ಮಳೆ ಹೆಸರಲ್ಲೇ ನಡೀತಿದೆ ರಣರಣ ರಾಜಕಾರಣ.. ಹೇಗಿದೆ ಗೊತ್ತಾ ಘಟಾನುಘಟಿಗಳ ರಣಾರ್ಭಟ..?

ಮಳೆ ಹೆಸರಲ್ಲೇ ನಡೀತಿದೆ ರಣರಣ ರಾಜಕಾರಣ.. ಹೇಗಿದೆ ಗೊತ್ತಾ ಘಟಾನುಘಟಿಗಳ ರಣಾರ್ಭಟ..?

Published : Jul 22, 2024, 05:30 PM IST


ಬಿಟ್ಟೂಬಿಡದ ಮಳೆಯಲ್ಲಿ ನಾಯಕರ ರಾಜಕೀಯ ಜ್ವಾಲಾಗ್ನಿ!
ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಭಾವಿ ನಾಯಕರ ಭೇಟಿ..!
ರಾಜಕೀಯ ರಣೋತ್ಸಾಹ ಹೆಚ್ಚಿಸಿದ ಮಳೆಯಲ್ಲಿ ವಾಕ್ಸಮರ!

ರಾಜ್ಯದ ಜನ ಯಾವ ಮಳೆಗಾಗಿ ಕಾಯ್ತಾ ಇದ್ರೋ ಅಂಥಾ ಮಳೆ(Rain), ಅತಿ ಭೀಕರ ವಾತಾವರಣವನ್ನೇ ಸೃಷ್ಟಿಸಿದೆ. ಅದರಲ್ಲೂ ಕರಾವಳಿ ಭಾಗದಲ್ಲಂತೂ ಮಳೆ ಅಟ್ಟಹಾಸ ಮಿತಿ ಮೀರಿದೆ. ಈ ರಣಮಳೆಗೆ ಅದೆಷ್ಟು ಮನೆಗಳು ನೆಲ ಕಚ್ಚಿವೆಯೋ.. ಅದೆಷ್ಟು ಜನರ ಬದುಕು ಅಕ್ಷರಶಃ ಅತಂತ್ರವಾಗಿದೆಯೋ ಲೆಕ್ಕವೇ ಇಲ್ಲ. ಇಷ್ಟೂ ಕಾಲ ಸದನದಲ್ಲಿ(Assembly session) ಕದನವನ್ನೇ ನಾವೆಲ್ಲರು ನೋಡಿದ್ವಿ. ಬಿಜೆಪಿ(BJP) ಹಾಗೂ ಜೆಡಿಎಸ್(JDS) ನಾಯಕರು ಒಟ್ಟಾಗಿ ಕಾಂಗ್ರೆಸ್ (Congress)ಮೇಲೆ ಎರಗಿದ್ದರು. ಪ್ರತಿದಿನವೂ   ರಾಜ್ಯವನ್ನೇ ಕಂಗೆಡಿಸಿದ ಹಗರಣಗಳ ಬಗ್ಗೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಯ್ತು. ಆ ವೇಳೆ ರಣಾಂಗಣವಾಗಿತ್ತು ವಿಧಾನಸಭಾ ಸದನ. ಆದ್ರೆ ಈಗ, ಆಡಳಿತಾರೂಢ ಪಕ್ಷ ಹಾಗೂ ವಿರೋಧ ಪಕ್ಷಗಳ ಕಾದಾಟಕ್ಕೆ ವೇದಿಕೆ ಶಿಫ್ಟ್ ಆಗಿದೆ. ರಣಮಳೆಯ ರಣಾಂಗಣದಲ್ಲಿ ವಾಗ್ಯುದ್ಧ ಶುರುವಾಗಿದೆ.ಪ್ರವಾಹದಂಥಾ ಪರಿಸ್ಥಿತಿ ಬಂದಾಗ, ಆಪತ್ತಿನಲ್ಲಿರೋ ಜನಕ್ಕೆ ಸಹಾಯ ಮಾಡೋದು.. ಅಲ್ಲಿನ ಸ್ಥಿತಿಗತಿ ಹೇಗಿದೆ ಅಂತ ವಿಚಾರಿಸಿಕೊಳ್ಳೋದು.. ಸಮಸ್ಯೆಗಳಿಗೆಲ್ಲಾ ಸೂಕ್ತ ಪರಿಹಾರ ಕಂಡುಕೊಳ್ಳೋದು ರಾಜಕೀಯ ನಾಯಕರ ಅತಿ ಮುಖ್ಯ ಕರ್ತವ್ಯ.. ಅದು ಸಹಜವೂ ಹೌದು.. ಆದ್ರೆ, ಈ ಬಾರಿ ಮಾತ್ರ, ಈ ಪ್ರವಾಹ ಪ್ರದೇಶಗಳ ಭೇಟಿ ವಿಚಾರದಲ್ಲೂ ಕೂಡ ರಾಜಕಾರಣ ಜೋರಾಗೇ ನಡೀತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ+ಜೆಡಿಎಸ್ ನಡುವೆ ಯುದ್ಧವೇ ಆರಂಭವಾಗಿದೆ.

ಇದನ್ನೂ ವೀಕ್ಷಿಸಿ:  ಮಕ್ಕಳು ಸೆರೆವಾಸಕ್ಕೆ.. ಹೆತ್ತವರು ಮಸಣಕ್ಕೆ.. ಹೆತ್ತವರನ್ನೇ ಕೊಂದ ಅಂಧಾಭಿಮಾನ..!

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more