ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!

ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!

Published : Jan 09, 2026, 11:26 AM IST
ಹೊರ ಜಗತ್ತಿಗೆ ಡಾನ್ ಆಗಿದ್ದ ಜೆಜೆ ನಗರದ ರೌಡಿಶೀಟರ್ ಸೈಯದ್ ಅಸ್ಗರ್, ಎರಡನೇ ಮದುವೆಯಾದ ಕಾರಣಕ್ಕೆ ಮೊದಲ ಪತ್ನಿ ರಿಜ್ವಾನಾಳಿಂದ ಮಚ್ಚಿನೇಟು ತಿಂದಿದ್ದಾನೆ. ಜೀವಭಯದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, 'ನನ್ನ ಹೆಂಡತಿಯಿಂದ ನನ್ನನ್ನು ಕಾಪಾಡಿ' ಎಂದು ಪೊಲೀಸರ ಮುಂದೆ ಗೋಗರೆದಿದ್ದಾನೆ.

ಬೆಂಗಳೂರು (ಜ.07): ಹೊರಗಿನ ಜಗತ್ತಿಗೆ ತಾನು ದೊಡ್ಡ ಡಾನ್, ಹತ್ತಾರು ಕೇಸ್‌ಗಳ ಸರದಾರ ಎಂದು ಫೋಸ್ ಕೊಡುತ್ತಿದ್ದ ರೌಡಿಶೀಟರ್ ಒಬ್ಬ, ಈಗ ತನ್ನ ಪತ್ನಿಯ ಮಚ್ಚಿನೇಟಿಗೆ ಬೆದರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. 'ನನ್ನ ಹೆಂಡತಿಯಿಂದ ನನ್ನನ್ನು ಕಾಪಾಡಿ' ಎಂದು ಈ ರೌಡಿ ಪೊಲೀಸರ ಮುಂದೆ ಗೋಗರೆಯುತ್ತಿರುವುದು ಈಗ ನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಘಟನೆಯ ಹಿನ್ನೆಲೆ:  

ಜೆಜೆ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಸೈಯದ್ ಅಸ್ಗರ್ ಈ ಕಥೆಯ ನಾಯಕ. ಚುನಾವಣೆ ಇರಲಿ, ಹಬ್ಬವಿರಲಿ ಪೊಲೀಸರು ಮೊದಲು ಈತನನ್ನೇ ಕರೆಸಿ ವಾರ್ನಿಂಗ್ ನೀಡಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದರು. ಹತ್ತು ದಿನಗಳ ಹಿಂದಷ್ಟೇ ಬೇಲ್ ಮೇಲೆ ಹೊರಬಂದಿದ್ದ ಈ ರೌಡಿಗೆ ತನ್ನ ಮೊದಲ ಪತ್ನಿ ರಿಜ್ವಾನಾ ಲೇಡಿ ಡಾನ್ ರೂಪದಲ್ಲಿ ದರ್ಶನ ನೀಡಿದ್ದಾಳೆ.

ಇಬ್ಬರ ಹೆಂಡಿರ ಪಾಪದ ಗಂಡ: 

ಅಸ್ಗರ್ ಮೊದಲ ಪತ್ನಿ ರಿಜ್ವಾನಾಳನ್ನು ಬಿಟ್ಟು ನಗ್ಮಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಮೊದಲ ಪತ್ನಿ, ಎರಡನೇ ಪತ್ನಿ ಮತ್ತು ಆಕೆಯ ಕುಟುಂಬದ ಮೇಲೆ ಸದಾ ದಾಳಿ ಮಾಡುತ್ತಿದ್ದಳು. ಪತ್ನಿಯ ಆರ್ಭಟಕ್ಕೆ ಹೆದರಿ ಅಸ್ಗರ್ ಆಕೆಯ ಮನೆಗೆ ಹೋಗುವುದನ್ನೇ ನಿಲ್ಲಿಸಿದ್ದ. ಆದರೆ, ಮೊನ್ನೆ ಮಗನ ಕೈಯಲ್ಲಿ ಫೋನ್ ಮಾಡಿಸಿ "ಅಪ್ಪಾ ಮನೆಗೆ ಬಾ" ಎಂದು ಕರೆಸಿಕೊಂಡ ರಿಜ್ವಾನಾ, ಅಸ್ಗರ್ ಮನೆಗೆ ಕಾಲಿಡುತ್ತಿದ್ದಂತೆ ಮಚ್ಚಿನಿಂದ ಹಲ್ಲೆ ಮಾಡಿದ್ದಾಳೆ.

ಠಾಣೆಯ ಮುಂದೆ ರೌಡಿಯ ಆರ್ತನಾದ

ಮಚ್ಚಿನೇಟಿನಿಂದ ತಲೆ ಮತ್ತು ಮುಖದ ಭಾಗದಲ್ಲಿ ಗಾಯಗೊಂಡ ಅಸ್ಗರ್, ಎರಡನೇ ಪತ್ನಿಯೊಂದಿಗೆ ಜೆಜೆ ನಗರ ಠಾಣೆಗೆ ಬಂದು ರಕ್ಷಣೆ ಕೋರಿದ್ದಾನೆ. "ಹೊರಗಿನವರು ಅಟ್ಯಾಕ್ ಮಾಡಿದ್ರೆ ನೋಡಿಕೊಳ್ಳುತ್ತಿದ್ದೆ, ಆದ್ರೆ ಸ್ವಂತ ಹೆಂಡತಿಯೇ ಮಚ್ಚು ಹಿಡಿದು ಅಟ್ಯಾಕ್ ಮಾಡಿದ್ರೆ ನಾನು ಎಲ್ಲಿಗೆ ಹೋಗಲಿ?" ಎನ್ನುವುದು ಈ ರೌಡಿಯ ಅಳಲು.

ಇತ್ತ ಎರಡನೇ ಹೆಂಡತಿ 'ಮೂರು ದಿನ ಅಲ್ಲಿರಲಿ, ಮೂರು ದಿನ ಇಲ್ಲಿರಲಿ' ಎಂದು ಸಂಧಾನಕ್ಕೆ ಮುಂದಾಗಿದ್ದರೆ, ಮೊದಲ ಪತ್ನಿ ಮಾತ್ರ 'ಆಕೆಯನ್ನು ಬಿಟ್ಟು ಬರಲೇಬೇಕು, ಇಲ್ಲದಿದ್ದರೆ ತಲೆ ಕಡಿಯುವುದು ಗ್ಯಾರಂಟಿ' ಎಂದು ಆವಾಜ್ ಹಾಕಿದ್ದಾಳೆ. ರೌಡಿಶೀಟರ್ ಒಬ್ಬ ಪತ್ನಿಯ ಹೊಡೆತಕ್ಕೆ ಬೆದರಿ ಆಸ್ಪತ್ರೆ ಸೇರಿರುವುದು ವಿಚಿತ್ರವಾದರೂ ಸತ್ಯ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
Read more