಿದೆ. 

ಗತ್ತು ಗಾಂಭೀರ್ಯದ ಮೂಲಕ ರಾಜ್ಯದ ಜನ ಮನ ಗೆದ್ದಿದ್ದವನು ಅರ್ಜುನ. ಕಾಡುಪ್ರಾಣಿಗಳ ಆಪರೇಷನ್ ಅಂದ್ರೆ ಅಲ್ಲಿ ಅರ್ಜುನ ಕ್ಯಾಪ್ಟನ್ (Captain Arjuna) ಹಾಜರ್. ಬರೋಬ್ಬರಿ ಎಂಟು ಬಾರಿ ಚಾಮುಂಡಿ ಚಿನ್ನದ ಅಂಬಾರಿ ಹೊತ್ತು ಲಕ್ಷ ಲಕ್ಷ ಜನರ ಬಾಯಲ್ಲಿ ಅರ್ಜುನ ಹೆಸರು ಒತ್ತಿದ್ದ. ಆದರೆ ಈ ಅರ್ಜುನ ಆನೆ ಹಾಸನ(Hassan) ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳೆಕೆರೆ, ದಬ್ಬಳ್ಳಿ ಫಾರೆಸ್ಟ್‌ನಲ್ಲಿ ಮೃತಪಟ್ಟಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಬಲಿಷ್ಟ ಕಾಡಾನೆ ಕಾಳಗ ನಡೆಸಿ ಬಲಿ ಪಡೆದಿದೆ. ನವೆಂಬರ್ 24ರಿಂದ ಪುಂಡಾನೆ ಸೆರೆ ಮತ್ತು ಸ್ಥಳಾಂತರ ಹಾಗೂ ರೇಡಿಯೋ ಕಾಲರ್ ಅಳವಡಿಕೆ ಕಾರ್ಯ ಶುರುವಾಗಿತ್ತು. ಯಸಳೂರು ಭಾಗದಲ್ಲಿ ಆಪರೇಷನ್ ಮುಂದುವರಿದಿತ್ತು. ಕ್ಯಾಪ್ಟನ್ ಅರ್ಜುನನ ಜೊತೆಗೆ ಉಳಿದ ಮೂರು ಪಳಗಿದ ಆನೆಗಳು ತೆರಳಿದ್ದವು. ಈ ವೇಳೆ ಬಲಿಷ್ಠ ಸಲಗನಿಗೆ ಅರವಳಿಕೆ ಚುಚ್ಚುಮದ್ದು ನೀಡುವ ವೇಳೆ ಏಕಾಏಕಿ ಪಳಗಿದ ಆನೆಗಳ(Elephant) ಮೇಲೆಯೇ ತಿರುಗಿ ಬಿದ್ದಿದೆ. ಕೂಡಲೇ ಅರ್ಜುನನ ಜೊತೆಯಲ್ಲಿದ್ದ ಮೂರು ಆನೆ ಹಿಂದಕ್ಕೆ ಬಂದ ಕಾರಣ ಪುಂಡಾನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ಫಲ ನೀಡಲಿಲ್ಲ. ಕಡೆಗೆ ಅರ್ಜುನ ಎದೆಗುಂದದೆ ಹೋರಾಟಕ್ಕೆ ಇಳಿದ. ಅರ್ಜುನ ಮೇಲೆ ಕುಳಿತಿದ್ದ ವೈದ್ಯರು ಹಾಗೂ ಮಾವುತ ವಿನು ಸಹ ಜೀವ ಭಯದಿಂದ ಕೆಳಕ್ಕೆ ಧುಮುಕಿ ಜೀವ ಉಳಿಸಿಕೊಂಡಿದ್ದಾರೆ. ನಂತರ ಅರ್ಜುನನ ಸಾವಿಗೆ ಸುದ್ದಿ ಕೇಳಿ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ ವಿನು ಅಲಿಯಾಸ್ ವಿನೋದ್‌ನನ್ನು ಸ್ಥಳದಲ್ಲೇ ಇದ್ದ ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಏಕಾಂಗಿಯಾಗಿ ಅರ್ಜುನ ಕಾದಾಡುವಾಗಲೇ ದಢೂತಿ ಗಾತ್ರದ ಪುಂಡಾನೆ, ಅರ್ಜುನನ ಕಿಬ್ಬೊಟ್ಟೆಗೆ ಹರಿತವಾದ ಕೋರೆಯಿಂದ ಬಲವಾಗಿ ತಿವಿದಿದೆ. ಕೂಡಲೇ ಕುಸಿದು ಬಿದ್ದ ಅರ್ಜುನ, ತೀವ್ರ ರಕ್ತಸ್ರಾವದಿಂದ ಕೆಲ ಹೊತ್ತಿನಲ್ಲೇ ಪ್ರಾಣ ಬಿಟ್ಟಿದೆ.

ಇದನ್ನೂ ವೀಕ್ಷಿಸಿ:  ಹಾಸ್ಟೆಲ್ ಸಮಸ್ಯೆಗಳ ವಿರುದ್ಧ ಸಿಡಿದೆದ್ದ ಸ್ಟೂಡೆಂಟ್ಸ್‌: ನೀರಿಗಾಗಿ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more