ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!

ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!

Published : Jan 09, 2026, 11:26 AM IST
ಹೊರ ಜಗತ್ತಿಗೆ ಡಾನ್ ಆಗಿದ್ದ ಜೆಜೆ ನಗರದ ರೌಡಿಶೀಟರ್ ಸೈಯದ್ ಅಸ್ಗರ್, ಎರಡನೇ ಮದುವೆಯಾದ ಕಾರಣಕ್ಕೆ ಮೊದಲ ಪತ್ನಿ ರಿಜ್ವಾನಾಳಿಂದ ಮಚ್ಚಿನೇಟು ತಿಂದಿದ್ದಾನೆ. ಜೀವಭಯದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, 'ನನ್ನ ಹೆಂಡತಿಯಿಂದ ನನ್ನನ್ನು ಕಾಪಾಡಿ' ಎಂದು ಪೊಲೀಸರ ಮುಂದೆ ಗೋಗರೆದಿದ್ದಾನೆ.

ಬೆಂಗಳೂರು (ಜ.07): ಹೊರಗಿನ ಜಗತ್ತಿಗೆ ತಾನು ದೊಡ್ಡ ಡಾನ್, ಹತ್ತಾರು ಕೇಸ್‌ಗಳ ಸರದಾರ ಎಂದು ಫೋಸ್ ಕೊಡುತ್ತಿದ್ದ ರೌಡಿಶೀಟರ್ ಒಬ್ಬ, ಈಗ ತನ್ನ ಪತ್ನಿಯ ಮಚ್ಚಿನೇಟಿಗೆ ಬೆದರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. 'ನನ್ನ ಹೆಂಡತಿಯಿಂದ ನನ್ನನ್ನು ಕಾಪಾಡಿ' ಎಂದು ಈ ರೌಡಿ ಪೊಲೀಸರ ಮುಂದೆ ಗೋಗರೆಯುತ್ತಿರುವುದು ಈಗ ನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಘಟನೆಯ ಹಿನ್ನೆಲೆ:  

ಜೆಜೆ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಸೈಯದ್ ಅಸ್ಗರ್ ಈ ಕಥೆಯ ನಾಯಕ. ಚುನಾವಣೆ ಇರಲಿ, ಹಬ್ಬವಿರಲಿ ಪೊಲೀಸರು ಮೊದಲು ಈತನನ್ನೇ ಕರೆಸಿ ವಾರ್ನಿಂಗ್ ನೀಡಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದರು. ಹತ್ತು ದಿನಗಳ ಹಿಂದಷ್ಟೇ ಬೇಲ್ ಮೇಲೆ ಹೊರಬಂದಿದ್ದ ಈ ರೌಡಿಗೆ ತನ್ನ ಮೊದಲ ಪತ್ನಿ ರಿಜ್ವಾನಾ ಲೇಡಿ ಡಾನ್ ರೂಪದಲ್ಲಿ ದರ್ಶನ ನೀಡಿದ್ದಾಳೆ.

ಇಬ್ಬರ ಹೆಂಡಿರ ಪಾಪದ ಗಂಡ: 

ಅಸ್ಗರ್ ಮೊದಲ ಪತ್ನಿ ರಿಜ್ವಾನಾಳನ್ನು ಬಿಟ್ಟು ನಗ್ಮಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಮೊದಲ ಪತ್ನಿ, ಎರಡನೇ ಪತ್ನಿ ಮತ್ತು ಆಕೆಯ ಕುಟುಂಬದ ಮೇಲೆ ಸದಾ ದಾಳಿ ಮಾಡುತ್ತಿದ್ದಳು. ಪತ್ನಿಯ ಆರ್ಭಟಕ್ಕೆ ಹೆದರಿ ಅಸ್ಗರ್ ಆಕೆಯ ಮನೆಗೆ ಹೋಗುವುದನ್ನೇ ನಿಲ್ಲಿಸಿದ್ದ. ಆದರೆ, ಮೊನ್ನೆ ಮಗನ ಕೈಯಲ್ಲಿ ಫೋನ್ ಮಾಡಿಸಿ "ಅಪ್ಪಾ ಮನೆಗೆ ಬಾ" ಎಂದು ಕರೆಸಿಕೊಂಡ ರಿಜ್ವಾನಾ, ಅಸ್ಗರ್ ಮನೆಗೆ ಕಾಲಿಡುತ್ತಿದ್ದಂತೆ ಮಚ್ಚಿನಿಂದ ಹಲ್ಲೆ ಮಾಡಿದ್ದಾಳೆ.

ಠಾಣೆಯ ಮುಂದೆ ರೌಡಿಯ ಆರ್ತನಾದ

ಮಚ್ಚಿನೇಟಿನಿಂದ ತಲೆ ಮತ್ತು ಮುಖದ ಭಾಗದಲ್ಲಿ ಗಾಯಗೊಂಡ ಅಸ್ಗರ್, ಎರಡನೇ ಪತ್ನಿಯೊಂದಿಗೆ ಜೆಜೆ ನಗರ ಠಾಣೆಗೆ ಬಂದು ರಕ್ಷಣೆ ಕೋರಿದ್ದಾನೆ. "ಹೊರಗಿನವರು ಅಟ್ಯಾಕ್ ಮಾಡಿದ್ರೆ ನೋಡಿಕೊಳ್ಳುತ್ತಿದ್ದೆ, ಆದ್ರೆ ಸ್ವಂತ ಹೆಂಡತಿಯೇ ಮಚ್ಚು ಹಿಡಿದು ಅಟ್ಯಾಕ್ ಮಾಡಿದ್ರೆ ನಾನು ಎಲ್ಲಿಗೆ ಹೋಗಲಿ?" ಎನ್ನುವುದು ಈ ರೌಡಿಯ ಅಳಲು.

ಇತ್ತ ಎರಡನೇ ಹೆಂಡತಿ 'ಮೂರು ದಿನ ಅಲ್ಲಿರಲಿ, ಮೂರು ದಿನ ಇಲ್ಲಿರಲಿ' ಎಂದು ಸಂಧಾನಕ್ಕೆ ಮುಂದಾಗಿದ್ದರೆ, ಮೊದಲ ಪತ್ನಿ ಮಾತ್ರ 'ಆಕೆಯನ್ನು ಬಿಟ್ಟು ಬರಲೇಬೇಕು, ಇಲ್ಲದಿದ್ದರೆ ತಲೆ ಕಡಿಯುವುದು ಗ್ಯಾರಂಟಿ' ಎಂದು ಆವಾಜ್ ಹಾಕಿದ್ದಾಳೆ. ರೌಡಿಶೀಟರ್ ಒಬ್ಬ ಪತ್ನಿಯ ಹೊಡೆತಕ್ಕೆ ಬೆದರಿ ಆಸ್ಪತ್ರೆ ಸೇರಿರುವುದು ವಿಚಿತ್ರವಾದರೂ ಸತ್ಯ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more