ಆಟ ಆಡೋ ವಯಸ್ಸಲ್ಲಿ ದಾಖಲೆ ಬರೆದ ಬಾಲಕ: ಸ್ಕೇಟಿಂಗ್ ಆಡುತ್ತಾ ನಿಮಿಷದಲ್ಲೇ ಸಾಲ್ವ್ ಆಗುತ್ತೆ ರೂಬಿಕ್ಸ್ ಕ್ಯೂಬ್ !

ಆಟ ಆಡೋ ವಯಸ್ಸಲ್ಲಿ ದಾಖಲೆ ಬರೆದ ಬಾಲಕ: ಸ್ಕೇಟಿಂಗ್ ಆಡುತ್ತಾ ನಿಮಿಷದಲ್ಲೇ ಸಾಲ್ವ್ ಆಗುತ್ತೆ ರೂಬಿಕ್ಸ್ ಕ್ಯೂಬ್ !

Published : Sep 28, 2023, 11:27 AM IST

ಮಕ್ಕಳಿಗೆ ಆಟದ ವಸ್ತು ಸಿಕ್ಕರೆ ಸಾಕು ಮನಸ್ಸೋಇಚ್ಛೆ ಆಟವಾಡುತ್ತಾ ಕಾಲ ಕಳೀತಾರೆ. ಈಗಿನ ಮಕ್ಕಳಂತು ಮೊಬೈಲ್ ಇದ್ರೆ ಸಾಕು ಆನ್ಲೈನ್ ಗೇಮ್ಸ್ನಲ್ಲೇ ಮುಳುಗಿ ಹೋಗಿರ್ತಾರೆ. ಆದ್ರೆ ಇಲ್ಲೊಬ್ಬ ಪೋರ ಆಟದಲ್ಲೇ ದಾಖಲೆ ಬರೆದಿದ್ದಾನೆ. 
 

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತಾ ಹೇಳೋದು ಇದಕ್ಕೆ ನೋಡಿ, ಯಾರ ಸಹಾಯವಿಲ್ಲದೆ, ಕಡಿಮೆ ಬಂಡವಾಳದಲ್ಲಿ ತನ್ನ ಸ್ವಂತ ಶ್ರಮದಿಂದ ತುಂಬಾ ಸಲೀಸಾಗಿ ವಿಶ್ವ ಮಟ್ಟದ ರೆಕಾರ್ಡ್ ಮಾಡಿದ್ದಾನೆ.. 8 ವರ್ಷದ ಈ ದಾಖಲೆ ವೀರನ ಹೆಸರು ಹೋಶಾಂತ್. ಗಂಟೆಗಟ್ಟಲೆ ಕೂತರೂ ಪರಿಹಾರವಾಗದ ರೂಬಿಕ್ಸ್ ಕ್ಯೂಬ್(Rubik Cubes), ರಸ್ತೆ ಮೇಲೆ ಗಮನವಿಟ್ಟರೂ ಬೀಳುವಂತಾಗುವ ಸ್ಕೇಟಿಂಗ್, ಈ ಎರಡೂ ಆಟವನ್ನ ಈ ಪುಟಾಣಿ ಹೋಶಾಂತ್ ಸಾಧಿಸಿ ತೋರಿಸಿದ್ದಾನೆ. ಈ ಪುಟ್ಟ ಬಾಲಕ ಒಂದು ಗಂಟೆ ಹದಿಮೂರು ನಿಮಿಷಕ್ಕೆ ಹತ್ತೊಂಬತ್ತು ವಿಭಿನ್ನ ರೂಬಿಕ್ಸ್ ಕ್ಯೂಬ್ ಆಟ ಆಡಿ ವಿಶ್ವ ದಾಖಲೆ(world record) ಮಾಡಿದ್ದಾನೆ. ಈ ಪುಟ್ಟ ಬಾಲಕ ಯಶವಂತಪುರದ ಡಿವೈನ್ ಇಂಗ್ಲಿಷ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದು, ಶಾಲೆಯಿಂದ ಮನೆಗೆ ಹಾಗೂ ಮನೆಯಿಂದ ಶಾಲೆಗೆ ಹೋಗುವಾಗ ಸಮಯ ಹಾಳು ಮಾಡ್ಬಾರ್ದು ಅಂತಾ ಅಪ್ಪನ ಬೈಕ್ ಹಿಂದೆ ಕುಳಿತು ರೂಬಿಕ್ಸ್ ಕ್ಯೂಬ್ ಪ್ರಾಕ್ಟಿಸ್ ಮಾಡಿದ್ದಾನೆ. ಯೂಟ್ಯೂಬ್ ನೋಡಿಕೊಂಡೇ ಈ ಆಟ ಕಲಿತಿರೊ ಹೋಶಾಂತ್, ಮುಂದಿನ ದಿನಗಳಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಆಡುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡುವ ಕನಸು ಕಾಣ್ತಿದ್ದಾನೆ. ಈ ಪೋರನಿಗೆ ಶಿಕ್ಷಕರು ಬೆಂಬಲ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಗೋಳಗುಮ್ಮಟಕ್ಕಿಲ್ಲ UNESCO ಸ್ಥಾನಮಾನ: ಅಧಿಕಾರಿಗಳ ನಿರ್ಲಕ್ಷ್ಯ..ಪಾರಂಪರಿಕ ಕಟ್ಟಡಕ್ಕಿಲ್ಲ ವಿಶ್ವ ಮನ್ನಣೆ

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more